ಲಖನ್ ಜಾರಕಿಹೊಳಿಯನ್ನು ಕಾಂಗ್ರೆಸ್ಗೆ ಕರೆಯಲ್ಲ: ಸತೀಶ್ ಜಾರಕಿಹೊಳಿ
Team Udayavani, Jan 27, 2022, 10:00 PM IST
ಗೋಕಾಕ: ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಕಾಂಗ್ರೆಸ್ಗೆ ಬರುವುದಿಲ್ಲ, ನಾವು ಕರೆಯೋದೂ ಇಲ್ಲ. ಸುಮ್ಮನೇ ಚರ್ಚೆ ಅನವಶ್ಯಕ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಲಖನ್ ಬಿಜೆಪಿಯಲ್ಲಿದ್ದಾರೆ. ಸುಮ್ಮನೇ ಈ ವಿಚಾರ ಹೇಳಿ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ನನ್ನ ಗುರುಗಳು ಎನ್ನುವುದು ಲಖನ್ ವೈಯಕ್ತಿಕ ಹೇಳಿಕೆ. ಇಲ್ಲಿ ಗುಡುಗು-ಸಿಡಿಲು ಮಾಡುತ್ತಾರೆ, ಆದ್ರೆ ಮಳೆ ಮಾತ್ರ ಆಗಲ್ಲ ಎನ್ನುವಂತೆ ಈ ರೀತಿ ಹೇಳಿಕೆ ನೀಡುತ್ತಾರೆ. ಎರಡೂ ಕಡೆ ರಾಜಕೀಯ ಲಾಭ ಪಡೆಯಲು ಈ ರೀತಿ ಹೇಳಿಕೆ ನೀಡುತ್ತಾರೆ. ರಮೇಶ್ ಜಾರಕಿಹೊಳಿ ಸಚಿವರಾಗಿ, ಶಾಸಕರಾಗಿದ್ದರೂ ಗೋಕಾಕನಲ್ಲಿ ಒಂದು ಡಿಗ್ರಿ ಕಾಲೇಜು ಇಲ್ಲ ಎಂದರು.