ಶಿವಮೊಗ್ಗ, ಭದ್ರಾವತಿ ಬಿಟ್ಟು ಉಳಿದೆಡೆ ಅನ್ ಲಾಕ್ 1.0 ನಿರ್ಬಂಧಗಳು ಜಾರಿ : ಈಶ್ವರಪ್ಪ
Team Udayavani, Jun 20, 2021, 2:00 PM IST
ಶಿವಮೊಗ್ಗ : ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಇಂದು(ಜೂನ್ 20)ಮಹತ್ವದ ಸಭೆ ಕರೆದಿದ್ದು, ಅನ್ ವಿಚಾರ ಹಾಗೂ ನಿಯಮಾವಳಿಗಳ ಬಗ್ಗೆ ಮಾತುಕತೆ ನಡೆಸಲಾಯಿತು.
ಸಭೆಯ ಬಳಿಕ ಮಾತನಾಡಿದ ಸಚಿವರು, ಈವರೆಗೆ ಜಿಲ್ಲೆಯ ಜನರು ನಿರೀಕ್ಷೆಗೂ ಮೀರಿ ಸಹಕಾರ ನೀಡಿದ್ದಾರೆ. ಇದೀಗ ಸಾಮಾಜಿಕ ಅಂತರ ಕಾಯ್ದು ಕೊಂಡು ಆಯಾ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ರೇಡಿಯೇಶನ್ ಥೆರಪಿ :ನೀವು ಹೊಂದಿರಬೇಕಾದ ಸಾಮಾನ್ಯ ಜ್ಞಾನ
ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಹಾಗೂ ಬೆಳಗ್ಗೆ 10 ರಿಂದ 2ರ ತನಕ ವ್ಯಾಪಾರಕ್ಕೆ, ಹಾಲು-ತರಕಾರಿ ಸೇರಿದಂತೆ ಅಗತ್ಯ ವಸ್ತು ಖರೀದಿಗೆ 12 ಗಂಟೆಯವರೆಗೆ ಮಾತ್ರ ಅವಕಾಶ, ಸಿಮೆಂಟ್, ಸ್ಟೀಲ್ , ಹಾರ್ಡ್ ವೇರ್ ಶಾಪ್ ಗಳಿಗೆ 2 ಗಂಟೆವರೆಗೆ ಅವಕಾಶ, ಆಹಾರ ಪದಾರ್ಥ ಹೊರತುಪಡಿಸಿ, ಪುಟ್ಬಾತ್ ವ್ಯಾಪಾರಸ್ಥರಿಗೆ ಸಹ ಅವಕಾಶ, ಇದರ ಜೊತೆಗೆ ಗಿರವಿ, ಬಂಗಾರದ ಕೆಲಸ, ಸ್ಟುಡಿಯೋ, ಟೈಲರ್ ಗಳಿಗೂ ಸಹ ಅವಕಾಶ ನೀಡಿದ್ದೇವೆ ಎಂದು ಹೇಳಿದ್ದಾರೆ.
ಇನ್ನು, ಸದ್ಯಕ್ಕೆ ಈ ನಿಯಮಗಳು ಶಿವೊಗ್ಗ ಹಾಗೂ ಭದ್ರಾವತಿ ಎರಡು ತಾಲೂಕುಗಳಿಗೆ ಮಾತ್ರ ಅನ್ವಯವಾಗುತ್ತದೆ. ಉಳಿದಂತೆ ಉಳಿದಂತೆ ಜಿಲ್ಲೆಯಾದ್ಯಂತ ಅನ್ ಲಾಕ್ 1.0 ನಿರ್ಬಂಧಗಳು ಜಾರಿಯಲ್ಲಿರುತ್ತವೆ ಎಂದು ತಿಳಿಸಿದ್ದಾರೆ.
ನಿಯಮ ಉಲ್ಲಂಘಿಸಿದ್ದಲ್ಲಿ ಶಿಸ್ತು ಕ್ರಮ
ಕಲ್ಯಾಣ ಮಂದಿರ ಹಾಗೂ ಸವಿತಾ ಸಮಾಜದವರಿಗೆಅವಕಾಶ ನೀಡಿಲ್ಲ. ಷರತ್ತು ಉಲ್ಲಂಘಿಸಿದ ಅಂಗಡಿ, ಮುಂಗಟ್ಟಿಗೆ ಬೀಗ ಹಾಕಿ, ಕ್ರಮ ತೆಗೆದುಕೊಳ್ಳುತ್ತೇವೆ. ಶಿಸ್ತು ಕ್ರಮಕ್ಕೆ ಅವಕಾಶ ನೀಡಬೇಡಿ. ಈ ಎಲ್ಲಾ ನಿರ್ಧಾರ ಜುಲೈ 5ರ ತನಕ ಅನ್ವಯವಾಗುತ್ತದೆ. ಅಷ್ಟರೊಳಗೆ ಪಾಸಿಟಿವಿಟಿ ರೇಟ್ ಶೇ.5ರೊಳಗೆ ಬಂದರೆ ಇನ್ನೂ ಸ್ವಲ್ಪ ಅನ್ ಲಾಕ್ ಮಾಡ್ತೇತ್ತೇವೆ ಎಮದು ಅವರು ಹೇಳಿದ್ದಾರೆ.
ಇನ್ನು, ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಕೈಗಾರಿಕೆ, ಕಲ್ಯಾಣ ಮಂದಿರ, ಹಾಪ್ ಕಾಮ್ಸ್, ಸವಿತಾ ಸಮಾಜ, ಸಗಟು ತರಕಾರಿ, ಸಗಟು ದಿನಸಿ, ಪಾತ್ರೆ, ಗಿರವಿ, ಫುಟ್ಪಾತ್ ವರ್ತಕರು, ಟೈಲರ್, ಛಾಯಾಗ್ರಾಹಕರು ಮತ್ತಿತರ ವ್ಯಾಪಾರಸ್ಥರು ಹಾಗೂ ಪ್ರತಿನಿಧಿಗಳ ಸಭೆಯಲ್ಲಿ ಭಾಗಿಯಾಗಿ ಸಚಿವರ ಮುಂದೆ ತಮ್ಮ ತಮ್ಮ ಕ್ಷೇತ್ರದ ಸಮಸ್ಯೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : ಧಾರವಾಡ : ಅನ್ ಲಾಕ್ ಮಾಡುವಂತೆ ಜಗದೀಶ್ ಶೆಟ್ಟರ್ ಗೆ ಮನವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
State government: ರಾಜ್ಯ ಸರಕಾರಕ್ಕೆ ಎನ್ಸಿಬಿ ನೋಟಿಸ್?
Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ