ತುಲಾಭಾರ ಆನ್ಲೈನ್ ಬುಕ್ಕಿಂಗ್ಗೆ ಚಾಲನೆ
Team Udayavani, Jan 23, 2019, 12:30 AM IST
ಬೆಳ್ತಂಗಡಿ: ಧರ್ಮಸ್ಥಳ ಕ್ಷೇತ್ರದಲ್ಲಿ ಆನ್ಲೈನ್ ಮೂಲಕ ತುಲಾಭಾರ ಸೇವೆಯನ್ನು ಮುಂಗಡ ಕಾದಿರಿಸುವ ಸೌಲಭ್ಯಕ್ಕೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಸೋಮವಾರ ಕ್ಷೇತ್ರದಲ್ಲಿ ಚಾಲನೆ ನೀಡಿದರು. ಹೇಮಾವತಿ ವೀ. ಹೆಗ್ಗಡೆ, ಡಿ. ಹಷೇìಂದ್ರಕುಮಾರ್, ಸುಪ್ರಿಯಾ ಹಷೇìಂದ್ರಕುಮಾರ್, ಪೂರಣ್ ವರ್ಮ ಉಪಸ್ಥಿತರಿದ್ದರು.
ಭಕ್ತಾದಿಗಳು www.shridharmasthala.org ವೆಬ್ ಸೈಟ್ ಮೂಲಕ ತುಲಾಭಾರ ಸೇವೆಯ ದಿನಾಂಕ ಹಾಗೂ ಇತರ ವಿವರಗಳನ್ನು ಭರ್ತಿ ಮಾಡಿ ಆನ್ಲೈನ್ ಮೂಲಕವೇ ಹಣ ಪಾವತಿಸಬಹುದಾಗಿದೆ. ಸೇವೆಯ ದಿನಾಂಕ ಕಾದಿರಿಸಿದ ಬಳಿಕ ಅದರ ಕುರಿತು ಖಚಿತ ಸಂದೇಶ ರವಾನಿಸಲಾಗುತ್ತದೆ. ಧರ್ಮಸ್ಥಳಕ್ಕೆ ಬಂದಾಗ ಸಂದೇಶದ ವಿವರ ತಿಳಿಸಿ ತುಲಾಭಾರ ಸೇವೆ ಮಾಡಬಹುದಾಗಿದೆ. ತುಲಾಭಾರ ಸೇವೆಗೆ ಆನ್ಲೈನ್ ಕಾದಿರಿಸುವ ಸೌಲಭ್ಯವನ್ನು ಡಿ. ಶ್ರೇಯಸ್ಕುಮಾರ್ ಮತ್ತು ನಿಶ್ಚಲ್ಕುಮಾರ್ ಡಿ.ಮಾರ್ಗದರ್ಶನದಲ್ಲಿ ಬೆಂಗಳೂರಿನ ವೈರ್ಕ್ಯಾಂಪ್ಸಂಸ್ಥೆಯವರು ರೂಪಿಸಿದ್ದಾರೆ.