ಶ್ರೀಕಂಠೇಶ್ವರ ಪಂಚಮಹಾರಥೋತ್ಸವ :ಜೆಸಿಬಿ ಬಳಕೆಯಿಂದ ರಥದ ಗಾಲಿ ಮುಕ್ಕು
Team Udayavani, Mar 21, 2019, 2:09 AM IST
ನಂಜನಗೂಡು: ಮಂಗಳವಾರ ನಡೆದ ಶ್ರೀಕಂಠೇಶ್ವರ ಪಂಚ ಮಹಾರಥೋತ್ಸವ ವೇಳೆ ರಥ ಕದಲಿಸಲು ಜಿಸಿಬಿ ಯಂತ್ರ ಬಳಕೆ ಮಾಡಿದ್ದರಿಂದಾಗಿ 110 ಟನ್ ತೂಕದ ಗೌತಮ ರಥದ ನಾಲ್ಕೂ ಚಕ್ರಗಳು ಮುಕ್ಕಾಗಿದೆ. ಸೋಮವಾರ ಶ್ರೀಕಂಠೇಶ್ವರನನ್ನು ರಥರೂಡನನ್ನಾಗಿಸಿದ ನಂತರ ಭಕ್ತರು ರಥ ಎಳೆಯಲು ಪ್ರಯತ್ನಿಸಿದರು.
ಪುರಾತನ ರಥ ಚಲಿಸದೇ ಇದ್ದಾಗ ಜೆಸಿಬಿ ಯಂತ್ರಗಳನ್ನು ಬಳಸಿದ್ದರ ಪರಿಣಾಮ, ರಥದ ನಾಲ್ಕೂ ಚಕ್ರಗಳು ಮುಕ್ಕಾಗಿವೆ. ಅಷ್ಟಾದರೂ, ರಥದ ಚಲನೆ ಸಾಧ್ಯವಾಗಲೇ ಇಲ್ಲ. ಒಂದೊಂದಾಗಿ ನಾಲ್ಕಾರು ಹಗ್ಗಗಳು ತುಂಡಾದ ನಂತರ ಭಕ್ತರೇ ಪ್ರಯತ್ನ ಪಟ್ಟು ರಥವನ್ನು ಕದಲಿಸಿ ಸರಾಗವಾಗಿ ಎಳೆದು ರಥೋತ್ಸವಕ್ಕೆ ತೆರೆ ಎಳೆದಿದ್ದರು. ವಾರದ ಹಿಂದಷ್ಟೇ ಲಕ್ಷಾಂತರ ರೂ. ವೆಚ್ಚ ಮಾಡಿ, ಎರಡು ಚಕ್ರಗಳನ್ನು ಹೊಸದಾಗಿ ನಿರ್ಮಿಸಿ ರಥಕ್ಕೆ ಅಳವಡಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು