ಲಿಂಗ ಸಹಿತ ಐಕ್ಯರಾದ ನಡೆದಾಡುವ ದೇವರು; ಭಕ್ತ ಸಾಗರದ ಕಣ್ಣೀರು
Team Udayavani, Jan 22, 2019, 2:00 PM IST
ತುಮಕೂರು: ಸೋಮವಾರ ಲಿಂಗೈಕ್ಯರಾದ ಡಾ| ಶಿವಕುಮಾರ ಸ್ವಾಮೀಜಿಗಳ ಸಮಾಧಿ ಐಕ್ಯ ವಿಧಿವಿಧಾನ ಮಂಗಳವಾರ ಲಕ್ಷಾಂತರ ಭಕ್ತ ಸಾಗರ , ನೂರಾರು ಮಠಾಧಿಪತಿಗಳು ಮತ್ತು ಗಣ್ಯಾತಿ ಗಣ್ಯರ ಸಮಕ್ಷಮದಲ್ಲಿ ಮಂಗಳವಾರ ಸಿದ್ಧಗಂಗಾ ಮಠದಲ್ಲಿ ನೆರವೇರಿತು.
ಗೋವಿನ ಸಗಣಿಯಿಂದ ತಯಾರಿಸಲಾದ 10 ಸಾವಿರ ಗಟ್ಟಿ ವಿಭೂತಿಯಿಂದ ಸಮಾಧಿ ಕ್ರಿಯೆ ಮಾಡಲಾಗಿದೆ.900 ಕೆಜಿ ಉಪ್ಪು ,ಮೆಣಸು ಮತ್ತು ಮರಳನ್ನು ಬಳಸಿಕೊಳ್ಳಲಾಗಿದೆ.
ಪುಣ್ಯ ನದಿಗಳ ನೀರಿನಿಂದ ಸ್ನಾನ ಮಾಡಿಸಲಾಗಿದೆ. ಕಾಷಾಯ ವಸ್ತ್ರಗಳ ಧಾರಣೆ ಮಾಡಲಾಯಿತು.
ಸಮಾಧಿಯೊಳಗೆ ಪದ್ಮಾಸನದಲ್ಲಿ ಕೂರಿಸಿ,ಬಾಯಿಯಲ್ಲಿ ಶ್ರೀಗಳು ಹಲವು ವರ್ಷಗಳಿಂದ ಪೂಜಿಸುತ್ತಿದ್ದ ಇಷ್ಟ ಲಿಂಗವನ್ನು ಇರಿಸಲಾಗಿದೆ.
ಹಳೆ ಮಠಕ್ಕೆ ತಾಗಿಕೊಂಡಿರುವಂತೆಯೇ ಉದ್ಧಾನ ಶಿವಯೋಗಿಗಳ ಸಮಾಧಿಯ ಪಕ್ಕದಲ್ಲೇ ಡಾ.ಶಿವಕುಮಾರ ಸ್ವಾಮೀಜಿಯವರ ಸಮಾಧಿ ನಿರ್ಮಾಣ ಮಾಡಲಾಗಿದೆ.
ಅಮೃತ ಶಿಲೆಯಿಂದ ನಿರ್ಮಾಣಮಾಡಲಾದ ಭವ್ಯ ಸಮಾಧಿಯೊಳಗೆ ನಡೆದಾಡುವ ದೇವರು ಐಕ್ಯರಾಗಿದ್ದಾರೆ.
ಶ್ರೀಗಳ ಲಿಂಗ ಶರೀರಕ್ಕೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಕಿರಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳ ಕೈಗಿತ್ತರು ಈ ವೇಳೆ ಸಿದ್ಧಲಿಂಗ ಸ್ವಾಮೀಜಿ ಅವರು ಭಾವುಕರಾಗಿ ಕಣ್ಣೀರಿಟ್ಟರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿದಂತೆ ನೂರಾರು ಮಂದಿ ಪೀಠಾಧಿಪತಿಗಳು ಅಂತಿಮ ಕ್ರಿಯಾ ವಿಧಾನಗಳು ನಡೆಯುವ ವೇಳೆ ಉಪಸ್ಥಿತರಿದ್ದು ನಮಸ್ಕರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್