ರಾಜಕೀಯ ಜನ್ಮ ಕೊಟ್ಟ ಯಾರನ್ನೂ ಸಿದ್ದರಾಮಯ್ಯ ಬದುಕಿಸಿಲ್ಲ: ಛಲವಾದಿ ನಾರಾಯಣಸ್ವಾಮಿ
Team Udayavani, Oct 28, 2021, 3:56 PM IST
ಬೆಂಗಳೂರು: ಕಾಂಗ್ರೆಸ್ ನಲ್ಲಿ ಕೆಲವು ಬೋನ್ ಲೆಸ್ ಲೀಡರ್ ಗಳಿದ್ದಾರೆ. ಸಿದ್ದರಾಮಯ್ಯ ಪೊಲಿಟಿಕಲ್ ಸ್ಕಾರ್ಪಿಯನ್, ರಾಜಕೀಯ ಜನ್ಮಕೊಟ್ಟ ಯಾರನ್ನೂ ಸಿದ್ದರಾಮಯ್ಯ ಬದುಕಿಸಿಲ್ಲ. ದಲಿತರನ್ನು ಮಾತ್ರ ಅಲ್ಲ ಅವರದೇ ಸಮುದಾಯವನ್ನು ಕೂಡಾ ಸಿದ್ದರಾಮಯ್ಯ ಬಿಟ್ಟಿಲ್ಲ ಎಂದು ಬಿಜೆಪಿ ಎಸ್.ಸಿ. ಮೋರ್ಛಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.
“ನೀವು ಯಾವ ಪಾಡಿಗಾಗಿ ಕಾಂಗ್ರೆಸ್ ಸೇರಿದ್ದೀರಿ ಸಿದ್ದರಾಮಯ್ಯ? ಕಾಂಗ್ರೆಸ್ ನಲ್ಲಿರುವ ನಾಯಕರನ್ನು ತುಳಿದು, ಸಂಹಾರ ಮಾಡಿ ಸಿಎಂ ಆದರು. ಸಿದ್ದರಾಮಯ್ಯ ಕಪಟ ರಾಜಕಾರಣಿ” ಎಂದು ಕುಟುಕಿದರು.
ಇದನ್ನೂ ಓದಿ:ಪ್ರವಾಸಿಗರೇ ಎಚ್ಚರ : ಚಿಕ್ಕಮಗಳೂರಿನ ಎತ್ತಿನಭುಜ ಪ್ರವಾಸಿ ತಾಣದಲ್ಲಿವೆ ಕಾಡಾನೆ ಹಿಂಡು
“ನೀವು 250 ಮತಗಳಿಂದ ಗೆದ್ದಾಗಲೇ ನೀವು ಎಷ್ಟು ಕಳಪೆ ನಾಯಕರೆಂದು ನಿಮ್ಮ ಕ್ಷೇತ್ರದ ಜನ ಹೇಳಿದರು. ನಾವು ಮಾತಾಡಿದರೆ ಸಿದ್ದರಾಮಯ್ಯ ಎಲ್ಲಿ ನಮ್ಮನ್ನು ಮುಗಿಸಿಬಿಡುತ್ತಾರೋ ಎಂದು ಯಾವುದೇ ಕಾಂಗ್ರೆಸ್ ನಾಯಕರು ಬಾಯಿ ಬಿಡುತ್ತಿಲ್ಲ” ಎಂದು ಛಲವಾದಿ ನಾರಾಯಣ ಸ್ವಾಮಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?