12 ಸ್ಥಾನ ಗೆದ್ದರೆ ಸಿದ್ದುಗೆ ಚಿನ್ನದುಂಗುರ: ಕಾರಜೋಳ
Team Udayavani, Nov 27, 2019, 3:00 AM IST
ಅಥಣಿ: “ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ 12 ಸ್ಥಾನ ಗೆದ್ದರೆ ಸಿದ್ದರಾಮಯ್ಯ ಅವರಿಗೆ ಒಂದು ತೊಲ ಬಂಗಾರದ ಉಂಗುರ, ರೇಷ್ಮೆ ಪೇಟ ತೊಡಿಸಿ ಅವರನ್ನು ಅಥಣಿ ಬಜಾರ ರಸ್ತೆಯಲ್ಲಿ ಮೆರವಣಿಗೆ ಮಾಡಿಸುತ್ತೇನೆ’ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಬಿಜೆಪಿ ಪ್ರಚಾರ ನಿಮಿತ್ತ ರೋಡ್ ಶೋನಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆ ಮಾತನಾಡಿದರು. ಸಿದ್ದರಾಮಯ್ಯ ಜನತಾ ಪಕ್ಷದಲ್ಲಿದ್ದಾಗ ಸುಳ್ಳು ಹೇಳುತ್ತಿರಲಿಲ್ಲ. ಯಾವಾಗ ಅವರು ಕಾಂಗ್ರೆಸ್ ಸೇರಿದರೋ ಆಗಿನಿಂದ ಸುಳ್ಳು ಹೇಳುವುದನ್ನು ಕಲಿತಿದ್ದಾರೆ ಎಂದು ಛೇಡಿಸಿದರು.