ಗೌರಿ ಹತ್ಯೆ ರೂವಾರಿ ವಾಗ್ಮೋರೆ ಬಂಧನ
Team Udayavani, Jun 13, 2018, 6:00 AM IST
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಮತ್ತೂಂದು ಸ್ವರೂಪ ಪಡೆದಿದ್ದು, ಎಸ್ಐಟಿ ಅಧಿಕಾರಿಗಳು ವಿಜಯಪುರ ಜಿಲ್ಲೆ ಸಿಂಧಗಿಯಲ್ಲಿ ಬಂಧಿಸಿರುವ ಪರಶುರಾಮ್ ವಾಗ್ಮೋರೆ ಸಂಚಿನ ರೂವಾರಿ ಎಂಬುದು ಬಹಿರಂಗ ಗೊಂಡಿದೆ. ಜತೆಗೆ ಆತನೇ ಗೌರಿ ಲಂಕೇಶ್ಗೆ ಗುಂಡಿಕ್ಕಿದ ಶೂಟರ್ ಎಂದೂ ಹೇಳಲಾಗಿದೆ. ಆದರೆ ಪೊಲೀಸರು ಇದನ್ನು ಸ್ಪಷ್ಟಪಡಿಸಿಲ್ಲ. ಪರಶುರಾಮ್ ವಾಗ್ಮೋರೆ (26) ಶ್ರೀರಾಮ ಸೇನೆಯ ಕಾರ್ಯಕರ್ತ. ಟೈಗರ್ ಪಡೆಯ ಸದಸ್ಯ, ಸಂಶೋಧಕ ಡಾ| ಎಂ.ಎಂ. ಕಲಬುರಗಿ ಹತ್ಯೆಯಲ್ಲೂ ಈತನ ಕೈವಾಡ ಇದೆ ಎಂಬ ಶಂಕೆ ಇದೆ. ಇವೆಲ್ಲ ತನಿಖೆ ಬಳಿಕ ಖಚಿತವಾಗ ಬೇಕಿದೆ.
ವಾಗ್ಮೋರೆ ಇದೇ ಪ್ರಕರಣದಲ್ಲಿ ಬಂಧಿತನಾಗಿರುವ ಹೊಟ್ಟೆ ಮಂಜನ ಜತೆ ಗೌರಿ ಹತ್ಯೆಗೂ ಮುನ್ನ ಒಂದು ವಾರ ಬೆಂಗ ಳೂರಿನಲ್ಲಿ ವಾಸ್ತವ್ಯ ಇದ್ದ. ಒಮ್ಮೆ ದ್ವಿಚಕ್ರ ವಾಹನದಲ್ಲಿ ಗೌರಿ ಲಂಕೇಶ್ ಮನೆಯ ಬಳಿ ಸುತ್ತಾಡಿದ್ದ ಬಗ್ಗೆ ಎಸ್ಐಟಿ ಮಾಹಿತಿ ಸಂಗ್ರಹಿಸಿದೆ. ಪರಶುರಾಮ್ ವಾಗ್ಮೋರೆ, ಪ್ರಕರಣದಲ್ಲಿ ಬಂಧಿತರಾಗಿರುವ ಹೊಟ್ಟೆ ಮಂಜ, ಪ್ರವೀಣ್, ಅಮೋಳ್ಕಾಳೆ, ಅಮಿತ್ ದೇಗ್ವೇಕರ್, ಮನೋಹರ್ ದುಂಡಪ್ಪ ಯವಡೆ ಸೇರಿ ಗೌರಿ ಹತ್ಯೆಗೆ ಸಂಚು ರೂಪಿಸಿದ್ದರು. ಗೋವಾದಲ್ಲಿ ನಡೆದಿದ್ದ ಸನಾತನ ಸಂಘಟನೆಯ ಸಭೆಯಲ್ಲಿ ಇವರು ಜತೆ ಸೇರಿದ್ದರು.
ಫೈರಿಂಗ್ ತರಬೇತಿ: ಸಿಂಧಗಿ ತಾಲೂಕಿನ ಬಸವನಗರದಲ್ಲಿ ತಾಯಿಯೊಂದಿಗೆ ವಾಸವಾಗಿದ್ದ ವಾಗ್ಮೋರೆ ಸದಾ ಹಿಂದೂ ಹೋರಾಟಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ. ಧರ್ಮ ರಕ್ಷಣೆಗೆ ಶಸ್ತ್ರ ಸಜ್ಜಿತ ಹೋರಾಟ ಅಗತ್ಯ ಎಂದು ಪ್ರತಿಪಾದಿಸುತ್ತಿದ್ದ. ಬೆಳಗಾವಿಯ ಖಾನಾಪುರ, ಚಾಮರಾಜನಗರ ಕೊಳ್ಳೆಗಾಲದ ಅರಣ್ಯ ಪ್ರದೇಶಗಳಲ್ಲಿ ಫೈರಿಂಗ್ ತರಬೇತಿ ಪಡೆದು ನೈಪುಣ್ಯತೆ ಹೊಂದಿದ್ದ. ಮನೋಹರ್ ಯವಡೆ, ಅಮೋಲ್ ಕಾಳೆ, ಅಮಿತ್ ದೇಗ್ವೇಕರ್ ಹಾಗೂ ಪ್ರವೀಣ್ ಅವರಿಗೂ ಈತನೇ ಫೈರಿಂಗ್ ತರಬೇತಿ ಕೊಟ್ಟಿದ್ದ ಎಂದು ಹೇಳಲಾಗಿದೆ.
ಪರಶುರಾಮ್ ವಾಗ್ಮೋರೆ ಸ್ನೇಹಿತ ಸುನಿಲ್ ಅಗಸ ಎಂಬವನನ್ನೂ ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಹೇಳಲಾಗಿದ್ದು, ಆತ ಸಹ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡು ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪರಶುರಾಮ್ಗೆ ಸಹಾಯ ಮಾಡಿದ್ದಾನೆ ಎನ್ನಲಾಗಿದೆ.
ಪಾಕ್ ಧ್ವಜ ಹಾರಿಸಿದ್ದ: ಶೈಕ್ಷಣಿಕ ಹಂತದಲ್ಲೇ ಹಿಂದೂ ಸಂಘಟನೆ ಶ್ರೀರಾಮಸೇನೆಯೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾಗಿರುವ ಪರಶುರಾಮ್ ಕೋಮು ದ್ವೇಷ ಬಿತ್ತಲು 2012ರಲ್ಲಿ ಸಿಂಧಗಿ ಪಟ್ಟಣದಲ್ಲಿ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಪಾಕಿಸ್ಥಾನ ಧ್ವಜ ಹಾರಾಟ ಪ್ರಕರಣದಲ್ಲಿ ಬಂಧಿತನಾಗಿದ್ದ. ಸದರಿ ಪ್ರಕರಣ ಈಗಲೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.
ನಿಜವಾದ ಶೂಟರ್ “ದಾದಾ’?: ಗೌರಿ ಲಂಕೇಶ್ರನ್ನು ಗುಂಡಿಕ್ಕಿ ಹತ್ಯೆಗೈದಿದ್ದು ನಿಹಾರ್ ಅಲಿಯಾಸ್ ದಾದಾ ಎಂಬಾತ. ಆತ ಮಹಾರಾಷ್ಟ್ರ ಮತ್ತು ಗೋವಾ ಭಾಗದಲ್ಲಿ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ ಎಂದು ಹೇಳಲಾಗಿದೆ.
ಆರೋಪಿ ತಾಯಿ ಆಸ್ಪತ್ರೆಗೆ: ಪರಶುರಾಮ್ ವಾಗ್ಮೋರೆ ಬಂಧನದ ಸುದ್ದಿ ತಿಳಿದು ಕುಟುಂಬ ಸದಸ್ಯರು ಕಂಗಾಲಾಗಿದ್ದು ಎಸ್ಐಟಿ ಪೊಲೀಸರು ಸ್ಪಷ್ಟ ಮಾಹಿತಿ ನೀಡದ ಕಾರಣ ಆತಂಕಗೊಂಡಿದ್ದಾರೆ. ಈ ಮಧ್ಯೆ ಪರಶುರಾಮ್ ಬಂಧನ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಲೇ ಆತನ ತಾಯಿ ಜಾನಕಿಬಾಯಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು 14 ದಿನಗಳ ಕಾಲ ಎಸ್ಐಟಿ ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿದಿದೆ.
ಪರಶುರಾಮ್ಗೂ ಶ್ರೀರಾಮಸೇನೆಗೂ ಸಂಬಂಧವಿಲ್ಲ. ಆತ ನಮ್ಮ ಜತೆ ಇರಲಿಲ್ಲ.
ಪ್ರಮೋದ್ ಮುತಾಲಿಕ್, ಶ್ರೀರಾಮಸೇನೆ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
MUST WATCH
ಹೊಸ ಸೇರ್ಪಡೆ
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ