ಕೈ ಪಕ್ಷಕ್ಕೆ ಮ್ಯಾನೇಜರ್ ಗಳಿದ್ರೆ ಸಾಕು,ಸಕ್ರಿಯ ರಾಜಕಾರಣ ಮುಂದುವರಿಕೆ


Team Udayavani, Jan 29, 2017, 12:36 PM IST

4.jpg

ಬೆಂಗಳೂರು : 46 ವರ್ಷಗಳಿಂದ ನೆಮ್ಮದಿಯಿಂದ ವಾಸವಾಗಿದ್ದ ಸ್ವಂತ ಮನೆಯನ್ನು ತೊರೆಯಬೇಕಾಗಿರುವ ಅನಿವಾರ್ಯತೆ ಎದುರಾಗಿದೆ… ಇದು ಹಿರಿಯ ನಾಯಕ ಎಸ್‌.ಎಂ. ಕೃಷ್ಣ ಅವರು ಕಾಂಗ್ರೆಸ್‌ ತೊರೆದು ಭಾನುವಾರ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ ನೋವಿನ ಮಾತು. 

ಸುದ್ದಿಗೋಷ್ಠಿಯ ಮೊದಲಿಗೆ ನಾನು ಪತ್ರಕರ್ತರೊಂದಿಗೆ ಬೆಳೆದಿದ್ದೇನೆ ಮತ್ತು ಅವರು ನನ್ನನ್ನು ಬೆಳೆಸಿದ್ದಾರೆ. ಕೆಲವರು ನಮ್ಮನ್ನಗಲಿದ್ದಾರೆ ಅವರೆಲ್ಲರನ್ನೂ ನಾನು ನೆನಪಿಸಿಕೊಳ್ಳುತ್ತೇನೆ ಎಂದರು. 

1962 ಅಮೆರಿಕದಿಂದ ವಾಪಾಸ್‌ ಬಂದೆ ಆಗ ದೇಶ ಸಾರ್ವತ್ರಿಕ ಚುನಾವಣೆಗಳಿಗೆ ಸಿದ್ದವಾಗುತ್ತಿದೆ. ನಾನು ಪ್ರತಿಷ್ಠಿತ ಮುಖಂಡರೊಬ್ಬರ ವಿರುದ್ದ ನಾನು ಪ್ರಜಾ ಸಮಾಜವಾದಿ ಪಕ್ಷದಿಂದ ನಿಲ್ಲಬೇಕಾದ ಪರಿಸ್ಥಿತಿ ಬಂತು.ನೆಹರೂ ಅವರು ಪ್ರಚಾರಕ್ಕೆ ಬಂದಿದ್ದರು. ನಾನು ಪಕ್ಷದ ಕಚೇರಿಯಿಂದ ನೋಡುತ್ತಿದೆ ,25 ರಿಂದ 35 ಸಾವಿರ ಜನರು ಅವರನ್ನು ನೋಡಲು  ಸೇರಿದ್ದರು. ಆದರೆ ನಾನು ಹೆದರಲ್ಲಿಲ್ಲ . ಆ ಚುನಾವಣೆಯಲ್ಲಿ ಪ್ರಬಲ ಹೋರಾಟ ಮಾಡಿ  ಜಯಗಳಿಸಿದೆ. ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ  ಆಗ ಕಾಂಗ್ರೆಸ್‌ ಪ್ರತಿಷ್ಠಿತವಾಗಿತ್ತು, ನಾನು ಅಲೆಯನ್ನು ನೆಚ್ಚಿಕೊಂಡು ಬಂದ ನಾಯಕನಲ್ಲ ಎಂದು ಕಾಂಗ್ರೆಸ್‌ಗೆ ಟಾಂಗ್‌ ನೀಡಿದರು. 

1968 ರಲ್ಲಿ 31 ನೇ ವಯಸ್ಸಿನಲ್ಲಿ ಲೋಕಸಭೆಗೆ ಹೋದ ಕಾಲದಲ್ಲಿ ಕೈ ಇಬ್ಟಾಗವಾಯಿತು. ಇಂದಿರಾಗಾಂಧಿ ಅವರ ಅಲ್ಪ ಮತದ ಸರ್ಕಾರವನ್ನು ನಾವೆಲ್ಲರು ಎತ್ತಿ ಹಿಡಿದೆವು . ಇಂದಿರಾ ಅವರೊಂದಿಗೆ ಗಾಢವಾದ ಮೈತ್ರಿ ಹೊಂದುವ ಅವಕಾಶ ಒದಗಿ ಬಂತು. ಇಂದಿರಾ ಮತ್ತು ಪಿಎಸ್‌ಪಿ ಮುಖಂಡರ ನಡುವೆ ರಾಯಭಾರಿಯಾಗಿದ್ದೆ. ಅವರು ಬಹಳ ಗೌರವ ಮತ್ತು ವಿಶ್ವಾಸ ದಿಂದ ನಡೆಸಿಕೊಂಡಿದ್ದರು ಎಂದರು. 

ಪಕ್ಷ ನಿಷ್ಠೆ ಮಾತ್ರ ಎಷ್ಟೇ ಸವಾಲು ಎದುರಾದರೂ ಬದಲಾಗಿಲ್ಲ.ಇಂದು ದೊಡ್ಡ ಸವಾಲು ಎದುರಾಗುತ್ತಿದೆ. ನನಗನ್ನಿಸುತ್ತದೆ ಕಾಂಗ್ರೆಸ್‌ಗೆ ಜನಸಮುದಾಯದ ಲೀಡರ್‌ಗಳು ಬೇಕೊ ಬೇಡವೊ ಎನ್ನುವ ಗೊಂದಲದಲ್ಲಿದೆ. ಅವರಿಗೆ ಪರಿಸ್ಥಿತಿಯನ್ನು ನಿಭಾಯಿಸುವ ಮ್ಯಾನೇಜರ್‌ಗಳು ಇದ್ದರೆ ಸಾಕು ಅನ್ನುವ ತೀರ್ಮಾನಕ್ಕೆ ಬಂದಿದ್ದಾರೆ. 

ದೇಶದಲ್ಲಿ ಎಲ್ಲ ರಾಜಕೀಯ ಪಕ್ಷಗಳಲ್ಲಿ ದ್ವಂದ್ವತೆ ಕಾಣಲಿಕ್ಕೆ ಪ್ರಾರಂಭವಾಗಿದ್ದು ಅವುಗಳನ್ನು ರಾಜಕೀಯ ಪಕ್ಷಗಳು ಮೆಟ್ಟಿ ನಿಲ್ಲಬೇಕಿದೆ. ಯಾವ ಪಕ್ಷದಲ್ಲಿ ಹಿರಿತನಕ್ಕೆ ಬೆಲೆ ಇಲ್ಲವೋ ಅದು ಒಳ್ಳೆಯದಲ್ಲ , ಎಲ್ಲಾ ಪಕ್ಷಗಳು ಹಿರಿತನಕ್ಕೆ ಬೆಲೆ ನೀಡಬೇಕು ಹಾಗಂತ ಅವರದ್ದೇ ಪಾಲಿಸಬೇಕೆಂದು ಹೇಳುವುದಿಲ್ಲ ಎಂದರು. 

ಇಂದಿರಾ ಗಾಂಧಿ ಅವರ ಶಕೆ ಮುಗಿದ ಬಳಿಕ ರಾಜೀವ್‌ ಗಾಂಧಿ ಅವರ ಶಕೆ ಪ್ರಾರಂಭವಾಯಿತು. ನನ್ನನ್ನು ಕೇಂದ್ರ ಮಂತ್ರಿಯನ್ನಾಗಿ ಮಾಡಿದ್ದೇ ಅವರು .ರಾಜೀವ್‌ ಗಾಂಧಿ ಅವರ ಕೊಡುಗೆ ಅಪಾರ ,ಅವರು ಹತ್ತಾರು ವರ್ಷ ನಮ್ಮೊಂದಿಗೆ ಇರಬೇಕಾಗಿತ್ತು ಆದರೆ ವಿಧಿಯ ಲಿಖೀತ ಬೇರೆಯೇ ಆಗಿತ್ತು ಎಂದರು.

ಸಾರ್ವಜನಿಕ ಜೀವನದಲ್ಲಿ ರಾಗ ದ್ವೇಷಗಳನ್ನು ದೂರ ಇಡಬೇಕಾದುದ್ದು ಅವಶ್ಯ , ಅಧಿಕಾರ ಪಡೆದ ಬಳಿಕ ಎಲ್ಲ ಸಮಾಜಗಳನ್ನು ಒಂದೇ ದೃಷ್ಟಿಯಿಂದ ನೋಡಬೇಕು ಎಂದರು.  

ನನಗೆ ನೋವಾದದ್ದು ವಯಸ್ಸನ್ನು ಕಾರಣವನ್ನಾಗಿ ಮಾಡಿಕೊಂಡು ಒಬ್ಬ ನಿಷ್ಠಾವಂತ ಕಾಂಗ್ರೆಸ್‌ ಕಾರ್ಯಕರ್ತನನ್ನು ಸೈಡ್‌ ಲೈನ್‌ ಮಾಡುವುದು ಎಷ್ಟು ಸೂಕ್ತ ಎನ್ನುವ ಪ್ರಶ್ನೆ ನನ್ನನ್ನು ಕಾಡುತ್ತಲೆ ಇದೆ  ಎಂದು ನೋವು ತೋಡಿಕೊಂಡರು. 

ವಯಸ್ಸು ನಿಮ್ಮ ಮನೋಸ್ಥಿತಿಯಲ್ಲಿ ನಿಲ್ಲುತ್ತದೆ. ಕೆಲವರು 40 ರಲ್ಲಿ 80 ವ ವಯಸ್ಸಿನಂತಿರಬಹುದು. ಇನ್ನು ಕೆಲವರು 80 ರ ಗಡಿಯಲ್ಲಿ ಚುರುಕಾಗಿರಬಹುದು. ನನ್ನ ನಡೆದಾಟದಲ್ಲೂ ನಿಧಾನಗತಿ ಬಂದಿದೆ. ಪ್ರಾಯ ಎನ್ನುವಂತಹದ್ದು ತರತಕ್ಕಂತಹ ಪ್ರಾಕೃತಿಕ ಬದಲಾವಣೆ ಎಂದರು.  

 ಪ್ರತಿಯೊಬ್ಬರಿಗೂ ಸ್ವಾಭಿಮಾನ, ಆತ್ಮಗೌರವ ಎಲ್ಲರಿಗೂ ಅಮೂಲ್ಯವಾದುದ್ದು , ತಲೆಮಾರುಗಳು ಬದಲಾದರೂ ಮೌಲ್ಯಗಳು ಬದಲಾಗುವುದಿಲ್ಲ ಎಂದರು. 

ನನಗೆ ಸೋನಿಯಾ ಗಾಂಧಿ ಅವರು ಅಪಾರ ಗೌರವ ನೀಡಿದ್ದಾರೆ. ಅವರ ಆರೋಗ್ಯ ಸುಧಾರಿಸಲಿ ಎನ್ನುವುದು ನನ್ನ ಪ್ರತಿನಿತ್ಯದ ಪ್ರಾರ್ಥನೆ. ನನಗೆ ಕಾಂಗ್ರೆಸ್‌ ಪಕ್ಷ ಎಲ್ಲವನ್ನೂ ಕೊಟ್ಟಿದೆ.ಈಗ ನಾನು ಪಕ್ಷವನ್ನು ತೊರೆಯುವ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದರು. 

ನಿವೃತ್ತಿ ಎನ್ನುವಂತಹ ಪದ ನನ್ನ ಡಿಕ್ಷನರಿಯಲ್ಲೇ ಇಲ್ಲ 

ಕೆಲವರಿಗೆ ನನ್ನನ್ನು ರಾಜಕೀಯದಿಂದ ನಿವೃತ್ತಿ ಮಾಡಬೇಕೆಂಬ ಉದ್ದೇಶ ಇರಬೇಕು. ಆದರೆ ನಾನು ನಿವೃತ್ತಿಯಾಗುವುದೇ ಇಲ್ಲ ಎಂದರು. 

ರಾಹುಲ್‌ ಗಾಂಧಿ ಬಗ್ಗೆ ಕೇಳಿದಾಗ ನಾನು ಉಪಾಧ್ಯಕ್ಷರ ವಿಚಾರದಲ್ಲಿ ಮಾತನಾಡುವುದಿಲ್ಲ , ಅಧ್ಯಕ್ಷರ ವಿಚಾರದಲ್ಲಿ ಮಾತನಾಡುತ್ತೇನೆ ಎಂದರು. 

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.