ಕಳ್ಳಸಾಗಣೆ ಯತ್ನ: 2.8 ಕೆ.ಜಿ. ಚಿನ್ನ ವಶ
Team Udayavani, Jul 6, 2018, 11:57 AM IST
ಬೆಂಗಳೂರು: ದೇಶದೊಳಕ್ಕೆ 2.8 ಕೆ.ಜಿ.ಯಷ್ಟು ಚಿನ್ನ ಕಳ್ಳಸಾಗಣೆ ಮಾಡುವ ದುಷ್ಕರ್ಮಿಗಳ ಯತ್ನವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಿಫಲಗೊಳಿಸಿದ್ದಾರೆ. ಜತೆಗೆ, 87.69 ಲಕ್ಷ ರೂ. ಮೊತ್ತದ 2.8 ಕೆ.ಜಿ. ಚಿನ್ನವನ್ನೂ ವಶಪಡಿಸಿಕೊಂಡಿದ್ದಾರೆ.
ಕಸ್ಟಮ್ಸ್ ಪ್ರದೇಶ ಅಥವಾ ಇತರೆಡೆಯ ಶೌಚಾಲಯಗಳಲ್ಲಿ ಅಥವಾ ಪ್ರಾರ್ಥನಾ ಕೊಠಡಿಯಲ್ಲಿ ಚಿನ್ನವನ್ನು ಅವಿತಿಟ್ಟು, ದೇಶದೊಳಕ್ಕೆ ಚಿನ್ನ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಸುಳಿವು ಅಧಿಕಾರಿಗಳಿಗೆ ಸಿಕ್ಕಿತ್ತು. ಹೀಗಾಗಿ ಕಸ್ಟಮ್ಸ್ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಮೇಲೆ ನಿಗಾ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಶೌಚಾಲಯವೊಂದರ ಕಸದ ಬುಟ್ಟಿಯಲ್ಲಿ ತಡಕಾಡಿದಾಗ, ಬುಟ್ಟಿಯೊಳಗಿನ ಕವರ್ನಲ್ಲಿ ಅಡಗಿಸಿಡಲಾದ ಕಪ್ಪುಬಣ್ಣದ ಪಾಲಿಥೀನ್ ಚೀಲವೊಂದು ಕಂಡುಬಂದಿದೆ. ಅದರಲ್ಲಿ ಬರೋಬ್ಬರಿ 2.8 ಕೆ.ಜಿ. ಚಿನ್ನದ ಆಭರಣಗಳನ್ನು ಬಿಡಿಬಿಡಿಯಾಗಿ ಕಪ್ಪುಬಣ್ಣದ ಟೇಪ್ ಮೂಲಕ ಸುತ್ತಿಡಲಾಗಿತ್ತು.
ಪ್ರತಿಯೊಂದು ಟೇಪ್ ಅನ್ನು ಬಿಡಿಸಿದಾಗ, ಒಳಗೆ 5 ಚಿನ್ನದ ಸರಗಳು ಹಾಗೂ ಒಂದು ಕಡಗ ಪತ್ತೆಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 87.69 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಕುರಿತು ತನಿಖೆ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ