ರೆಸಾರ್ಟ್ ರಾಜಕೀಯಕ್ಕೆ ಕೆಲವು ಶಾಸಕರ ಅತೃಪ್ತಿ
Team Udayavani, Jan 19, 2019, 1:30 AM IST
ಬೆಂಗಳೂರು: ಬಿಜೆಪಿಯವರ ರೆಸಾರ್ಟ್ ರಾಜಕೀಯ ವಿರೋಧಿಸಿ ಈಗ ನಾವೇ ರೆಸಾರ್ಟ್ಗೆ ಹೋದರೆ ತಪ್ಪು ಸಂದೇಶ ರವಾನೆ ಮಾಡಿದಂತಾಗುತ್ತದೆ ಎಂದು ಕಾಂಗ್ರೆಸ್ನ ಕೆಲ ಶಾಸಕರು ಪಕ್ಷದ ನಾಯಕರ ನಿರ್ಧಾರದ ವಿರುದಟಛಿ ಅಸಮಾಧಾನ ಹೊರ ಹಾಕಿದ್ದಾರೆ. ಪಕ್ಷದ ನಾಯಕರ ಆದೇಶದಂತೆ ಒಂದು ದಿನದ ಶಾಸಕಾಂಗ ಸಭೆಗೆ ಆಗಮಿಸಿ, ಈಗ ಏಕಾಏಕಿ ರೆಸಾರ್ಟ್ಗೆ ತೆರಳುವಂತೆ ಸೂಚಿಸಿರುವುದಕ್ಕೆ ಕೆಲವು ಶಾಸಕರು ಮನಸಿಲ್ಲದೇ ಅನಿವಾರ್ಯವಾಗಿ ರೆಸಾರ್ಟ್ಗೆ ತೆರಳಿದರು. ಕೆಲವು ಶಾಸಕರು ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳನ್ನು ನಿಗದಿ ಮಾಡಿದ್ದು, ಈಗಾಗಲೇ ನಿಗದಿಯಾಗಿದ್ದ ಕಾರ್ಯಕ್ರಮಗಳನ್ನು ರದ್ದುಗೊಳಿಸುವಂತೆ ಆಪ್ತರಿಗೆ ಸೂಚಿಸಿದರು. ದಿಢೀರನೆ ತೆಗೆದುಕೊಂಡಿರುವ ಈ ತೀರ್ಮಾನದಿಂದ ಮತ್ತೆ ಕ್ಷೇತ್ರಕ್ಕೆ ಯಾವಾಗ ಹೋಗುತ್ತೇವೆ ಎನ್ನುವ ಬಗ್ಗೆಯೂ ಶಾಸಕರಿಗೆ ಸ್ಪಷ್ಟ ಸೂಚನೆ ನೀಡದಿರುವುದರಿಂದ ಬೇಸರದಿಂದಲೇ ರೆಸಾರ್ಟ್ಗೆ ತೆರಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ
ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ
2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK