ಸ್ಪೀಕರ್ ಪರೋಕ್ಷ ಚಾಟಿ
Team Udayavani, Jul 16, 2019, 3:00 AM IST
ಬೆಂಗಳೂರು: ಶಾಸಕರ ರಾಜೀನಾಮೆ ಅಂಗೀಕಾರ ವಿಚಾರದಲ್ಲಿ ತಮ್ಮ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿ, ಹೇಳಿಕೆಗಳನ್ನು ನೀಡುತ್ತಿರುವ ಪ್ರತಿಪಕ್ಷ ನಾಯಕರು ಹಾಗೂ ಶಾಸಕರ ವಿರುದ್ಧ ಸ್ಪೀಕರ್ ರಮೇಶ್ಕುಮಾರ್ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಸೋಮವಾರ ವಿಶ್ವಾಸಮತ ಯಾಚನೆಗೆ ಸಮಯ ನಿಗದಿ ಕುರಿತು ಮಾಹಿತಿ ನೀಡುವ ಸಂದರ್ಭದಲ್ಲಿ, ವಿಶ್ವಾಸಮತ ಸೋಲುತ್ತಾ? ಗೆಲ್ಲುತ್ತಾ ಎಂಬುದು ಆ ದಿನ ಗೊತ್ತಾಗಲಿದೆ. ಆದರೆ, ನನ್ನ ಕಾರ್ಯನಿರ್ವಹಣೆ ಸಂಬಂಧ ಕೆಲವರು ಬಳಸುತ್ತಿರುವ ಭಾಷೆ ಬಗ್ಗೆ ಜಾಗೃತಿ ಇರಲಿ.
ನಾನು ನಿಯಮಾವಳಿ ಬಿಟ್ಟು ಏನೂ ಮಾಡುವುದಿಲ್ಲ ಹಾಗೂ ಯಾರ ಒತ್ತಡಕ್ಕೂ ಮಣಿಯುವುದೂ ಇಲ್ಲ. ನನ್ನ ಮೇಲೆ ತಕ್ಕಡಿ ಇದೆ. ಸಂವಿಧಾನದ ಹಾಗೂ ಜನರ ಆಶಯ ಈಡೇರಿಕೆ ನನಗೆ ಮುಖ್ಯ. ಸಾಕಷ್ಟು ಜನ ತಮ್ಮ ಜೀವನ ಮುಡಿಪಾಗಿಟ್ಟು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಕೊಟ್ಟಿದ್ದಾರೆ.
ನಾವು ಇದನ್ನು ಫುಟ್ಬಾಲ್ ಆಡುವುದು ಬೇಡ ಎಂದು ಸೂಕ್ಷ್ಮವಾಗಿ ಹೇಳಿದರು. ನಾನು ಸ್ಪೀಕರ್ ಆಗಿ ಅಸಹಾಯಕನಾಗಿರಬಹುದು. ಆದರೆ, ನನಗೂ ಮಾತನಾಡಲು ಬರುತ್ತದೆ. ಆದರೆ, ನಾವಿರುವ ಚೌಕಟ್ಟು ಮೀರಬಾರದು ಎಂದು ಪರೋಕ್ಷ ಎಚ್ಚರಿಕೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!