ಬಸವಣ್ಣನ ಐಕ್ಯಮಂಟಪ ದುರಸ್ತಿ ಕಾಮಗಾರಿ ಆರಂಭ
Team Udayavani, Oct 13, 2019, 3:05 AM IST
ಕೂಡಲಸಂಗಮ: ಬಸವಣ್ಣನವರ ಐಕ್ಯ ಮಂಟಪ ದುರಸ್ತಿ ಕಾಮಗಾರಿ ಶನಿವಾರ ಆರಂಭಗೊಂಡಿದೆ. ಬಸವಣ್ಣನವರು ಲಿಂಗೈಕ್ಯರಾದ ಸ್ಥಳದ ಲಿಂಗಕ್ಕೆ 1.5/1.3 ಮೀಟರ್ ಅಳತೆಯ ರಕ್ಷಾಕವಚ, ಮಂಟಪಕ್ಕೆ 3.2 ಉದ್ದ-ಅಗಲ, 4 ಮೀಟರ್ ಎತ್ತರದ ರಕ್ಷಾ ಕವಚ ಅಳವಡಿಸಲಾಯಿತು.
ರಕ್ಷಾ ಕವಚ ಸ್ಟೀಲ್ನಿಂದ ಕೂಡಿದ್ದು, ಲಿಂಗಕ್ಕೆ ಬಟ್ಟೆ ಸುತ್ತಿ ರಕ್ಷಾ ಕವಚ ನಿರ್ಮಿಸಿ, ಥರ್ಮಾ ಕೋಲ್ ಬಾಲ್ಗಳನ್ನು ಹಾಕಲಾಗಿದೆ. 87 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸುತ್ತಿರುವ 4 ತಿಂಗಳ ಅವ ಧಿಯ ಕಾಮಗಾರಿ ಇದಾಗಿದ್ದು, ನುರಿತ 50 ಕಾರ್ಮಿಕರ ತಂಡ ಬಂದಿದೆ.
ಹಗಲು, ರಾತ್ರಿ ಕಾರ್ಯ ನಿರ್ವಹಿಸಿ 2 ತಿಂಗಳಲ್ಲಿ ಮುಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಗುತ್ತಿಗೆದಾರ ಎಂಜಿನಿಯರ್ ಕಾರ್ತಿಕ ಬಡಿಗೇರ ತಿಳಿಸಿದ್ದಾರೆ. ಬಸವಣ್ಣನ ಐಕ್ಯಮಂಟಪದ ಬಾವಿಯ ಒಳಭಾಗದ ಗೋಡೆ, ಮೆಟ್ಟಿ ಲಿನ ಕೆಳಭಾಗ, ಮೇಲ್ಛಾವಣಿ ಶಿಥಿಲ ಗೊಂಡ ಪರಿಣಾಮ ಮೇ 22ರಿಂದ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್