ಸಂಶೋಧಕರ ತಂಡದಲ್ಲಿ ರಾಜ್ಯದ ವಿಜ್ಞಾನಿ
Team Udayavani, Mar 17, 2020, 3:04 AM IST
ಹಾಸನ: ಕೊರೊನಾಗೆ ಔಷಧಿ ಕಂಡು ಹಿಡಿಯುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯಿಂದ ಪ್ರಯತ್ನ ನಡೆದಿದೆ. ಐರೋಪ್ಯ ರಾಷ್ಟ್ರಗಳೂ ಕೊರೊನಾಗೆ ಔಷಧಿ ಸಂಶೋಧನೆಗೆ ಮುಂದಾಗಿದ್ದು, 10 ಸಂಶೋಧಕರ ತಂಡ ರಚಿಸಿವೆ. ಯುರೋಪಿಯನ್ ಟಾಸ್ಕ್ಫೋರ್ಸ್ ಫಾರ್ ಕೊರೊನಾ ವೈರಸ್ ತಂಡದಲ್ಲಿ ಕರ್ನಾಟಕದ ವಿಜ್ಞಾನಿ ಮಹದೇವ ಪ್ರಸಾದ್ ಕೂಡ ಒಬ್ಬರು.
ಈಗ ಅವರು ಬೆಲ್ಜಿಯಂ ಯೂನಿವರ್ಸಿಟಿ ಆಫ್ ಲೆವಿನ್ನಲ್ಲಿ ಕಾರ್ಯ ನಿರ್ವಹಿಸುತ್ತಾ ಪತ್ನಿ, ಪುತ್ರನೊಂದಿಗೆ ಬೆಲ್ಜಿಯಂ ಲೆವಿನ್ ನಗರದಲ್ಲಿ ನೆಲೆಸಿದ್ದಾರೆ. ಮಹದೇವ ಪ್ರಸಾದ್ ಮೂಲತಃ ಹಾಸನ ಜಿಲ್ಲೆ ಅರಕಲಗೂಡು ಪಟ್ಟಣದವರು. ಹೆಂಟಗೆರೆ ರಸ್ತೆಯ ನಿವಾಸಿ ಜವರಪ್ಪ ಮತ್ತು ರತ್ನಮ್ಮ ಅವರ ಮೂವರು ಪುತ್ರರಲ್ಲಿ ಮಹದೇವಪ್ರಸಾದ್ ಹಿರಿಯರು.
ಅವರ ಸಹೋದರ ಕೋಮಲ್ ಕುಮಾರ್ ಫಿನ್ಲ್ಯಾಂಡ್ನಲ್ಲಿ ವಿಜ್ಞಾನಿ. ಮತ್ತೂಬ್ಬ ಸಹೋದರ ಗಿರೀಶ್ ಬ್ಯುಸೆನೆಸ್ ಮಾಡಿಕೊಂಡು ಮೈಸೂರಿನಲ್ಲಿ ನೆಲೆಸಿದ್ದಾರೆ. ರತ್ನಮ್ಮ ಅವರು ಮೈಸೂರಿನಲ್ಲಿ ಪುತ್ರನೊಂದಿಗಿದ್ದಾರೆ.ಕನ್ನಡ ಮಾಧ್ಯಮದಲ್ಲಿಯೇ ಪ್ರೌಢ ಶಿಕ್ಷಣ ಪಡೆದ ಮಹದೇವ ಪ್ರಸಾದ್ ಅರಕಲಗೂಡಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದ ನಂತರ ಹಾಸನದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಶಿಕ್ಷಣ ಪಡೆದಿದ್ದಾರೆ.
ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಬಯೋಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ, ಅದೇ ವಿಷಯದಲ್ಲಿ ಪಿಎಚ್ಡಿ ಪದವಿಯನ್ನೂ ಪಡೆದ ಅವರು ಕಿರಿಯ ವಯಸ್ಸಿನಲ್ಲಿಯೇ ಪಿಎಚ್ಡಿ ಪದವಿ ಪಡೆದು 5 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
Politics: ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್
D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್
Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್
Ponnampet; ಹುಲಿ ದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ
MUST WATCH
ಹೊಸ ಸೇರ್ಪಡೆ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
Politics: ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್