ಶಬರಿಮಲೆ ತೀರ್ಪಿಗೆ ಜಯಮಾಲಾ ಹರ್ಷ; ಸಚಿವೆ ಹೇಳಿದ್ದೇನು ?
Team Udayavani, Sep 28, 2018, 12:47 PM IST
ಬೆಂಗಳೂರು: ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸುಪ್ರೀಂ ಕೋರ್ಟ್ನ ಐತಿಹಾಸಿಕ ತೀರ್ಪನ್ನು ಸಚಿವೆ ಜಯಮಾಲಾ ಅವರು ಸ್ವಾಗತಿಸಿ ಸಂಭ್ರಮ ಹೊರಹಾಕಿದ್ದಾರೆ.
ತೀರ್ಪು ಹೊರ ಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಯಮಾಲಾ ನಾನು ಮಹಿಳೆಯಾಗಿ ಹುಟ್ಟಿದ್ದಕ್ಕೆ ಸಾರ್ಥಕವಾಯಿತು. ಸಂವಿಧಾನ ಬರೆದವರಿಗೆ ನನ್ನ ಕೋಟಿ ಕೋಟಿ ನಮನಗಳು. ಇದೊಂದು ಐತಿಹಾಸಿಕ ಕ್ಷಣ ಎಂದು ಸಂತಸ ಹೊರ ಹಾಕಿದರು.
ದೇವರು ನಮಗೆ ಎಂದಿಗೂ ತಾರತಮ್ಯ ಮಾಡಿಲ್ಲ.ಆದರೆ ತಾರತಮ್ಯ ಧೋರಣೆಯಿಂದ ಮಹಿಳೆಯರು ತೀವ್ರವಾಗಿ ನೊಂದುಕೊಂಡಿದ್ದರು ಎಂದರು.
1987 ರಲ್ಲಿ ಶಬರಿಮಲೆ ದೇವಾಲಯದ ಗರ್ಭಗುಡಿಯನ್ನು ನಾನು ಪ್ರವೇಶಿಸಿದ್ದೆ ಎಂದು ಹೇಳಿಕೊಂಡಿದ್ದ ನಟಿ ಜಯಮಾಲಾ ವಿರುದ್ದ ಭಾರೀ ಟೀಕೆಗಳೂ ಕೇಳಿ ಬಂದಿದ್ದವು.