ಸುರಂಗದಲ್ಲೂ “ಪವನ್‌ಸಟ್‌’ ವಿಮಾನ ಕಣ್ಗಾವಲು


Team Udayavani, Feb 18, 2017, 6:34 AM IST

17-STATE-1.jpg

ಬೆಂಗಳೂರು: ಈ ಪುಟ್ಟ ವಿಮಾನ ನೆಲದ ಮೇಲೆ ಮಾತ್ರವಲ್ಲ, ಸುರಂಗದೊಳಗೆ ಅಡಗಿರುವ ಶತ್ರುಗಳ ಮೇಲೂ ಕಣ್ಗಾವಲು ಇಡುತ್ತದೆ. ಎಲ್ಕಂಪೊನಿಕ್ಸ್‌ ಏರೋಬ್‌ ಟೆಕ್ನಾಲಜೀಸ್‌ ಪ್ರೈ.ಲಿ. ಸಂಸ್ಥೆಯು ಅಭಿವೃದ್ಧಿಪಡಿಸಿರುವ ಸಣ್ಣ ಗಾತ್ರದ “ಪವನ್‌ಸಟ್‌’ ವಿಮಾನ ನೆಲದಡಿ ಅಡಗಿರುವ ಶತ್ರುಗಳ ಚಲನ-ವಲನದ ಮೇಲೂ ನಿಗಾ ಇಡಲಿದೆ.

ಈ ವಿಮಾನ ಮಾದರಿಯನ್ನು ವೈಮಾನಿಕ ಪ್ರದರ್ಶನ “ಏರೋ ಇಂಡಿಯಾ’ದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದು ನೋಡುಗರ ಗಮನ ಸೆಳೆಯುತ್ತಿದೆ. ನೆಲದಿಂದ ಸುಮಾರು 3 ಮೀಟರ್‌ ಒಳಗೆ ಶತ್ರುಗಳು ಅಡಗಿಸಿಟ್ಟಿರುವ ಲೋಹದ ವಸ್ತುಗಳು ಅಥವಾ ಲೋಹದ ವಸ್ತುಗಳನ್ನು ಹೊತ್ತು ನುಸುಳುವ ಶತ್ರುಗಳನ್ನು ಈ ಪವನ್‌ಸಟ್‌ ವಿಮಾನ ಪತ್ತೆಹಚ್ಚಲಿದೆ. ಈಚೆಗೆ ಅಭಿವೃದ್ಧಿಪಡಿಸಿದ ಈ ವಿಮಾನವನ್ನು ಈಗ ಭಾರತೀಯ ಭದ್ರತಾ ಪಡೆಯಲ್ಲಿ ಬಳಸಿಕೊಳ್ಳಲು ರಕ್ಷಣಾ ಇಲಾಖೆ ಆಸಕ್ತಿ ತೋರಿಸಿದೆ ಎಂದು ಎಲ್ಕಂಪೊನಿಕ್ಸ್‌ ಗ್ರೂಪ್‌ ನ ಯೋಜನಾ ಸಲಹೆಗಾರ್ತಿ ರಿಚಾ ಶರ್ಮಾ ತಿಳಿಸಿದ್ದಾರೆ.

ಲೀಟರ್‌ಗೆ 110 ಕಿ.ಮೀ. ಹಾರಾಟ!: ಪಠಾಣ್‌ ಕೋಟ್‌ ಭಾರತೀಯ ವಾಯುನೆಲೆ ಮೇಲೆ ಉಗ್ರರ ದಾಳಿ ನಡೆಯಿತು. ಆ ಉಗ್ರರು ನೆಲದಡಿ ಇರುವ ಪೈಪ್‌ಗ್ಳ ಮೂಲಕವೇ ನುಸುಳಿದ್ದರು. ಇದರ ಹಿನ್ನೆಲೆಯಲ್ಲಿ ಸುರಂಗದಲ್ಲಿರುವ ಲೋಹದ ವಸ್ತುಗಳನ್ನೂ ಪತ್ತೆಹಚ್ಚು ಈ ಸಣ್ಣ ಮಾದರಿಯ ವಿಮಾನವನ್ನು ಅಭಿವೃದ್ಧಿಪಡಿಸಲಾಗಿದೆ. ಈ ವಿಮಾನ ಅತ್ಯಂತ ಹಗುರವಾಗಿದ್ದು, 15 ಕೆಜಿ ತೂಕ ಇದೆ. 12 ಕೆಜಿಯಷ್ಟು ವಸ್ತುಗಳನ್ನು ಆಗಸಕ್ಕೆ ಹೊತ್ತೂಯ್ಯುವ ಸಾಮರ್ಥ್ಯ ಹೊಂದಿದೆ. ಸುಮಾರು ಏಳು ಸಾವಿರ ಮೀಟರ್‌ನಷ್ಟು ದೂರ ಹಾರಾಟ ನಡೆಸಬಲ್ಲದು. ಒಂದು ಲೀಟರ್‌ ಇಂಧನದಿಂದ 110 ಕಿ.ಮೀ. ಹಾರಾಟ ನಡೆಸುತ್ತದೆ. ವಿಮಾನದಲ್ಲಿ ಸಿಂಥೆಟಿಕ್‌ ಅಪರ್ಚರ್‌ 
ರೆಡಾರ್‌ (ಎಸ್‌ಎಆರ್‌) ಅಳವಡಿಸಿದ್ದು, ಇದರ ಸಹಾಯದಿಂದ ನೆಲದಿಂದ ಮೂರು ಮೀಟರ್‌ ಒಳಗಿರುವ ಲೋಹದ ವಸ್ತುಗಳನ್ನು
ಕಂಡುಹಿಡಿಯುತ್ತದೆ. ಗಂಟೆಗೆ 180 ಕಿ.ಮೀ. ವೇಗದಲ್ಲಿ ಈ ವಿಮಾನ ಹಾರುತ್ತದೆ. ನಿರಂತರ 12 ಗಂಟೆ ಇದು ಕಾರ್ಯಾಚರಣೆ ಮಾಡಬಲ್ಲದು ಎಂದು ರಿಚಾ ಶರ್ಮಾ ವಿವರಿಸಿದರು. 

ಈಗಾಗಲೇ ಕಣ್ಗಾವಲಿಗಾಗಿ ಹಲವು ಹೈಟೆಕ್‌ ಡ್ರೋಣ್‌ ಮತ್ತು ಮಾನವರಹಿತ ವಾಹನಗಳು ರಕ್ಷಣಾ ಕ್ಷೇತ್ರದಲ್ಲಿವೆ. ಆದರೆ, ಅವು ಬೃಹದಾಕಾರದ ವಿಮಾನಗಳಾಗಿದ್ದು, ಇವುಗಳ ಮೂರನೇ ಒಂದು ಭಾಗದಷ್ಟು ಗಾತ್ರವನ್ನು “ಪವನ್‌ಸಟ್‌’ ವಿಮಾನ ಹೊಂದಿದೆ. ಇದರ ಬೆಲೆ 75 ಲಕ್ಷ ರೂ. “ಮೇಕ್‌ ಇನ್‌ ಇಂಡಿಯಾ’ ಯೋಜನೆ ಅಡಿ ಇದನ್ನು ನಿರ್ಮಿಸಲಾಗಿದೆ. ಇದೇ ಮಾದರಿಯ ಮತ್ತೂಂದು ಮಾನವರಹಿತ ಪವನ್‌ಸಟ್‌ ವಿಮಾನವನ್ನು ಪರಿಚಯಿಸಿದ್ದು, ಕೃಷಿ ಉದ್ದೇಶಗಳಿಗೂ ಅದನ್ನು ಬಳಸಬಹುದಾಗಿದೆ. ದೊಡ್ಡ ಗಾತ್ರದ ಕೃಷಿ ಭೂಮಿಯಲ್ಲಿ ಬೆಳೆಗಳ ನಿಖರ ಮಾಹಿತಿಯನ್ನು ಚಿತ್ರಗಳ ಸಹಿತ ಸೆರೆಹಿಡಿದು ಇದು ರವಾನಿಸಲಿದೆ. 

ಮೈಕ್ರೋ ಯುಎವಿ
ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ (ನ್ಯಾಷನಲ್‌ ಏರೋಸ್ಪೇಸ್‌ ಲ್ಯಾಬರೋಟರೀಸ್‌) ಶತ್ರುಗಳ ಮೇಲಿನ ಕಣ್ಗಾವಲಿಡಲು ಮೈಕ್ರೊ ಮಾನವರಹಿತ ವಿಮಾನಗಳನ್ನು ಪರಿಚಯಿಸಿದೆ. ಈ “ಮೈಕ್ರೊ ಯುಎವಿ’ (ಮೈಕ್ರೊ ಅನ್‌ಮ್ಯಾನ್‌x ಏರಿಯಲ್‌ ವೇಹಿಕಲ್‌) ಗಾತ್ರ ಕೇವಲ 150 ಸೆಂ.ಮೀ. ಆಗಿದ್ದು, ಸುಮಾರು 100 ಮೀಟರ್‌ನಷ್ಟು ಎತ್ತರದಲ್ಲಿ ನಿರಂತರ 45 ನಿಮಿಷ ಹಾರಬಲ್ಲದು. ಇದರಲ್ಲಿ
ಅಳವಡಿಸಿರುವ ಕ್ಯಾಮೆರಾಗಳ ಮೂಲಕ ವಿಡಿಯೋ ಚಿತ್ರೀಕರಣ ಮಾಡಿ, ನಿಯಂತ್ರಣ ಕೊಠಡಿಗೆ ಸಂದೇಶ ರವಾನಿಸುತ್ತದೆ. ದೊಡ್ಡ ಯುಎವಿಗಳನ್ನು ಶತ್ರುಗಳ ರೆಡಾರ್‌ಗಳು ಸುಲಭವಾಗಿ ಪತ್ತೆ ಹಚ್ಚಿ, ಧ್ವಂಸ ಮಾಡಿಬಿಡುತ್ತವೆ. ಆದರೆ, ಈ ಮೈಕ್ರೊ ಯುಎವಿ
ರೆಡಾರ್‌ ಕಣ್ಣಿಗೆ ಬಿದ್ದರೂ, ಕೀಟವೋ ಅಥವಾ ಮಾಹಿತಿ ರವಾನಿಸುವ ಯುಎವಿ ಎಂಬುದು ಗೊತ್ತಾಗುವುದಿಲ್ಲ. ಈ ಉದ್ದೇಶಕ್ಕಾಗಿ ಇದನ್ನು ತಯಾರಿಸಲಾಗಿದೆ ಎಂದು ಎನ್‌ಎಎಲ್‌ ವಿಜ್ಞಾನಿ ಪಂಕಜ್‌ ಮಾಹಿತಿ ನೀಡಿದರು.  

ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.