ಮಧ್ಯಂತರ ಅಧ್ಯಕ್ಷರಾಗಿ ಎಸ್.ವಿ.ರಂಗನಾಥ್ ಆಯ್ಕೆ
Team Udayavani, Aug 1, 2019, 3:06 AM IST
ಬೆಂಗಳೂರು: ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಸಾವು ಖಚಿತವಾದ ಬಳಿಕ ನಗರದ ವಿಠuಲ್ ಮಲ್ಯ ರಸ್ತೆಯಲ್ಲಿರುವ ಕಂಪನಿಯ ಕೇಂದ್ರ ಕಚೇರಿಯಲ್ಲಿ ಮಂಡಳಿ ನಿರ್ದೇಶಕರ ಸಭೆ ನಡೆಸಿ, ಕಂಪನಿ ಹಿತದೃಷ್ಟಿಯಿಂದ ಹತ್ತು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಮಂಗಳವಾರ ಕರೆದಿದ್ದ ತುರ್ತು ಸಭೆಯನ್ನು ಜರ್ಮನಿ ಮತ್ತು ಮುಂಬೈ ಮೂಲದ ನಿರ್ದೇಶಕರು ಬಾರದ ಕಾರಣ ಬುಧವಾರಕ್ಕೆ ಮುಂದೂಡಲಾ ಗಿತ್ತು. ಆರು ನಿರ್ದೇಶಕರನ್ನು ಒಳಗೊಂಡಿದ್ದ ಕೆಫೆ ಕಾಫಿ ಡೇನ ನಿರ್ದೇಶಕ ಮಂಡಳಿ, ಮಾಳವಿಕ ಸಿದ್ದಾರ್ಥ್ ಅವರ ಅನುಪಸ್ಥಿತಿ ಯಲ್ಲಿ ನಾಲ್ವರು ನಿರ್ದೇಶಕರ ನೇತೃತ್ವದಲ್ಲಿ ನಡೆಯಿತು.
ಸಿದ್ಧಾರ್ಥ್ ಸಾವಿನ ಬಳಿಕ ನಡೆದ ಮೊದಲ ಸಭೆಯಲ್ಲಿ ಮೊದಲಿಗೆ ಸಿದ್ದಾರ್ಥ್ ಸಾವಿಗೆ ಸಂತಾಪ ಸೂಚಿಸಲಾಯಿತು. ಬಳಿಕ, ಷೇರು ವಿನಿಮಯ ಸೇರಿದಂತೆ ಹಲವು ಮಹತ್ವದ ತೀರ್ಮಾನಗಳನ್ನು ನಿರ್ದೇಶಕರು ಕೈಗೊಂಡಿದ್ದಾರೆ. ಕಂಪನಿಯ ಹಿತದೃಷ್ಟಿಯಿಂದ ಹಲವಾರು ಹೊಸ ನೇಮಕಾತಿಗಳನ್ನು ಕೂಡ ಮಾಡಲಾಯಿತು. ನಿರ್ದೇಶಕರ ಎಲ್ಲಾ ತೀರ್ಮಾನಗಳಿಗೆ ಮಾಳವಿಕ ಸಮ್ಮತಿ ಸೂಚಿಸಿದ್ದಾರೆ.
ಮಾಜಿ ಐಎಎಸ್ ಅಧಿಕಾರಿ ಹಾಗೂ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ಮತ್ತು ನಿತಿನ್ ಬಾಗ¾ನೆ ಅವರನ್ನು ಮುಖ್ಯ ನಿರ್ವಹಣಾಧಿಕಾರಿ (ಸಿಒಒ) ಹಾಗೂ ರಾಮ್ ಮೋಹನ್ ಅವರನ್ನು ಮುಖ್ಯ ಹಣಕಾಸು ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
ಸಭೆಯ ಪ್ರಮುಖ ನಿರ್ಧಾರಗಳು
-ಮಾಳವಿಕ ಸಿದ್ಧಾರ್ಥ್, ಮ್ಯಾನೇಜ್ಮೆಂಟ್ಗೆ ತಮ್ಮ ಸಂಪೂರ್ಣ ಬೆಂಬಲ.
-ಸಿಬ್ಬಂದಿ, ಹೂಡಿಕೆದಾರ ಮತ್ತು ಗ್ರಾಹಕರ ಹಿತ ಕಾಯಬೇಕು.
-ದಿನನಿತ್ಯದ ವ್ಯವಹಾರಗಳಿಗಾಗಿ ಮಧ್ಯಂತರ ಅಧ್ಯಕ್ಷರಾಗಿ ಎಸ್.ವಿ.ರಂಗನಾಥ್ ನೇಮಕ.
-ಮುಖ್ಯ ನಿರ್ವಹಣಾ ಅಧಿಕಾರಿಯಾಗಿ ನಿತಿನ್ ಬಾಗ್ಮನೆ ನೇಮಕ. ಮೂವರ ಕಾರ್ಯಕಾರಿ ಸಮಿತಿ ನೇಮಕ.
-ಸಿದ್ಧಾರ್ಥ್ ಅವರ ಕೊನೆಯ ಪತ್ರದ ತನಿಖೆಗೆ ಚಿಂತನೆ. ಆಗಸ್ಟ್ 8ಕ್ಕೆ ಆಡಿಟರ್ ಒಳಗೊಂಡ ಸಭೆ.
-ಕಾನೂನು ಸಲಹೆಗೆ ಮುಂಬೈ ಮೂಲದ ಸಿವಿಲ್ ಅಮರ್ ಚಂದ್ ಮಂಗಳ್ ದಾಸ್ ಕಂಪನಿ ನೇಮಕ.
-ಆಗಸ್ಟ್ 8ಕ್ಕೆ ಆಡಿಟರ್ಸ್ ಜತೆ ನಿರ್ದೇಶಕರ ಸಭೆ ನಡೆಸಲು ತೀರ್ಮಾನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ