ಭಜರಂಗದಳ ಸಂಚಾಲಕ ಆಗುವ ಆಸೆ ಇತ್ತು: ಕಟೀಲ್
Team Udayavani, Sep 17, 2019, 3:03 AM IST
ಚಿತ್ರದುರ್ಗ: “ಭಜರಂಗದಳ ರಾಜ್ಯ ಸಂಚಾಲಕನಾಗುವ ಆಸೆ ಇತ್ತು. ಆದರೆ ಸಂಘದ ಹಿರಿಯರು ಬಿಜೆಪಿಗೆ ಹೋಗಬೇಕೆಂದು ಸೂಚನೆ ನೀಡಿದರು..’ ಹೀಗೆಂದವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್. ಸೋಮವಾರ ಬಿಜೆಪಿ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿತರಾಗಿ ಮಾತನಾಡಿದ ಅವರು, ಎಂಪಿ-ಎಂಎಲ್ಎ, ರಾಜಕಾರಣ ನನಗೆ ಇಷ್ಟವಿರಲಿಲ್ಲ. ಉಗ್ರ ಭಾಷಣ ಮಾಡಬೇಕು, ಹೋರಾಟ ಮಾಡಬೇಕು ಎನ್ನುವುದಷ್ಟೇ ನನ್ನ ಆಯ್ಕೆಯಾಗಿತ್ತು.
ಭಾಷಣ ಮಾಡಿ ಚಪ್ಪಾಳೆ ತಟ್ಟಿಸಿಕೊಳ್ಳದಿದ್ದರೆ ನನಗೆ ನಿದ್ದೆಯೇ ಬರುತ್ತಿರಲಿಲ್ಲ. ಹೀಗೆ ಸಂಘಟನೆಗೆ ಬಂದವನು ಇಂದು ಬಿಜೆಪಿ ರಾಜ್ಯಾಧ್ಯಕ್ಷನಾದೆ ಎಂದರು. ಉಡುಪಿ ಜಿಲ್ಲೆಯ ಕಾರ್ಕಳದ ಶಾಸಕ ಸುನೀಲ್ಕುಮಾರ್ ಭಜರಂಗದಳ ಸಂಚಾಲಕರಾಗಿದ್ದರು. ಆಗ ಸಂಘದ ಹಿರಿಯರು ನನ್ನನ್ನು ಕರೆದು ಬಿಜೆಪಿ ಜವಾಬ್ದಾರಿ ವಹಿಸಿಕೊಳ್ಳಲು ಸೂಚಿಸಿದ್ದರು. ಆದರೆ ನಾನು ಭಜರಂಗ ದಳಕ್ಕೆ ಹೋಗುವುದಾಗಿ ಹೇಳಿದ್ದೆ. ಒಬ್ಬ ಸಾಮಾನ್ಯ ಕಾರ್ಯ ಕರ್ತ ಪಕ್ಷದ ರಾಜ್ಯಾಧ್ಯಕ್ಷನಾಗುವ ಸಾಧ್ಯತೆ ಇರುವುದು ಬಿಜೆಪಿಯಲ್ಲಿ ಮಾತ್ರ ಎಂದು ಅವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ