ಕಣ್ಣಿಲ್ಲದೇ ಕಂಗೆಟ್ಟ ಕುಟುಂಬಕ್ಕೆ ಬೇಕಿದೆ ಬೆಳಕು
Team Udayavani, Dec 14, 2019, 3:06 AM IST
ರಾಯಚೂರು: ಮನೆಯಲ್ಲಿ ಒಬ್ಬರು ಅಂಗ ನ್ಯೂನತೆಯಿಂದ ಬಳಲಿದರೆ ನೋಡಲಾಗದು. ಅಂಥದ್ದರಲ್ಲಿ ಕುಟುಂಬದಲ್ಲಿ ಮೂರು ಜನ ದೃಷ್ಟಿ ಸಮಸ್ಯೆಯಿಂದ ಹಾಗೂ ಒಬ್ಬರು ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ! ಸಿಂಧನೂರು ತಾಲೂಕಿನ ಹೆಡಗಿನಾಳ ಗ್ರಾಮದಲ್ಲಿ ಇಂಥದ್ದೊಂದು ಕುಟುಂಬ ಸಂಕಷ್ಟದಲ್ಲಿ ಕಾಲ ದೂಡುತ್ತಿದೆ. ಬಸಮ್ಮ ಎಂಬಾಕೆ ಹೆರಿಗೆ ವೇಳೆ ದೃಷ್ಟಿ ಕಳೆದುಕೊಂಡಿದ್ದು, ಮಕ್ಕಳಿಗೂ ಆ ಕಾಯಿಲೆ ಬಂದಿದೆ.
ಗಂಡ ಪಾರ್ಶ್ವವಾಯುನಿಂದ ಬಳಲುತ್ತಿದ್ದು, ದುಡಿಯಲು ಶಕ್ತರಾಗಿಲ್ಲ. ಕಣ್ಣು ಕಳೆದುಕೊಂಡ ತಾಯಿಗೂ ಯಾವುದೇ ಕೆಲಸವಿಲ್ಲ. ಈಗ ಇಬ್ಬರು ಮಕ್ಕಳು ಕೂಡ ಅನುವಂಶಿಕ ಕಾಯಿಲೆಗೆ ತುತ್ತಾಗಿದ್ದಾರೆ. ಮಗಳು ಜ್ಯೋತಿಗೆ ಕಣ್ಣು ಕಾಣದಂತಾಗಿದ್ದು, ಮಗ ನವೀನಕುಮಾರ ದೃಷ್ಟಿಯಲ್ಲಿ ದೋಷ ಕಂಡುಬಂದಿದ್ದು, ಶೇ.40ರಷ್ಟು ದೃಷ್ಟಿ ಹೀನತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಅದರ ಜತೆಗೆ ಮತ್ತೂಬ್ಬ ಮಗನಿಗೂ ಈಗಾಗಲೇ ದೃಷ್ಟಿ ಮಂದವಾಗುತ್ತಿದ್ದು, ಈ ಕಾಯಿಲೆಗೆ ತುತ್ತಾಗುವ ಆತಂಕ ಎದುರಾಗಿದೆ.
ಮಗಳು ಜನಿಸಿದಾಗ ತಾಯಿ ಬಸಮ್ಮಗೆ ಸಮಸ್ಯೆಯಾಗಿ ಎರಡು ಕಣ್ಣುಗಳನ್ನು ತೆಗೆಯಲಾಗಿದೆ. ಇದರಿಂದ ಕುಟುಂಬ ನಿರ್ವಹಣೆ ಹೊಣೆ ಮಗಳು ಜ್ಯೋತಿ ಹೆಗಲೇರಿದ್ದು, ವ್ಯಾಸಂಗ ತೊರೆದು ತಂದೆ-ತಾಯಿ ನೋಡಿಕೊಳ್ಳುವುದೇ ಕೆಲಸವಾಗಿತ್ತು. ಆದರೆ, ಆಕೆಗೂ ದೃಷ್ಟಿ ದೋಷ ಆವರಿಸಿ, ಈಗ ಕಣ್ಣು ಕಾಣುತ್ತಿಲ್ಲ. ಮಗ ನವೀನ್ಕುಮಾರನಲ್ಲಿ ದೃಷ್ಟಿ ದೋಷ ಕಂಡು ಬಂದಿದ್ದು, ಶಾಲೆಯಲ್ಲಿ ಶಿಕ್ಷಕರು ಗುರುತಿಸಿ ವೈದ್ಯರಿಗೆ ತೋರಿಸಿದಾಗ; ಚಿಕಿತ್ಸೆ ಕೊಡಿಸದಿದ್ದರೆ ಈ ಬಾಲಕನ ದೃಷ್ಟಿಯೂ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಕೊನೆಯ ಮಗ ಪೇತರಪ್ಪಗೂ ಈ ಕಾಯಿಲೆ ಬರಬಹುದು ಎಂದೂ ಎಚ್ಚರಿಸಿದ್ದಾರೆ. ಪಾಲಿಕೋನಿಯಾ ಸಮಸ್ಯೆ: ಇದು ನರದೌರ್ಬಲ್ಯದಿಂದಲೂ ಬರುವ ಸಮಸ್ಯೆಯಾಗಿದ್ದು, ಪಾಲಿಕೋನಿಯಾ ಎಂಬ ಕಾಯಿಲೆ ಇರಬೇಕು ಎಂದು ವೈದ್ಯರು ಅಂದಾಜಿಸಿದ್ದಾರೆ. ನರಗಳು ದುರ್ಬಲಗೊಂಡಾಗ ಅದರ ಪರಿಣಾಮ ದೃಷ್ಟಿ ಮೇಲಾಗುವ ಸಾಧ್ಯತೆ ಇರುತ್ತದೆ. ಇದರ ಮುನ್ಸೂಚನೆ ಬರುತ್ತಿದ್ದಂತೆ ಚಿಕಿತ್ಸೆ ಕೊಡಿಸಬೇಕು.
ಆರಂಭದಲ್ಲಿ ಚಿಕಿತ್ಸೆ ನೀಡಿದಲ್ಲಿ ಕಾಯಿಲೆಯಿಂದ ಗುಣಮುಖರಾಗುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ವೈದ್ಯರು. ಕಡು ಬಡತನದಲ್ಲಿ ದಿನ ದೂಡುತ್ತಿರುವ ಈ ಕುಟುಂಬಕ್ಕೆ ಚಿಕಿತ್ಸೆ ಕೊಡಿಸುವಷ್ಟು ಶಕ್ತಿಯಿಲ್ಲ. ಮಾಸಾಶನ ಬರುತ್ತಿದೆಯಾದರೂ ಇಡೀ ಕುಟುಂಬದ ನಿರ್ವಹಣೆ ಕಷ್ಟವಾಗಿದೆ. ದಾನಿಗಳು ನೆರವಿಗೆ ಬಂದು ಈ ಸಮಸ್ಯೆ ನಿವಾರಿಸಿದಲ್ಲಿ ಕುಟುಂಬ ಬಹುದೊಡ್ಡ ಸಮಸ್ಯೆಯಿಂದ ಪಾರಾದಂತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ