ಇನ್ನೊಂದು ವಾರ ಸದನ ವಿಸ್ತರಿಸಬೇಕಿತ್ತು: ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅಸಮಾಧಾನ
Team Udayavani, Dec 24, 2021, 3:12 PM IST
ಸುವರ್ಣಸೌಧ (ಬೆಳಗಾವಿ): ರಾಜ್ಯದಲ್ಲಿಜ್ವಲಂತ ಸಮಸ್ಯೆಗಳಿವೆ. ನಾವು ಇನ್ನೊಂದು ವಾರ ಮುಂದೂಡಲು ಕೇಳಿಕೊಂಡೆವು. ನಮ್ಮ ಶಾಸಕರಿಗೆ ಮಾತನಾಡಲು ಅವಕಾಶ ಸಿಗಲಿಲ್ಲ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಸಾಧನೆ ಮತಾಂತರ ವಿಧೇಯಕ ಪಾಸ್ ಮಾಡಿದ್ದಷ್ಟೇ. ಹಿಂದೆ ನೂರು ದಿನ ಕಲಾಪ ನಡೆಸಿದ ಇತಿಹಾಸವಿದೆ. 60 ದಿನ ಸದನ ನಡೆಸುವ ನಿಯಮ ಮಾಡಿಕೊಂಡಿದ್ದರು. ಆದರೆ 10 ದಿನದ ಕಲಾಪದಲ್ಲಿ ಏನು ನಡೆಯಲಿಲ್ಲ. ಯಾವುದಕ್ಕೂ ಸರಿಯಾದ ಉತ್ತರ ಸಿಗಲಿಲ್ಲ ಎಂದರು.
ಇದನ್ನೂ ಓದಿ:ಮತಾಂತರ: ಅಧಿವೇಶನದಲೇ ಸಿದ್ದು ಬಣ್ಣ ಬಯಲು – ಹೆಚ್ಡಿಕೆ
ಸದನದಲ್ಲಿ ಐವರು ಮಂತ್ರಿಗಳೂ ಇರಲಿಲ್ಲ. ಬಿಲ್ ಪಾಸ್ ಮಾಡುವಾಗಷ್ಟೇ ಎಲ್ಲರೂ ಇದ್ದರು. ನೂರು ದಿನ ಕಲಾಪ ನಡೆಸುವಂತೆ ಹೇಳಿದ್ದೇವೆ. ಪ್ರತಿಪಕ್ಷ ನಾಯಕರ ಮಾತಿಗೆ ಸಮಯ ಸಿಗಲಿಲ್ಲ. ಪ್ರತಿಭಟನೆ ಮಾಡಿ ಸಮಯ ಕೇಳುವಂತಾಯಿತು. ಇನ್ನೊಂದು ವಾರ ಸದನ ವಿಸ್ತರಿಸಬೇಕಿತ್ತು ಎಂದು ಶಿವಲಿಂಗೇಗೌಡ ಅಸಮಾಧಾನ ತೋಡಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ