ನೀರು ಕುಡಿಯಲು ಹೋದ ಕುರಿಗಾಹಿ ಮೊಸಳೆಗಳಿಗೆ ಬಲಿ
Team Udayavani, Apr 29, 2019, 3:00 AM IST
ಸೈದಾಪುರ: ಯಾದಗಿರಿ ಜಿಲ್ಲೆ ಸೈದಾಪುರ ಸಮೀಪದ ಗುಡೂರು ಭೀಮಾ ನದಿ ದಡದಲ್ಲಿ ಭಾನುವಾರ ಮಧ್ಯಾಹ್ನ ನೀರು ಕುಡಿಯಲು ಹೋಗಿದ್ದ ಕುರಿಗಾಹಿಯೊಬ್ಬ ಎರಡು ಮೊಸಳೆಗಳಿಗೆ ಆಹಾರವಾಗಿದ್ದಾನೆ. ಗುಡೂರಿ ಬಸವಲಿಂಗಪ್ಪ (55) ಮೃತ ವ್ಯಕ್ತಿ.
ಬಸವಲಿಂಗಪ್ಪ ದಿನ ನಿತ್ಯದಂತೆ ತನ್ನ ಕುರಿಗಳನ್ನು ಮೇಯಿಸಲು ನದಿ ತೀರದ ಪ್ರದೇಶಕ್ಕೆ ಹೋಗಿದ್ದ. ಮಧ್ಯಾಹ್ನದ ವೇಳೆಗೆ ಕುರಿಗಳಿಗೆ ನೀರು ಕುಡಿಸಲು ಹೋಗಿದ್ದ. ಕುರಿಗಳಿಗೆ ನೀರುಣಿಸಿ ನಂತರ ನದಿ ದಂಡೆಯಲ್ಲಿ ಕುಳಿತು ಊಟ ಮಾಡಿ ನೀರು ಕುಡಿಯಲು ನದಿಗೆ ಇಳಿದ ವೇಳೆ ಎರಡು ಮೊಸಳೆಗಳು ಏಕಾಏಕಿ ದಾಳಿ ಮಾಡಿ ಆತನನ್ನು ಏಳೆದೊಯ್ದಿವೆ.
ಮೊಸಳೆ ಜತೆ ಸತತ 10-15 ನಿಮಿಷ ಕಾದಾಡಿ ಪ್ರಾಣ ಉಳಿಸಿಕೊಳ್ಳಲು ಯತ್ನಿಸಿದ. ಇದನ್ನು ನೋಡಿದ ಆತನ ಸಹಚರ ವೃದ್ಧನಾದ ಪರಿಣಾಮ ಸಹಾಯ ಮಾಡಲು ಸಾಧ್ಯವಾಗಿಲ್ಲ. ಆತ ಗ್ರಾಮಕ್ಕೆ ತೆರಳಿ ಮಾಹಿತಿ ನೀಡಿದ.
ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಮತ್ತು ಸ್ಥಳೀಯ ಮೀನುಗಾರರು ಮೊಸಳೆಗಳಿಂದ ಬಸವಲಿಂಗಪ್ಪನನ್ನು ಉಳಿಸಿಕೊಳ್ಳಲು ಯತ್ನಿಸಿದರು. ಅಷ್ಟರಲ್ಲಿಯೇ ಆತನ ಎಡಗೈ ಮತ್ತು ಬಲಗಾಲನ್ನು ಮೊಸಳೆಗಳು ತಿಂದಿದ್ದವು. ರಕ್ಷಣಾ ಕಾರ್ಯ ಪ್ರಯೋಜವಾಗದೆ ಆತ ಮೃತಪಟ್ಟಿದ್ದಾನೆ. ಸೈದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
MUST WATCH
ಹೊಸ ಸೇರ್ಪಡೆ
LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್
Belthangady: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ
NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ
Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್ ಕಾನ್ಸ್ಟೆಬಲ್ ಗೆ ಗಾಯ