ಕಾಲೇಜು ಶೌಚಾಲಯದಲ್ಲಿ ವಿದ್ಯಾರ್ಥಿಗೆ ಇರಿದು ಕೊಂದ ಸಹಪಾಠಿ
Team Udayavani, Jan 30, 2019, 5:50 AM IST
ಬೆಂಗಳೂರು: ನಗರದ ನಾಗಸಂದ್ರದಲ್ಲಿರುವ ಸೌಂದರ್ಯ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಬ್ಬರ ಮಾರಾಮಾರಿ ಕೊಲೆಗೆ ಕಾರಣವಾದ ಘಟನೆ ಬುಧವಾರ ನಡೆದಿದೆ.
ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ದಯಾ ಸಾಗರ್ ಕೊಲೆಯಾದ ವ್ಯಕ್ತಿ. ಈತ ಅದೇ ಕಾಲೇಜಿನ ವಾಹನ ಚಾಲಕರ ಮಗ. ಈತನ ಸಹಪಾಠಿ ರಕ್ಷಿತ್ ಎಂಬಾತ ಮತ್ತಿಬ್ಬರು ಹುಡುಗರ ಜೊತೆ ಸೇರಿ ದಯಾ ಸಾಗರ್ ನನ್ನು ಕೊಲೆಗೈದಿದ್ದಾರೆ.
ಆರೋಪಿ ರಕ್ಷಿತ್ ಕಾಲೇಜಿಗೆ ಬರುವಾಗಲೇ ತನ್ನ ಬ್ಯಾಗ್ ನಲ್ಲಿ ಚಾಕು ಇಟ್ಟುಕೊಂಡು ಬಂದಿದ್ದ ಎನ್ನಲಾಗಿದೆ. ಕಾಲೇಜಿನ ನಾಲ್ಕನೇ ಅಂತಸ್ತಿನ ಶೌಚಾಲಯದಲ್ಲಿ ರಕ್ಷಿತ್ ದಯಾ ಸಾಗರ್ ಗೆ ಇರಿದಿದ್ದು ತೀವ್ರ ರಕ್ತ ಸ್ರಾವವಾಗಿ ದಯಾ ಸಾಗರ್ ಮೃತ ಪಟ್ಟಿದ್ದಾನೆ. ಕೊಲೆಗೆ ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ.
ವಿದ್ಯಾರ್ಥಿಗಳ ಗಲಾಟೆಗೆ ಎಚ್ಚೆತ್ತ ಅಧ್ಯಾಪಕರು ಮೂವರು ಆರೋಪಿಗಳನ್ನು ತಕ್ಷಣ ಪೊಲೀಸರಿಗೆ ಒಪ್ಪಿಸಿದ್ದಾರೆ.