ಮಳೆ ನಿಂತು ಹೋದ ಮೇಲೆ ಮುನ್ನೆಚ್ಚರಿಕೆ ಬಂದಿದೆ! ಪಂಚಾಯತ್ಗೊಂದು ಮಳೆ ಮಾಪನ ಕೇಂದ್ರ
ಮಾಪನಗಳ ಅಸಮರ್ಪಕ ನಿರ್ವಹಣೆ
Team Udayavani, Sep 8, 2022, 7:53 AM IST
ಬೆಂಗಳೂರು: ರಾಜ್ಯದಲ್ಲಿ ಮಳೆಯ ಅವಾಂತರ ತಗ್ಗಿಸಲು ಬಹುಮುಖ್ಯ ಪಾತ್ರ ವಹಿಸಬೇಕಿದ್ದ ಮಳೆ ಮಾಪನಗಳು ಕೆಲ ತಿಂಗಳು ಗಳಿಂದ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವುದು ನೆರೆ ಹಾವಳಿ ನಿರ್ವಹಣೆ ಮೇಲೆ ಪರಿಣಾಮ ಬೀರುತ್ತಿದೆ.
ಪ್ರತೀ ಗ್ರಾಮ ಪಂಚಾಯತ್ ಗೊಂದು ಮಳೆ ಮಾಪನ ಮತ್ತು ಹೋಬಳಿಗೊಂದು ಹವಾಮಾನ ಮಾಪನ ಕೇಂದ್ರಗಳನ್ನು ಸ್ಥಾಪಿಸ ಲಾಗಿದೆ. ಇವುಗಳು ನೀಡುವ ಅಂಕಿ-ಅಂಶ ಆಧರಿಸಿ ಯಾವ ಭಾಗದಲ್ಲಿ ಎಷ್ಟು ಪ್ರಮಾಣದ ಮಳೆ ಬೀಳುತ್ತಿದೆ? ಎಷ್ಟು ಅವಧಿಯಲ್ಲಿ ಹಾಗೂ ಯಾವ ತೀವ್ರತೆಯಲ್ಲಿ ಮಳೆಯಾಗುತ್ತಿದೆ? ಇತ್ಯಾದಿ ಮಾಹಿತಿ ಪಡೆಯಲಾಗುತ್ತಿತ್ತು. ಅದನ್ನು ಆಧರಿಸಿ ಸ್ಥಳೀಯವಾಗಿ ಮಳೆ ಸಂದೇಶಗಳನ್ನು ರವಾನಿಸ ಲಾಗುತ್ತದೆ. ಆ ಮಳೆ ತೀವ್ರ
ಗೊಂಡರೆ ಎಚ್ಚರಿಕೆ ಸಂದೇಶಗಳನ್ನು ನೀಡಲಾಗುತ್ತದೆ. ಆದರೆ ಬೆಂಗ ಳೂರು ಒಳಗೊಂಡಂತೆ ಕೆಲವೆಡೆ ಮಳೆ ಸುರಿದು 2 ದಿನಗಳ ಅನಂತರ ಈ “ಎಚ್ಚರಿಕೆ ಸಂದೇಶ’ಗಳು ಬರುತ್ತಿವೆ.
ಮಳೆ ಮಾಹಿತಿ ಸಂದೇಶಗಳು ಈ ಮೊದಲು ಆಯಾ ಜಿಲ್ಲಾಧಿಕಾರಿ, ತಹಶೀಲ್ದಾರ್, ಕಂದಾಯ ಅಧಿ ಕಾರಿ, ಸ್ಥಳೀಯ ಸಂಸ್ಥೆಗಳಲ್ಲಿನ ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರತಿ 15 ನಿಮಿಷಕ್ಕೊಮ್ಮೆ ರವಾನೆಯಾಗುತ್ತಿತ್ತು. ಕೆಲವೊಮ್ಮೆ ಮಳೆ ತೀವ್ರಗೊಂಡರೆ, ಆ ತೀವ್ರತೆ ಬಗ್ಗೆಯೂ ಎಚ್ಚರಿಕೆ ಸಂದೇಶ ಕಳುಹಿಸಲಾಗುತ್ತಿತ್ತು. ಅದನ್ನು ಆಧರಿಸಿ ಸ್ಥಳೀಯ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದರು.
ಮಳೆ ಅವಾಂತರಗಳನ್ನು ತಗ್ಗಿಸುವುದು ಮಾತ್ರವಲ್ಲ; ಅದರಿಂದ ಸಂತ್ರಸ್ತರಾದವರಿಗೆ ಪರಿಹಾರ ನೀಡುವಲ್ಲಿಯೂ ಈ ಅಂಕಿ-ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಯಾವ ಭಾಗದಲ್ಲಿ ಎಷ್ಟು ಮಳೆಯಾಗಿದೆ ಎಂಬುದನ್ನು ಆಧರಿಸಿ, ಎಷ್ಟು ಬಾಧಿತವಾಗಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಇದು ನೆರವಾಗುತ್ತದೆ.
ದೊಡ್ಡ ಮಾಪನ ಜಾಲ
ದೇಶದಲ್ಲಿ ಅತಿ ದೊಡ್ಡ ಮಳೆ ಮಾಪನ ಜಾಲ ಹೊಂದಿರುವ ರಾಜ್ಯ ಕರ್ನಾಟಕ. ಇದರಿಂದ ಹೆಚ್ಚು ವ್ಯವಸ್ಥಿತವಾಗಿ ನಿರ್ವಹಿಸಬಹುದಾಗಿದ್ದು, ಉಳಿದ ರಾಜ್ಯಗಳಿಗೆ ಇದು ಮಾದರಿ ಆಗಿದೆ. ವಿಶ್ವ ಹವಾಮಾನ ಸಂಸ್ಥೆ ಮತ್ತು ಭಾರತೀಯ ಹವಾಮಾನ ಇಲಾಖೆಯು ಪ್ರತಿ 350 ಚದರ ಕಿ.ಮೀ.ಗೊಂದು ಮಳೆ ಮಾಪನ ಇದ್ದರೆ ಸಾಕು ಎಂದು ಹೇಳಿವೆ. ನಮ್ಮಲ್ಲಿ ಅಂದಾಜು ಪ್ರತಿ 35 ಚ. ಕಿ.ಮೀ.ಗೊಂದು ಮಾಪನಗಳನ್ನು ಅಳವಡಿಸಲಾಗಿದೆ.
ಹವಾಮಾನ ಮಾಪನ ಕೇಂದ್ರ
ಹವಾಮಾನ ಮಾಪನ ಕೇಂದ್ರಗಳು ಮಳೆಯ ಜತೆಗೆ ಆ ಭಾಗದ ಉಷ್ಣಾಂಶ, ತೇವಾಂಶ, ಗಾಳಿಯ ವೇಗ ಸೇರಿದಂತೆ ಇತರೆ ಮಾಹಿತಿಗಳನ್ನೂ ನೀಡುತ್ತವೆ. ಹೋಬಳಿಗೊಂದು ಈ ಕೇಂದ್ರಗಳನ್ನು ಅಳವಡಿಸಲಾಗಿದೆ.
95 ಗಂಟೆ ಅನಂತರ ಎಚ್ಚರಿಕೆ
ಉದಾಹರಣೆಗೆ ಬೆಳಗಾವಿಯ ಸವದತ್ತಿ, ಕೋಲಾರದ ಶ್ರೀನಿವಾಸ ಪುರ ವ್ಯಾಪ್ತಿಯಲ್ಲಿನ ಕೆಲವು ಗ್ರಾ.ಪಂ.ಗಳ ಮಳೆಯ ಎಚ್ಚರಿಕೆ ಸಂದೇಶಗಳು 95 ಗಂಟೆಗಳ ಅನಂತರ ಬಂದಿದ್ದರೆ, ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ, ತುಮಕೂರಿನ ಚಿಕ್ಕನಾಯಕನಹಳ್ಳಿ ವ್ಯಾಪ್ತಿಯಲ್ಲಿ ಬರುವ ಗ್ರಾ.ಪಂ.ಗಳ ಮಳೆ ಮಾಹಿತಿ 70 ಗಂಟೆ ತಡವಾಗಿ ಬರುತ್ತಿವೆ. ಇನ್ನೂ ವಿಚಿತ್ರವೆಂದರೆ ಆ. 29ರಂದು ಬೆಂಗ ಳೂರು ನಗರದ ಆನೇಕಲ್, ಬೆಂಗಳೂರು ದಕ್ಷಿಣದ ಮಳೆಯ ಎಚ್ಚ ರಿಕೆ ಸಂದೇಶಗಳು ಸೆ. 5ರಂದು ಮೊಬೈಲ್ಗೆ ಬಂದಿವೆ. ಇವು ಕೆಲವು ಮಾದರಿಗಳಷ್ಟೇ. ಅನೇಕ ಗ್ರಾ.ಪಂ. ಮಟ್ಟದಲ್ಲಿ ಮಳೆ ಮಾಪನಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ದೂರು ಗಳು ಸ್ವತಃ ಅಲ್ಲಿನ ನಿವಾಸಿಗಳಿಂದ ಕೇಳಿಬರುತ್ತಿವೆ.
ಎಲ್ಲ ಕಡೆಗಳಲ್ಲೂ ನಿಯಮಿತವಾಗಿ ಮಳೆ ಮಾಪನಗಳಿಂದ ಮಳೆ ಪ್ರಮಾಣ ದಾಖಲಾಗುತ್ತಿದೆ. ಜತೆಗೆ ಅದು ಸಂಬಂಧಪಟ್ಟವರಿಗೆ ಆಯಾ ಸ್ಥಳೀಯ ಮಟ್ಟದಲ್ಲಿ ಸಂದೇಶದ ರೂಪದಲ್ಲಿ ರವಾನೆಯೂ ಆಗುತ್ತಿದೆ. ಇದರಲ್ಲಿ ಯಾವುದೇ ತೊಂದರೆ ಅಥವಾ ಅಡತಡೆ ಆಗುತ್ತಿಲ್ಲ.
– ಮನೋಜ್ ರಾಜನ್, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಆಯುಕ್ತ
-ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ
MUST WATCH
ಹೊಸ ಸೇರ್ಪಡೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ