ಕಾಂಗ್ರೆಸ್ ನಾವಿಕನಿಲ್ಲದ ದೋಣಿ;ಚಿಕ್ಕ ಪುಟ್ಟ ನಾಯಕರು ಕುರ್ಚಿಗಾಗಿ ಹೋರಾಟ: ಶೋಭಾ ಕರಂದ್ಲಾಜೆ
Team Udayavani, Mar 2, 2021, 5:05 PM IST
ಚಿಕ್ಕಮಗಳೂರು: ಕಾಂಗ್ರೆಸ್ ನಾವಿಕನಿಲ್ಲದ ದೋಣಿಯಂತಾಗಿದೆ. ಕಾಂಗ್ರೆಸ್ ಗೆ ದೆಹಲಿಯಲ್ಲೂ ಲೀಡರ್ ಇಲ್ಲ, ರಾಜ್ಯದಲ್ಲೂ ಲೀಡರ್ ಗಳಿಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ, ಕಾಂಗ್ರೆಸ್ ನಲ್ಲಿ ಲೀಡರ್ ಗಳಾರೂ ಇಲ್ಲ. ಇರೋ ಚಿಕ್ಕ ಪುಟ್ಟ ನಾಯಕರು ಕುರ್ಚಿಗಾಗಿ ಹೋರಾಟ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ:ಮಂಗಳೂರು ಜೈಲು ಮೇಲ್ದರ್ಜೆಗೇರಿಸಲಾಗುವುದು; ಗಾಂಜಾ ಬಳಕೆ ತಡೆಗೆ ಕ್ರಮ: ಅಲೋಕ್ ಕುಮಾರ್
ಕಾಂಗ್ರೆಸ್ ನಲ್ಲಿ ಕುರ್ಚಿಗಾಗಿ ಕಾದಾಟ ಮಾಡುತ್ತಿದ್ದಾರೆ. ದೊಡ್ಡವರು, ಪಟ್ಟಕ್ಕಾಗಿ- ಮುಂದಾಳತ್ವಕ್ಕಾಗಿ ಪರಸ್ಪರ ಕಾದಾಟ ನಡೆಸುತ್ತಿದ್ದಾರೆ. ಕಾಂಗ್ರೆಸ್ ಕಾದಾಟಕ್ಕೆ ಮೈಸೂರು ಪಾಲಿಕೆ ಚುನಾವಣೆ ಉದಾಹರಣೆ ಎಂದರು.
ಈಗಾಗಲೇ ಕಾಂಗ್ರೆಸ್ಸಿಂದ ಜನ ಬೇಸತ್ತಿದ್ದಾರೆ. ಜನ ಸಿದ್ದರಾಮಯ್ಯ ಆಡಳಿತವನ್ನೂ ತಿರಸ್ಕರಿಸಿ ಬಿಜೆಪಿಗೆ ಬೆಂಬಲಿಸಿದ್ದಾರೆ. ಮುಂದಿನ ದಿನಗಳಲ್ಲೂ ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ಸಿಗರು ಕಿತ್ತಾಡುತ್ತಲೇ ಇರಲಿ ಎಂದು ನುಡಿದರು.