ಸಚಿವ ಸ್ಥಾನಕ್ಕಾಗಿ ಹಠ ಮಾಡಿಲ್ಲ,ಹಗ್ಗಜಗ್ಗಾಟವೂ ಇಲ್ಲ ;ಜಿಟಿಡಿ
Team Udayavani, Jun 5, 2018, 3:30 PM IST
ಬೆಂಗಳೂರು: ‘ಜೆಡಿಎಸ್ನಲ್ಲಿ ಎಲ್ಲರೂ ಒಂದಾಗಿದ್ದು, ಯಾರೂ ಸಚಿವ ಸ್ಥಾನಕ್ಕಾಗಿ ಹಗ್ಗಜಗ್ಗಾಟ ಮಾಡಿಲ್ಲ. ಖಾತೆಗಾಗಿ ಪಟ್ಟು ಹಿಡಿದಿಲ್ಲ’ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿಕೆ ನೀಡಿದ್ದಾರೆ.
‘ಯಾರನ್ನು ಸಚಿವರನ್ನಾಗಿ ಮಾಡಬೇಕು ಎನ್ನುವುದು ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡ ಮತ್ತು ರಾಜ್ಯಾಧ್ಯಕ್ಷರಾದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತೀರ್ಮಾನಕ್ಕೆ ಬಿಟ್ಟಿದ್ದೇವೆ’ ಎಂದರು.
’37 ಜನ ಶಾಸಕರಲ್ಲಿ ರಲ್ಲಿ 11 ಸಚಿವ ಸ್ಥಾನ ನಮಗೆ ದೊರಕಿದ್ದು,ಆಪೈಕಿ ಬಿಎಸ್ಪಿಗೂ ಕೂಡ 1 ಸ್ಥಾನ ಕೊಡಬೇಕಿದೆ ಎಂದರು. 10 ಜನರಲ್ಲಿ ಯಾರನ್ನು ಸಚಿವರನ್ನಾಗಿಸಬೇಕು ಎನ್ನುವುದು ದೇವೇಗೌಡರು ಮತ್ತು ಕುಮಾರಸ್ವಾಮಿ ತೀರ್ಮಾನಿಸುತ್ತಾರೆ. ವಿಧಾನ ಪರಿಷತ್ ಸದಸ್ಯರೂ ಆ ಪೈಕಿ ಸೇರಿರಬಹುದು’ ಎಂದರು.
ಲೋಕೋಪಯೋಗಿ ಖಾತೆ ಮಾಧ್ಯಮದವರು ಕೇಳಿದ್ದು !
ಲೋಕೋಪಯೋಗಿ ಖಾತೆಗಾಗಿ ಎಚ್.ಡಿ.ರೇವಣ್ಣ ಮತ್ತು ನಿಮ್ಮ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆಯಲ್ಲಾ ಎಂದು ಕೇಳಿದುದಕ್ಕೆ ಪ್ರತಿಕ್ರಿಯಿಸಿದ ಜಿಟಿಡಿ ‘ಮಾಧ್ಯಮದವರು ಲೋಕೋಪಯೋಗಿ ಖಾತೆ ನಿರ್ವಹಿಸುತ್ತೀರಾ ಕೇಳಿದರು, ನಾನು ಸಿದ್ಧನಿದ್ದೇನೆ ಅಂದಿದ್ದೇನೆ ಹೊರತು ಯಾವುದೇ ಪೈಪೋಟಿ ನಡೆದಿಲ್ಲ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ