ಕಾಂಗ್ರೆಸ್ ನಲ್ಲಿ ಗುಲಾಮಗಿರಿ ಪದ್ದತಿ ಇದೆ, ಸಿದ್ದರಾಮಯ್ಯ ಗುಲಾಮರಾಗಿದ್ದಾರೆ : ಸಿ ಟಿ ರವಿ
Team Udayavani, Jun 1, 2021, 6:28 PM IST
ಬೆಂಗಳೂರು : ಸಿದ್ದರಾಮಯ್ಯ ಅವರಿಗೆ ಜ್ವರ ಎಂಬ ವಿಷಯ ಕೇಳಲ್ಪಟ್ಟೆ. ಅವರು ಆದಷ್ಟು ಬೇಗ ಗುಣಮುಖರಾಗಲಿ. ಅವರೊಬ್ಬ ಉತ್ತಮ ಹಣಕಾಸು ನಿರ್ವಹಿಸಿದ ನಾಯಕ. ಆದರೆ ಬಿಜೆಪಿ ಆಡಳಿತದಿಂದ ದೇಶ 70 ವರ್ಷ ಹಿಂದಕ್ಕೆ ಹೋಗಿದೆ ಎನ್ನುತ್ತಾರೆ. ಅವರ ಮೆದುಳು 70 ವರ್ಷಕ್ಕೆ ಹೋಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.
ಮಲ್ಯನಿಗೆ ಸಾಲ ಕೊಟ್ಟಿದ್ದು ಮೋದಿ ಅಲ್ಲ. ಲಲಿತ್ ಮೋದಿಗೆ ಸಾಲ ಕೊಟ್ಟಿದ್ದು ಮೋದಿ ಅಲ್ಲ, ನಿಮ್ಮ ಪಕ್ಷದ ಚಿದಂಬರಂ, ಸೋನಿಯಾಗಾಂಧಿ ಅವರುಗಳು. ಉದ್ಯಮಿಗಳೊಂದಿಗೆ ಸಂಭಂದ ಇಟ್ಟುಕೊಂಡು ಸಾಲ ನೀಡಿದ್ದಾರೆ. ಕಾಂಗ್ರೆಸ್ ನಲ್ಲಿ ಗುಲಾಮಗಿರಿ ಪದ್ದತಿ ಇದೆ. ಸಿದ್ದರಾಮಯ್ಯ ಗುಲಾಮರಾಗಿದ್ದಾರೆ. ಅವರಿಗೆ ಅಸಹಾಯಕತೆ ಕಾಡುತ್ತಿದೆ. ಕೋವಿಡ್ ನಲ್ಲೂ ಮೋದಿ ಸರ್ಕಾರ ಸಮರ್ಥವಾಗಿ ನಡೆಸಿಕೊಂಡು ಹೋಗಿದೆ.
ಬಾದಾಮಿ, ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ಬಿಜೆಪಿಗೆ ಲೀಡ್ ಬಂದಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕೋವಿಡ್ ನಂತ ಸಂದರ್ಭ ಎದುರಾಗಿರಲಿಲ್ಲ. ರಾಜ್ಯದಲ್ಲಿ ಅತಿ ಹೆಚ್ಚು ಸಾಲ ಮಾಡಿದ ಸಿಎಂ ಎಂದರೆ ಅದು ಸಿದ್ದರಾಮಯ್ಯ, ಅದನ್ನ ಅವರು ಎದೆ ತಟ್ಟಿಕೊಂಡು ಹೇಳಿಕೊಳ್ಳಬಹುದು. ಯಾವ ಕಾರಣಕ್ಕೆ ಅತಿ ಹೆಚ್ಚು ಸಾಲ ಮಾಡಿದಿರಿ..? ಕಾಂಗ್ರೆಸ್ ಹೈಕಮಾಂಡ್ ಗೆ ಕಪ್ಪ ಕೊಡಬೇಕಿತ್ತು, ಆದರೆ ಅಂತಹ ದುಸ್ಸ್ಥಿತಿ ಮೋದಿ ಅವರಿಗೆ ಬಂದಿಲ್ಲ.
ಜನಧನ್ ಖಾತೆಗೆ 3 ಸಾವಿರ ಹಮ ಹಾಕಿದೆ. ಉದ್ದಿಮೆದಾರರ, ಸಣ್ಣ ಕೈಗಾರಿಕೋದ್ಯಮಿಗಳ ಪ್ಯಾಕೇಜ್ ನೀಡಿದೆ. ನಿಮಗೂ ಸತ್ಯ ಗೊತ್ತಿದೆ ಆದರೆ ಸತ್ಯ ಒಪ್ಪಿಕೊಂಡರೆ ಕಾಂಗ್ರೆಸ್ ನಿಂದ ಹೊರ ಬರಬೇಕಾಗುತ್ತದೆ ಆದ್ದರಿಂದ ಸುಮ್ಮನಿದ್ದೀರಿ. ಈ ವಿಚಾರವಾಗಿ ಚರ್ಚೆಗೂ ನಾವು ಸಿದ್ದ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ಸುಮಲತಾ – ನಾವು ಶಾಶ್ವತ ಶತ್ರುಗಳಲ್ಲ: ಕುಮಾರಸ್ವಾಮಿ
Bangaluru cafe ಸ್ಫೋಟದ ಸಂಚುಕೋರ ಎನ್ಐಎ ಬಲೆಗೆ: ಯಾರಿದು ಷರೀಫ್?
Lok Sabha Election: ಬಿಜೆಪಿ-ಜೆಡಿಎಸ್ “ಜಂಟಿ ಸಮರಾಭ್ಯಾಸ’
Congress; ಕೋಲಾರಕ್ಕೆ ಗೌತಮ್ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!
Politics: ಟಿಕೆಟ್ ಹಂಚಿಕೆ ಮರುಪರಿಶೀಲಿಸಿ ಎಂದ ವೀಣಾ ಬೆಂಬಲಿಗರಿಗೆ ಸಿಎಂ ತಿರುಗೇಟು