ಧರ್ಮ ಜನರ ಹೊಟ್ಟೆ ತುಂಬಿಸಲ್ಲ, ಶ್ರೀಲಂಕಾದ ದುರಂತ ಭಾರತದಲ್ಲೂ ಆಗಬಹುದು: ದಿನೇಶ್ ಗುಂಡೂರಾವ್
Team Udayavani, May 13, 2022, 1:13 PM IST
ಬೆಂಗಳೂರು: ಆರ್ಥಿಕ ಶಿಸ್ತಿಲ್ಲದ ನರೇಂದ್ರ ಮೋದಿಯವರ ಆಡಳಿತದಿಂದ ದೇಶದ ಸಾಮಾನ್ಯ ವರ್ಗ ಬದುಕಲು ಹೋರಾಟ ನಡೆಸಬೇಕಾಗಿದೆ. ಮೋದಿಯವರು ದೇಶದ ನೈಜ ಸಮಸ್ಯೆಗಳನ್ನು ಮರೆಮಾಚಲು ಧರ್ಮ ದೇವರು ಎಂಬ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಆದರೆ ಧರ್ಮ ಜನರ ಹೊಟ್ಟೆ ತುಂಬಿಸುವುದಿಲ್ಲ. ಜನರ ಹೊಟ್ಟೆಗೆ ಗತಿಯಿಲ್ಲದ ಸ್ಥಿತಿ ಬಂದರೆ ಶ್ರೀಲಂಕಾದ ದುರಂತ ಭಾರತದಲ್ಲೂ ಆಗಬಹುದು ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮೋದಿಯವರ ಆಡಳಿತದಲ್ಲಿ ಹಣದುಬ್ಬರ 7.79 ಕ್ಕೆ ಏರಿ ಎಂಟು ವರ್ಷದಲ್ಲಿ ಗರಿಷ್ಠ ಸಾಧನೆ ಮಾಡಿದೆ. ಹಸಿವಿನ ಸೂಚ್ಯಂಕದಲ್ಲಿ ಭಾರತಕ್ಕೆ 101ನೇ ಸ್ಥಾನ, ಬಡತನ ಸೂಚ್ಯಂಕದಲ್ಲಿ 66 ನೇ ಸ್ಥಾನ. ನಿರುದ್ಯೋಗದ ದರ 7.83% ಏರಿಕೆ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ. ಪೆಟ್ರೋಲ್ 113, ಡೀಸೆಲ್ 96. ಅಡುಗೆ ಎಣ್ಣೆ 85 ರೂ ನಿಂದ 205 ರೂಪಾಯಿಗೆ ಏರಿಕೆ. ಇದಪ್ಪಾ ಅಚ್ಛೆದಿನ್ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ:ವಿಧಾನ ಪರಿಷತ್- ರಾಜ್ಯಸಭೆ ಚುನಾವಣೆ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ; ಸಿಎಂ ಬೊಮ್ಮಾಯಿ
ಎಂಟು ವರ್ಷಗಳ ಹಿಂದೆ ಸಿಲಿಂಡರ್ ಬೆಲೆ 400 ಇದ್ದಾಗ ‘ದುಬಾರಿ ಕಾಂಗ್ರೆಸ್ ಸಾಕು-ಜನಪರ ಬಿಜೆಪಿ ಬೇಕು’ ಎಂದು ಬಿಜೆಪಿಯವರು ಬೀದಿ ಬೀದಿಯಲ್ಲಿ ಬ್ಯಾನರ್ ಹಾಕಿದ್ದರು. ಈಗ ಸಿಲಿಂಡರ್ 1000 ರೂ. ದಾಟಿದೆ. ಅಕ್ಕಿ, ಗೋದಿ ಹಿಟ್ಟು, ಸಾಬೂನು, ಟೂಥ್ ಪೇಸ್ಟ್ ಜನರ ಕೈಗೆಟುಕದಂತಾಗಿದೆ. ಈಗ ಬಿಜೆಪಿಯವರಿಗೆ ‘ದುಬಾರಿ ಬಿಜೆಪಿ ಸಾಕು’ ಎಂದು ಬ್ಯಾನರ್ ಹಾಕಿಸುವ ಧಮ್ ಇದೆಯೆ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
1
ಮೋದಿಯವರ ಆಡಳಿತದಲ್ಲಿ ಹಣದುಬ್ಬರ 7.79 ಕ್ಕೆ ಏರಿ 8 ವರ್ಷದಲ್ಲಿ ಗರಿಷ್ಠ ಸಾಧನೆ ಮಾಡಿದೆ.
ಹಸಿವಿನ ಸೂಚ್ಯಂಕದಲ್ಲಿ ಭಾರತಕ್ಕೆ 101ನೇ ಸ್ಥಾನ.
ಬಡತನ ಸೂಚ್ಯಂಕದಲ್ಲಿ 66 ನೇ ಸ್ಥಾನ. ನಿರುದ್ಯೋಗದ ದರ 7.83% ಏರಿಕೆ. ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ. ಪೆಟ್ರೋಲ್ 113,ಡೀಸೆಲ್ 96.
ಅಡುಗೆ ಎಣ್ಣೆ ₹85 ಗಳಿಂದ ₹205. ಇದಪ್ಪಾ ಅಚ್ಚೇದಿನ್.— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) May 13, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ