ಸಾಲಬಾಧೆ ಶಂಕೆ:ಒಂದೇ ಕುಟುಂಬದ 6 ಜನ ಆತ್ಮಹತ್ಯೆ; 4 ಮಕ್ಕಳೊಂದಿಗೆ ಬಾವಿಗೆ ಹಾರಿದ ದಂಪತಿಗಳು
Team Udayavani, Jun 28, 2021, 4:45 PM IST
ಶಹಾಪುರ: ಒಂದೇ ಕುಟುಂಬ ಆರು ಜನರು ಸಾಲಬಾಧೆ ತಾಳಲಾರದೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಭೀಮರಾಯ ಸುರಪುರ (45) , ಶಾಂತಮ್ಮ ಸುರಪುರ (36), ಸುಮಿತ್ರಾ (12), ಶ್ರೀದೇವಿ (13), ಶಿವರಾಜ (6), ಲಕ್ಷ್ಮೀ (4), ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಶವ ಪತ್ತೆ ಕಾರ್ಯಾಚರಣೆ ನಡೆಸಿದ್ದು ಐದು ಶವಗಳು ಈಗಾಗಲೇ ದೊರೆತಿದ್ದು ಕುಟುಂಬದ ಇನ್ನೊಬ್ಬರ ಶವಕ್ಕಾಗಿ ತೀವ್ರ ಪತ್ತೆ ನಡೆಸಲಾಗುತ್ತಿದೆ.ಸ್ಥಳಕ್ಕೆ ತಹಸೀಲ್ದಾರ ಜಗನ್ನಾಥ ರಡ್ಡಿ, ಪಿಎಸ್ಐ ಶಾಮಸುಂದರ ನಾಯಕ, ಚಂದ್ರಕಾಂತ ಮೆಕಾಲೆ ಭೇಟಿ ನೀಡಿದ್ದಾರೆ.
ವರದಿ– ಮಲ್ಲಿಕಾರ್ಜುನ ಮುದ್ನೂರ