ಆಮೆಗಳ ಮಾರಾಟ ಜಾಲ: 7 ಮಂದಿ ಸೆರೆ
Team Udayavani, Sep 15, 2019, 3:00 AM IST
ಚಿಕ್ಕಮಗಳೂರು: ಆಮೆಗಳನ್ನು ಹಿಡಿದು ಮಾರಾಟಕ್ಕೆ ಯತ್ನಿಸುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಏಳು ಮಂದಿಯನ್ನು ಬಂಧಿಸಿ ಮೂರು ಆಮೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಗರದ ವಿಜಯಪುರ ಬಡಾವಣೆ ಒಕ್ಕಲಿಗರ ಕಲ್ಯಾಣ ಮಂಟಪ ಎದುರಿನ ರಸ್ತೆಯಲ್ಲಿ ಆಮೆ ಸಾಗಾಟದ ಕುರಿತು ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ದಾಳಿ ನಡೆಯಿತು.
ತರೀಕೆರೆ ತಾಲೂಕು ಉಡೇವಾ ಲಂಬಾಣಿ ಬೀದಿ ಪರಮೇಶ ನಾಯ್ಕ (20), ನಗರದ ಗವನಹಳ್ಳಿ ಸಿ.ಕೆ.ಸುಮನ್ (17), ಮೂಡಿಗೆರೆ ತಾಲೂಕು ಬಿರುಗೂರಿನ ಬಿ.ಎಸ್.ಅಂಕುಶ, ಜಾವಳಿ ಸಮೀಪ ಮೇಲುಕೊಡುಗೆಯ ಎಂ.ಎಸ್.ಸುಕೇಶ್, ಬೀರೂರು ಅಶೋಕ ನಗರದ ಬಿ.ಟಿ.ನಾಗರಾಜ್, ಲಿಂಗದಹಳ್ಳಿಯ ಎಲ್.ಆರ್.ದರ್ಶನ್ ಬಂಧಿತರು. ಬಂಧಿತರಿಂದ ಒಂದು ಜೀವಂತ ಆಮೆ, ಒಂದು ಕಾರು ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ.
2 ಆಮೆ ವಶ: ಮತ್ತೂಂದು ಪ್ರಕರಣದಲ್ಲಿ ನಗರದ ಟೌನ್ ಕ್ಯಾಂಟೀನ್ ಬಳಿ ದಾಳಿ ನಡೆಸಿದ ಅರಣ್ಯ ಸಂಚಾರ ಪೊಲೀಸ್ ದಳದ ಸಿಬ್ಬಂದಿ ನಾರಾಯಣಪುರದ ಈಶ್ವರರೆಡ್ಡಿ ಎಂಬವನನ್ನು ಬಂಧಿಸಿ ಎರಡು ಜೀವಂತ ಆಮೆ ವಶಪಡಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ