ವೇಣುಗೋಪಾಲ್ಗೆ ತಡೆ:ವಿಧಾನಸೌಧದಲ್ಲಿ ಉಗ್ರಪ್ಪ ಕೆಂಡಾಮಂಡಲ !
Team Udayavani, May 19, 2018, 2:40 PM IST
ಬೆಂಗಳೂರು: ವಿಧಾನಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ವಿಶ್ವಾಸಮತ ಸಾಬೀತು ಪಡಿಸಬೇಕಾಗಿದ್ದು ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ. ಇದೇ ವೇಳೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಗೆ ಭದ್ರತಾ ಸಿಬಂದಿಗಳು ತಡೆದಿರುವುದು ಕಾಂಗ್ರೆಸ್ ನಾಯಕರು ಕೆಂಡಾಮಂಡಲವಾಗಲು ಕಾರಣವಾಗಿದೆ.
ವಿಧಾನಪರಿಷತ್ ಸದಸ್ಯ ಉಗ್ರಪ್ಪ ಅವರು ಭದ್ರತಾ ಸಿಬಂದಿಗಳ ಕ್ರಮದ ಕುರಿತು ತೀವ್ರವಾಗಿ ಹರಿಹಾಯ್ದರು.ಅಲ್ಲಾರೀ..ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಅವರಿಗೆ ಲಾಂಜ್ ಪ್ರವೇಶಕ್ಕೆ ಅವಕಾಶ ನೀಡುತ್ತೀರಿ.ಪರಿಷತ್ ಸದಸ್ಯನಾದ ನನ್ನನ್ನೇ ತಡೆಯುತ್ತೀರಿ ಎಂದು ಕೆಂಡಾಮಂಡಲರಾದರು.
ವೇಣುಗೋಪಾಲ್ ಅವರು ತಡೆದಾಗ ಏನೂ ಮಾತನಾಡದೇ ಸುಮ್ಮನೆ ಜಗಳ ಬೇಡ ಎಂದು ತೆರಳಿದರು. ಆದರೆ ಉಗ್ರಪ್ಪ ಅವರು ಇತರ ಕಾಂಗ್ರೆಸ್ ನಾಯಕರೊಂದಿಗೆ ಭದ್ರತಾ ಸಿಬಂದಿಗಳನ್ನು ತರಾಟೆಗೆ ತೆಗೆದುಕೊಂಡು 2 ಪಕ್ಷದ ನಾಯಕರಿಗೆ ಬೇರೆ ಬೇರೆ ನ್ಯಾಯ ಯಾಕೆ ಎಂದು ಪ್ರಶ್ನಿಸಿದರು.