“ಅನುಸರಣೆ’ಗೆ ಹೆಚ್ಚು ಒತ್ತು ನಿರೀಕ್ಷೆಗಳ ಭಾರಕ್ಕೆ ಕುಸಿಯದ ಬಜೆಟ್‌


Team Udayavani, Feb 2, 2017, 3:50 AM IST

budget.jpg

ಗರಿಷ್ಠ ಮೌಲ್ಯದ ನೋಟುಗಳನ್ನು ರದ್ದುಗೊಳಿಸಿದ ಕಾರಣ ಬೊಕ್ಕಸಕ್ಕೆ ಧಾರಾಳ ಆದಾಯ ಹರಿದು ಬಂದಿರುವುದರಿಂದ ಹತ್ತಾರು ಕೊಡುಗೆಗಳನ್ನು ನಿರೀಕ್ಷಿಸಿದವರಿಗೆ ಬಜೆಟ್‌ ನಿರಾಶೆಯುಂಟು ಮಾಡಿರಬಹುದು. ಆದರೆ ರೈತರು, ಮಧ್ಯಮ ವರ್ಗದವರು ಮತ್ತು ಗ್ರಾಮೀಣ ಭಾಗದವರನ್ನು ಆದ್ಯತೆಯಾಗಿಟ್ಟುಕೊಂಡು ಮಂಡಿಸಿದ ಬಜೆಟ್‌ನಲ್ಲಿ ಹಣಕಾಸು ಸಚಿವ ಅರುಣ್‌ ಜೇಟಿÉ ದೀರ್ಘಾವಧಿಯಲ್ಲಿ ಫ‌ಲ ನೀಡುವಂತಹ ಹಲವು ಕೊಡುಗೆ, ಕ್ರಮಗಳನ್ನು ಪ್ರಕಟಿಸಿದ್ದಾರೆ. ಇದರ ಜತೆಗೆ ಹೂಡಿಕೆಗೆ ಉತ್ತೇಜನ ನೀಡುವ ಸಲುವಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ವ್ಯವಹಾರ ಪಾರದರ್ಶಕತೆ, ಕಪ್ಪುಹಣ, ಭ್ರಷ್ಟಾಚಾರ ತಡೆ ತಣ್ತೀವನ್ನು ಗಟ್ಟಿಯಾಗಿ ಅಪ್ಪಿಕೊಂಡು ಜನಪ್ರಿಯ ಕೊಡುಗೆಗಳ ಬದಲಿಗೆ “ಅನುಸರಣೆ’ಗೆ ಹೆಚ್ಚು ಒತ್ತು ನೀಡಿರುವ ಬಜೆಟ್‌ ಇದು. 

ನಗದು ವ್ಯವಹಾರಕ್ಕೆ 3 ಲಕ್ಷ ರೂ.ಗಳ ಮಿತಿ ವಿಧಿಸಿದ್ದು ಕಪ್ಪು ಹಣ ಜಮೆಯಾಗುವುದನ್ನು ತಡೆಯುವ ಮಹತ್ವದ ಕ್ರಮಗಳಲ್ಲಿ ಒಂದು. ಡಿಜಿಟಲ್‌ ವ್ಯವಹಾರವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಘೋಷಿಸಿರುವ ಈ ನಿರ್ಧಾರದಿಂದಾಗಿ ಭವಿಷ್ಯದ ಹೆಚ್ಚಿನೆಲ್ಲ ವಹಿವಾಟುಗಳು ಬ್ಯಾಂಕ್‌ ಮೂಲಕ ನಡೆಯುವುದರಿಂದ ಆರ್ಥಿಕ ಚಟುವಟಿಕೆಗಳ ಪಾರದರ್ಶಕತೆ ಹೆಚ್ಚಾಗಲಿದೆ. ಅಂತೆಯೇ ರಾಜಕೀಯ ಪಕ್ಷಗಳ ನಗದು ದೇಣಿಗೆ ಮಿತಿಯನ್ನು 20,000 ರೂ.ನಿಂದ 2,000 ರೂ.ಗಿಳಿಸಿದ್ದು ಇನ್ನೊಂದು ದಿಟ್ಟ ಕ್ರಮ. ಇಷ್ಟರ ತನಕ 20,000 ರೂ. ತನಕ ಬೇನಾಮಿಯಾಗಿ ದೇಣಿಗೆ ಸ್ವೀಕರಿಸಲು ಅವಕಾಶ ಇತ್ತು. ಈ ಮೂಲಕವೇ ಕೋಟಿಗಟ್ಟಲೆ ಹಣ ಪಕ್ಷಗಳಿಗೆ ಹರಿದು ಬರುತ್ತಿತ್ತು. ಇದಕ್ಕೆ ಲೆಕ್ಕ ತೋರಿಸುವ ಅಗತ್ಯವಿಲ್ಲದ ಕಾರಣ ಕಪ್ಪು ಹಣ ಸುಲಭವಾಗಿ ಬಿಳಿಯಾಗುತ್ತಿತ್ತು. ಇನ್ನು ಮುಂದೆ ಇದಕ್ಕೆ ಆಸ್ಪದವಿಲ್ಲ. 

ಆದಾಯ ತೆರಿಗೆ ಸ್ಲಾéಬ್‌ನ್ನು ಸ್ಪರ್ಶಿಸುವ ಗೋಜಿಗೆ ಹೋಗದೆ ಜೇಟಿÉ ವೇತನ ವರ್ಗದವರನ್ನು ನಿರಾಶೆಗೊಳಿಸಿದ್ದಾರೆ. ಸ್ಲಾéಬ್‌ ವ್ಯವಸ್ಥೆಯನ್ನು ಯಥಾಸ್ಥಿತಿ ಯಲ್ಲಿಟ್ಟು 2.5 ಲ. ರೂ.ಗಳಿಂದ 5 ಲ. ರೂ. ತನಕದ ಆದಾಯವಿರುವವರ ತೆರಿಗೆ ದರವನ್ನು ಶೇ. 10ರಿಂದ ಶೇ. 5ಕ್ಕಿಳಿಸಿರುವುದಷ್ಟೇ ಆಗಿರುವ ಬದಲಾವಣೆ. ಆದಾಯ ತೆರಿಗೆ ಮಿತಿ 3.5 ಲಕ್ಷ ರೂ.ಗೇರಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಹೆಚ್ಚು ಜನರನ್ನು ತೆರಿಗೆ ವ್ಯಾಪ್ತಿಯೊಳಗೆ ತರುವ ಸಲುವಾಗಿ ಸ್ಲಾéಬ್‌ ಬದಲಾಯಿಸುವ ಗೋಜಿಗೆ ಹೋಗಿಲ್ಲ. 

ಇದು ಜನಪ್ರಿಯ ಬಜೆಟ್‌ ಅಲ್ಲ. ಜನಸಾಮಾನ್ಯರ ಬದುಕಿನಲ್ಲಿ ತಕ್ಷಣಕ್ಕೆ ಬಜೆಟ್‌ನಿಂದ ದೊಡ್ಡ ಬದಲಾವಣೆಯೇನೂ ಆಗುವುದಿಲ್ಲ. ಆದರೆ, ಗ್ರಾಮೀಣ ಪ್ರದೇಶ, ಕೃಷಿ, ನೀರಾವರಿ, ವಸತಿ ಮುಂತಾದ ಬಡವರು, ಕೆಳಮಧ್ಯಮ ವರ್ಗದವರನ್ನು ತಟ್ಟುವ ವಲಯಗಳಿಗೆ ಆದ್ಯತೆ ನೀಡಿರುವುದರಿಂದ ಮುಂಬರುವ ದಿನಗಳಲ್ಲಿ ಸಾಮಾಜಿಕ ಸಮತೋಲನವನ್ನು ಕಾಯ್ದುಕೊಳ್ಳಲು ನೆರವಾಗಬಹುದು.

ಟಾಪ್ ನ್ಯೂಸ್

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

5-uv-fusion

Yugadi: ವರುಷದ ಆದಿ ಯುಗಾದಿ

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

4-uv-fusion

Yugadi: ಯುಗದ ಆರಂಭದ ಮುನ್ನುಡಿ ಈ ಯುಗಾದಿ

1-wqeqwewq

Congress ನಿಂದ ಬದುಕು; ಬಿಜೆಪಿಯದ್ದು ಭಾವನೆಗಳ ಚೆಲ್ಲಾಟ: ಡಾ| ಭಂಡಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.