ಬದ್ಧತೆ, ಹಿಂದುತ್ವ ಪ್ರತಿಪಾದನೆ ಮಾಡುವವರಿಗೆ ಪಕ್ಷ ಜವಾಬ್ದಾರಿ ನೀಡುತ್ತದೆ: ನಾರಾಯಣ ಸ್ವಾಮಿ
Team Udayavani, Aug 16, 2021, 4:58 PM IST
ಬೆಂಗಳೂರು: ಯಾವ ಕಾರ್ಯಕರ್ತನಿಗೆ ಬದ್ದತೆ ಇದೆ, ಹಿಂದುತ್ವ ಪ್ರತಿಪಾದನೆ ಮಾಡುತ್ತಾನೋ ಅವನಿಗೆ ಪಕ್ಷ ಜವಾಬ್ದಾರಿ ನೀಡುತ್ತದೆ. ಇದಕ್ಕೆ ನಾನೇ ಉದಾಹರಣೆ. ಪ್ರಧಾನಿ ಮೋದಿ, ಅಮಿತ್ ಶಾ, ಸಂತೋಷ್ ಅವರು ಗುರುತಿಸಿದ್ದಾರೆ. ಸಂಪುಟದಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಕೇಂದ್ರದ ಎಲ್ಲಾ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೇಂದ್ರ ಸಚಿವ ನಾರಾಯಣ ಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಮೋದಿ ಸಂಪುಟದಲ್ಲಿ ರಾಜ್ಯದ ಜನ ನನ್ನನ್ನು ಊಹಿಸಿರಲಿಲ್ಲ. ನನಗಿಂತ ಅನೇಕ ಹಿರಿಯರಿದ್ದರು. ಪಕ್ಷದ ಸಿದ್ಧಾಂತಕ್ಕೆ ಕೆಲಸ ಮಾಡಿದ ಅನೇಕರಿದ್ದರು. ಆದರೆ ನನಗೆ ದೆಹಲಿಗೆ ಬನ್ನಿ ಚರ್ಚೆ ಮಾಡಬೇಕು ಅಂತ ಮೋದಿ ಆಹ್ವಾನ ನೀಡಿದರು ಎಂದರು.
ಇದನ್ನೂ ಓದಿ:‘ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ’ ಕಾರ್ಯಕ್ರಮಕ್ಕೆ ಸಚಿವ ಅಶೋಕ್ ಚಾಲನೆ
ಬಿಜೆಪಿ ಬಗ್ಗೆ ಅನೇಕ ವ್ಯಾಖ್ಯಾನ ಇತ್ತು. ಬ್ರಾಹ್ಮಣರ ಪಕ್ಷ ಅಂತ ಹೇಳಲಾಗಿತ್ತು. ಚುನಾವಣಾ ಪೂರ್ವ ಘೋಷಣೆ ಮಾಡುವ ಪರಂಪರೆ ಇತ್ತು. 2013ರಲ್ಲಿ ಗುಜರಾತ್ನ ಸಿಎಂ ಮೋದಿ ಹೆಸರನ್ನು ಪ್ರಧಾನಿಯಾಗಿ ಘೋಷಣೆ ಮಾಡಲಾಯಿತು. ಈ ಮೂಲಕ ಹಿಂದುಳಿದ ನಾಯಕನನ್ನ ಪ್ರಧಾನಿ ಹೆಸರಿಗೆ ಸೂಚಿಸಲಾಯ್ತು. ಈ ದೇಶದಲ್ಲಿ ಅನೇಕ ವರ್ಷಗಳು ಕಾಂಗ್ರಸ್ ಆಡಳಿತ ಮಾಡಿದೆ. ದಲಿತರಿಗೆ ಅಧಿಕಾರ ನೀಡಿದ್ದು ದುರ್ಬಿನ್ ಹಾಕಿ ನೋಡಿದ್ರು ಸಿಗೋದಿಲ್ಲ. ಆದರೆ ನಮ್ಮಲ್ಲಿ ದಲಿತರನ್ನು ರಾಷ್ಟ್ರಪತಿ, ರಾಜ್ಯಪಾಲರನ್ನಾಗಿ ಮಾಡಲಾಗಿದೆ ಎಂದರು.
ವಿಧಾನಸಭಾ ಚುನಾವಣೆಯಲ್ಲಿ ನಾನು ಸೋತೆ. ಆದರೆ ಒಂದೇ ವರ್ಷದಲ್ಲಿ ಲೋಕಸಭೆಗೆ ಟಿಕೆಟ್ ನೀಡಿದರು. ಹೊರಗಿನವನು ಎಂದೂ ನೋಡದೆ ಜನ ಗೆಲ್ಲಿಸಿದ್ದರು ಎಂದು ನಾರಯಣ ಸ್ವಾಮಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ