ಉಪೇಂದ್ರ ಸೋತರೆ ಮತ್ತೆ ಚಿತ್ರರಂಗಕ್ಕೆ ಹೋಗ್ತಾರೆ…


Team Udayavani, Aug 16, 2017, 10:45 AM IST

16-PTI-15.jpg

ಉಪೇಂದ್ರ ಸಮಾಜ ಶುದ್ಧಿ ಮಾಡಲು “ಓಂ’ಕಾರ ಹಾಡಿದ್ದಾರೆ. ಈ ತೀರ್ಮಾನದ ಬೇರುಗಳನ್ನು ಹುಡುಕುತ್ತಾ ಹೋದರೆ ಈ ಅಹೋರಾತ್ರ
ಎದುರಾಗುತ್ತಾರೆ. ಇವರ ಮೂಲ ಹೆಸರು ನಟೇಶ್‌ ಪೋಲೇಪಲ್ಲಿ. ಬರಹಗಾರರು, ವಾಸ್ತು ತಜ್ಞರು, ಅಧ್ಯಾತ್ಮಿಕ ಚಿಂತಕರು. ಉಪೇಂದ್ರರ
ಥಿಂಕ್‌ಟ್ಯಾಂಕರ್‌ ಕೂಡ. ಉಪ್ಪಿ ರಾಜಕೀಯ ರಂಗಕ್ಕೆ ಹೆಜ್ಜೆ ಊರಲು ಇವರ ಪಾಲೂ ಇದೆ. ಪರದೆ ಹಿಂದಿನ ಅನೇಕ “ಬುದ್ಧಿವಂತನ’ ಸತ್ಯಗಳನ್ನು
“ಉದಯವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.  

ಉಪೇಂದ್ರ ಅವರು ರಾಜಕೀಯಕ್ಕೆ ಬರುವ ನಿರ್ಧಾರ ಸರೀನಾ? 
ಖಂಡಿತ ಸರಿ. ಇದರಲ್ಲಿ ತಪ್ಪೇನಿದೆ ಹೇಳಿ? ಕೆಟ್ಟಿರೋ ವ್ಯವಸ್ಥೆಗೆ ಚಿಕಿತ್ಸೆ ಕೊಡೋಕೆ ಬಂದಿದ್ದಾರೆ. 29 ವರ್ಷದ ಸ್ನೇಹದ ಆಧಾರದಲ್ಲಿ ಹೇಳುವುದಾದರೆ ಉಪ್ಪಿ ತಪ್ಪು ನಿರ್ಧಾರ ತಗೊಳ್ಳಲೇ ಇಲ್ಲ. ಸ್ನೇಹಿತರು, ಹಿತೈಷಿಗಳ ಕೇಳದೆ ತೀರ್ಮಾನ ತಗೊಂಡಿದ್ದಿಲ್ಲ. ನಿಮಗೆ ಗೊತ್ತಾ? ಹೀ ಈಸ್‌ ಗುಡ್‌ ಡಿಸಿಷನ್‌ ಮೇಕರ್‌, ಹೀ ಈಸ್‌ ಬೆಸ್ಟ್‌ ಸಜೆಶನ್‌ ಕಲೆಕ್ಟರ್‌, ಹೀ ಈಸ್‌ ದ ಅಲ್ಟಿಮೇಟ್‌ ಲಿಸನರ್‌. ಗಂಟೆಗಟ್ಟಲೆ ನೀವು ಹೇಳ್ಳೋದನ್ನು ಕೇಳ್ತಾರೆ. ಈ ಗುಣ ನರೇಂದ್ರ ಮೋದಿಯಲ್ಲೂ ಇದೆ. ಕೇಳ್ಳೋ ತಾಳ್ಮೆ ಇರೋರಿಗೆ ಮಾಡೋದು ಬಹಳ ಸುಲಭ.

ಪ್ರಶ್ನೆ ಇರೋದು ರಾಜಕೀಯ ಅವ್ಯವಸ್ಥೆ ಬಗ್ಗೆ?
ಉಪೇಂದ್ರರ ಬಗ್ಗೆ ಅಲ್ಲ.  ವ್ಯವಸ್ಥೆ ಸರಿ ಇದ್ದಿದ್ದರೆ ಉಪ್ಪಿ ಪಾಲಿಟಿಕ್ಸ್‌ಗೆ ಬರ್ತಾನೇ ಇರಲಿಲ್ಲ. ಏನಾದರೂ ಸಮಸ್ಯೆ ಅಂದರೆ ಅದು ಮನುಷ್ಯನ  ಕೈವಾಡವಾ, ನೇಚರ್‌ ಕೈವಾಡವ ನೋಡ್ತಾರೆ. ಅದನ್ನೂ ಮೀರಿದ್ದು ಏನಾದರೂ ಆಗಿದ್ದರೆ ಸರಿಪಡಿಸೋಕೆ ಚಡಪಡಿಸುತ್ತಾರೆ. ಈಗ ಮಾಡುತ್ತಿರುವುದೂ ಅದನ್ನೇ. ನಮ್ಮ ಜನ, ನಾಯಕರೂ ಇಬ್ಬರೂ ಭ್ರಷ್ಟವ್ಯವಸ್ಥೆಯಲ್ಲಿ ಸಿಲುಕಿದ್ದಾರೆ. ಅದರಿಂದ ಹೊರ ತರುವುದಕ್ಕೆ ಉಪ್ಪಿ ರಾಜಕೀಯಕ್ಕೆ ಧುಮುಕಿದ್ದಾರೆ.

ಈ ರಾಜಕೀಯ ನಿರ್ಧಾರ ನಿನ್ನೆ, ಮೊನ್ನೆಯದಾ?
ಇಲ್ಲ, ಇಲ್ಲ. ಅವರಿಗೆ ಅದು ಇನ್‌ಬಿಲ್ಟ್ ನೇಚರ್‌. ಸ್ಪಂದಿಸುವ ಗುಣ ಮೊದಲಿಂದಲೂ ಇದೆ. ದೇಶದ ಬಗ್ಗೆ ಚಿಂತನೆ ಮಾಡೋದು, ಸಮಾಜದ ಸಮಸ್ಯೆಗಳನ್ನು ಬಿಡಿಸೋಕೆ ಹೊಸದೇನಾದರೂ ಮಾಡಬೇಕು ಅನ್ನೋ ಪ್ರಾಮಾಣಿಕ ತುಡಿತ ಎಷ್ಟೋ ವರ್ಷಗಳಿಂದ ನೋಡ್ತಾನೇ ಇದ್ದೀನಿ.

ಉಪೇಂದ್ರ ಬೇರೆ ಪಕ್ಷ, ಅದರ ನಾಯಕರನ್ನು ಹೇಗೆ ನೋಡ್ತಾರೆ?
ಯಾವುದೇ ಪಕ್ಷವನ್ನಾಗಲೀ, ಯಾವುದೇ ವ್ಯಕ್ತಿಯನ್ನಾಗಲಿ ಬೈಯ್ಯೋದನ್ನು ನಾನು ನೋಡಿಯೇ ಇಲ್ಲ. ಅವರಿಗೆ ಮನಮೋಹನ್‌ ಸಿಂಗ್‌, ಮೋದಿ, ದೇವೇಗೌಡರು ಹೀಗೆ ಎಲ್ಲರ ಬಗ್ಗೆನೂ ಸಮಾನ ಗೌರವವಿದೆ. ಸಾರ್‌, ಸಿಬಿಐ ರೈಡ್‌ ಆಗ್ತಿದೆ ಅಂದರೆ. ಅದು ಸಮಸ್ಯೆನೇ ಅಲ್ಲ. ವ್ಯವಸ್ಥೆಯಲ್ಲಿ
ಲೋಪ ಇದೆ. ಅದನ್ನು ಮೊದಲು ಸರಿಪಡಿಸಬೇಕು. ಕಳ್ಳ ಮನೆಯಲ್ಲಿದ್ದರೂ, ಕಳ್ಳತನ ಆಗಬಾರದು ಮನೆಯ ಸಿಸ್ಟಮ್‌ ಆ ರೀತಿ ಇರಬೇಕು ಅಂತಾರೆ.

ರಾಜಕೀಯ ಅನ್ನೋದು ಕೆಸರಾಗಿದೆ. ಅದರಲ್ಲಿ ಇಳಿದರೆ ನಿಮ್ಮ ಸ್ನೇಹಿತರಿಗೂ ಅದು ಮೆತ್ತಿಕೊಳ್ಳಲ್ವೇ?
ಆಗೊಲ್ಲ. ಸಿನಿಮಾದಲ್ಲಿ ದುಡೀತಾರೆ, ಸಂಬಳ ತಗೋತಾರೆ. ಪಾಲಿಟಿಕ್ಸ್‌ನಲ್ಲೂ ದುಡೀತಾರೆ, ಸಂಬಳ ತಗೋತಾರೆ ಅಷ್ಟೇ. ಉಪ್ಪಿಗೂ ಕಡುಬಡತನ ಇತ್ತು. ಚಿಕ್ಕ ಮನೆ. ಇಂಥ ಸಂದರ್ಭದಲ್ಲಿ ಅವರು ಕರಪ್ಟ್ ಆಗಬಹುದಿತ್ತು ಅಲ್ವಾ? ಆಗಲಿಲ್ಲ. ಎಪಿಎಸ್‌ ಕಾಲೇಜಲ್ಲಿ ಯಮಧರ್ಮರಾಯಣ ಅನ್ನೋ ನಾಟಕಮಾಡುತ್ತಿದ್ದರು. ಆಗ ಒಂದಷ್ಟು ಹಣ ಸಿಗುತ್ತಿತ್ತು. ಅದರಲ್ಲಿ ಖರ್ಚುಗಳನ್ನೆಲ್ಲ ತೆಗೆದು ಬರಿಗೈಯಲ್ಲಿ ಮನೆಗೆ ಹೋಗುತ್ತಿದ್ದರು. ಅಂದಿನ ಆ ಅಕೌಂಟೆಬಲಿಟಿ ಇಂದಿಗೂ ಕಾಪಾಡಿಕೊಂಡಿದ್ದಾರೆ. ಅಂದರೆ, ಹಸಿವು, ಬಡತನ ಇದ್ದಾಗ ಹುಟ್ಟುವ ಆಸೆ ಇದೆಯಲ್ಲ, ಅದಕ್ಕೆ ಯಾರನ್ನ ಬೇಕಾದರೂ ಕರಪ್ಟ್ ಮಾಡುವ ಶಕ್ತಿ ಇರುತ್ತದೆ. ಉಪ್ಪಿಗೆ ಇವ್ಯಾವುದೂ ನಾಟಲಿಲ್ಲ. ಇನ್ನು ಕೆಸರು ಮೆತ್ತಿಕೊಳ್ಳೋದು ಹೇಗೆ ಹೇಳಿ?

ಉಪ್ಪಿ ಚಿತ್ರರಂಗಕ್ಕೆ ಬಂದಿದ್ದು ರಾಜಕೀಯ ಸೇರಕ್ಕಾ?
ಹಾಗಂತಲ್ಲ, ಅವರು ಚಿತ್ರರಂಗದಲ್ಲಿ ತೃಪ್ತಿ ಪಡೋಕೆ ಶುರು ಮಾಡಿದರು. ತೃಪ್ತಿ ಅಂದರೇನು? ಸಿನಿಮಾ ಮೂಲಕ ಸಮಾಜದ ಅಂಕುಡೊಂಕುಗಳ ಕರೆಕ್ಷನ್‌ ಹಾಕ್ತಾ ಹೋದರು.  ಜನರನ್ನು ಸರಿ ಮಾಡೋದು ಹೇಗೆ? ಚಿತ್ರದ ಮೂಲಕ ಜನಕ್ಕೆ ಮೆಸೇಜ್‌ಗಳನ್ನು ಕೊಡಬಹುದಾ? ಅನ್ನೋ ಪ್ರಯೋಗ ಶುರು ಮಾಡಿದರು.

ಈಗ ಹೇಳಿ ಉಪ್ಪಿ ಸೋತರೆ ಮುಂದೇನು?
ಉಪ್ಪಿಗೂ ನನಗೂ ಸೋಲೂ ಗೆಲುವೆ. ಸೋತಾಗ ಹತಾಶರಾ ಗೋದು, ಗೆದ್ದಾಗ ಅಹಂಕಾರ ಪಡೋದು ಇಲ್ಲವೇ ಇಲ್ಲ. ಉಪ್ಪಿ ಗೆಲುವಿನಂತೆ ಸೋಲನ್ನು ಬಹಳ ಎಂಜಾಯ್‌ ಮಾಡ್ತಾರೆ. ರಾಜ ಕಾರಣದಲ್ಲಿ ಸೋತರೆ ಚಿತ್ರರಂಗ ಇದೆಯಲ್ಲಾ? ಉಪ್ಪಿ ಒಬ್ಬರೇ ಗೆದ್ದರೆ ಅವರ ಏರಿಯಾವನ್ನು ಜನ ತಿರುಗಿ ನೋಡುವ ಹಾಗೇ ಮಾಡ್ತಾರೆ. 10 ಜನ ಗೆದ್ದರು ಅಂತಿಟ್ಟುಕೊಳ್ಳಿ ದೇಶವೇ ಇವರ ಕಡೆ ತಿರುಗುವ ಹಾಗೇ ಮಾಡ್ತಾರೆ. 200 ಸೀಟು ಬಂದರೆ ಇಡೀ ಜಗತ್ತೇ ಇವರ ಕಡೆ ನೋಡುವ ಹಾಗೇ ಮಾಡ್ತಾರೆ.

ಸಂದರ್ಶನ: ಕಟ್ಟೆ ಗುರುರಾಜ್‌

ಟಾಪ್ ನ್ಯೂಸ್

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ

Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.