ಮೋದಿ ಕೊಂಡಾಡಿದ ದರ್ಶನ್
Team Udayavani, Jan 30, 2018, 7:56 AM IST
ಮೈಸೂರು: ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ಬಗ್ಗೆ ತಾವು ಬರೆದ ಪತ್ರವನ್ನು ಪ್ರಧಾನಿ ಮೋದಿ ತಮ್ಮ ಮನ್ ಕಿ ಬಾತ್
ನಲ್ಲಿ ಪ್ರಸ್ತಾಪಿಸಿರುವುದಕ್ಕೆ ಮೈಸೂರಿನ ದರ್ಶನ್ ಹರ್ಷಚಿತ್ತರಾಗಿದ್ದಾರೆ. ಮೈಸೂರಿನ ಬಿಎಂಶ್ರೀ ನಗರ ನಿವಾಸಿ ಅರ್ಚಕ ಪುರುಷೋತ್ತಮ್ ಅವರ ಏಕೈಕ ಪುತ್ರ ದರ್ಶನ್. ಬೆಂಗಳೂರಿನಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಲಿ.ನಲ್ಲಿ ಉದ್ಯೋಗಿ. ಅರ್ಚಕರಾಗಿದ್ದ 70 ವರ್ಷದ ವಯೋವೃದ್ಧ ತಂದೆ ಪುರುಷೋತ್ತಮ್ ಅವರಿಗೆ 7 ವರ್ಷಗಳ ಹಿಂದೆ ಪಾರ್ಶ್ವವಾಯು ತಗುಲಿದ ಪರಿಣಾಮ ಅದರ ಚಿಕಿತ್ಸೆವಾಗಿ ಪ್ರತಿ ತಿಂಗಳೂ ಸುಮಾರು 6 ಸಾವಿರ ರೂ. ಮೊತ್ತದ ಔಷಧಗಳನ್ನು ಖರೀದಿಸಬೇಕಿತ್ತು.
ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿರುವ ದರ್ಶನ್, ವಾರಕ್ಕೊಮ್ಮೆ ಮೈಸೂರಿಗೆ ಬಂದು ಹೋಗುತ್ತಾರೆ. ಹೀಗಿರುವಾಗ ಬೆಂಗಳೂರಿನ ಎನ್. ಆರ್.ಕಾಲೋನಿಯಲ್ಲಿ ತಮ್ಮ ಮಗಳಿಗೆ ಪಲ್ಸ್ ಪೋಲಿಯೋ ಹನಿ ಹಾಕಿಸಲು ಹೋದಾಗ ಔಷಧ ಅಂಗಡಿಯ ಮುಂದೆ ಜನರು ಸಾಲುಗಟ್ಟಿ ನಿಂತಿರುವುದನ್ನು ಕಂಡು ಅಚ್ಚರಿಯಿಂದ ಈ ಬಗ್ಗೆ ವಿಚಾರಿಸಿದ ದರ್ಶನ್ ಅವರಿಗೆ ಪ್ರಧಾನಮಂತ್ರಿ ಜನೌಷಧ ಕೇಂದ್ರದ ಬಗ್ಗೆ ಮಾಹಿತಿ ದೊರೆತಿದೆ. ಕೂಡಲೇ ಅಂತಜಾìಲದಲ್ಲಿ ಹೆಚ್ಚಿನ ಮಾಹಿತಿ ಪಡೆದು ತಾವೂ ಕೂಡ ಪ್ರಧಾನಮಂತ್ರಿ ಜನೌಷಧ ಕೇಂದ್ರಕ್ಕೆ ಹೋಗಿ ತಮ್ಮ ತಂದೆಗೆ ಬೇಕಾದ ಔಷಧಗಳನ್ನು ಖರೀದಿಸುತ್ತಾರೆ.
ದುಷ್ಪರಿಣಾಮವಿಲ್ಲ: ಅಚ್ಚರಿ ಎಂದರೆ ಪ್ರತಿ ತಿಂಗಳು 6 ಸಾವಿರ ರೂ ನೀಡಿ ಖರೀದಿಸುತ್ತಿದ್ದ ಔಷಧಗಳಿಗೆ ಜನೌಷಧ ಕೇಂದ್ರದಲ್ಲಿ 1500ರೂ.ಗಳಿಗೆ ದೊರಕುತ್ತಿದೆ. ಜನೌಷಧ ಕೇಂದ್ರಗಳಿಗೆ ಪ್ರಚಾರ ಇಲ್ಲ ಎನ್ನುವುದನ್ನು ಬಿಟ್ಟರೆ, ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಔಷಧಗಳ ಸೇವನೆಯಿಂದ ತಂದೆಗೆ ಯಾವುದೇ ದುಷ್ಪರಿಣಾಮ ಬೀರಿಲ್ಲ. ವಾರಕ್ಕೊಮ್ಮೆ ಮೈಸೂರಿಗೆ ಹೋದಾಗ ಸಯ್ನಾಜಿರಾವ್ ರಸ್ತೆ, ಸರಸ್ವತಿ ಥಿಯೇಟರ್ ಬಳಿ, ಜಯನಗರಗಳಲ್ಲಿರುವ ಜನೌಷಧ ಕೇಂದ್ರಗಳಲ್ಲಿ ತಂದೆಗೆ ಬೇಕಾದ ಔಷಧಗಳನ್ನು ತೆಗೆದುಕೊಂಡು ಹೋಗುತ್ತೇನೆ. ವೈದ್ಯರು ಬರೆದ ಎಲ್ಲಾ ಔಷಧಗಳೂ ಒಂದೇ ಕೇಂದ್ರದಲ್ಲಿ ದೊರೆಯದಿದ್ದರೂ ಎಲ್ಲಾ ಔಷಧಗಳೂ ಜನೌಷಧ ಕೇಂದ್ರಗಳ ಮಳಿಗೆಯಲ್ಲೇ ದೊರೆಯುತ್ತವೆ ಎನ್ನುತ್ತಾರೆ ದರ್ಶನ್.
ವೃದ್ಧಿಯಾಗಲಿ: ಜನೌಷಧ ಕೇಂದ್ರಗಳ ಸಂಖ್ಯೆ ಹೆಚ್ಚಾಗಬೇಕು. ಜತೆಗೆ ಇದರ ಬಗ್ಗೆ ಹೆಚ್ಚಿನ ಪ್ರಚಾರ ದೊರೆತು, ಸಾರ್ವಜನಿ ಕರಲ್ಲಿ ಅರಿವು ಮೂಡಿಸುವ ಕೆಲಸವಾಗ ಬೇಕಿದೆ. ಸಾಮಾನ್ಯವಾಗಿ ಸರ್ಕಾರಿ ಯೋಜನೆಗಳೆಂದರೆ ಯಾವುದೋ ಒಂದು ವರ್ಗಕ್ಕೆ ಸೀಮಿತವಾಗಿರುತ್ತವೆ. ಇಲ್ಲವೇ ಬಿಪಿಎಲ್ ಪಡಿತರ ಚೀಟಿ ಇರಬೇಕು ಎನ್ನುತ್ತಾರೆ. ಆದರೆ, ಪ್ರಧಾನ ಮಂತ್ರಿ ಜನೌಷಧ ಕೇಂದ್ರದಲ್ಲಿ ಆ ರೀತಿಯ ಯಾವುದೇ ಕಟ್ಟುಪಾಡುಗಳಿಲ್ಲ. ಅಗತ್ಯವಿದ್ದ ಯಾರು ಬೇಕಾದರು ಇಲ್ಲಿ ಔಷಧ ಖರೀದಿಸಬಹುದು. ಇದು ಜನರಿಗೆ ಬಹು ಉಪಯೋಗಿ ಯೋಜನೆ ಎಂದರು.
ಸಂತಸವಾಗಿದೆ
ಹಿಂದೆಲ್ಲಾ ಪ್ರಧಾನಮಂತ್ರಿಯವರನ್ನು ಮಾತನಾಡಿಸುವುದಿರಲಿ, ಹತ್ತಿರದಿಂದ ನೋಡುವುದು ಕೂಡ ಕನಸಿನ ಮಾತೇ ಆಗಿತ್ತು. ಆದರೆ, ಮೋದಿ ಅವರು ಕೇವಲ ಹತ್ತು ದಿನಗಳ ಹಿಂದೆ ತಾನು ಬರೆದ ಪತ್ರದ ಬಗ್ಗೆ ತಮ್ಮ ಮನ್ ಕಿ ಬಾತ್ನಲ್ಲಿ ಪ್ರಸ್ತಾಪಿಸಿರುವುದು ಸಂತಸ ಉಂಟುಮಾಡಿದೆ ಎಂದು ಖುಷಿ ಹಂಚಿಕೊಂಡರು ದರ್ಶನ್.
ನಾನೊಬ್ಬ ಸಾಮಾನ್ಯ ನಾಗರಿಕ. ದೇಶದ ಪ್ರಧಾನಿ ತಮ್ಮ ಮನದ ಮಾತಿನಲ್ಲಿ ನನ್ನ ಪತ್ರದ ಬಗ್ಗೆ ಪ್ರಸ್ತಾಪಿಸಿರುವುದು ಸಂತಸ ತಂದಿದೆ.
●ದರ್ಶನ
●ಗಿರೀಶ್ ಹುಣಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
MUST WATCH
ಹೊಸ ಸೇರ್ಪಡೆ
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?