ಈಗ ಹುಡ್ಗೀರೂ ಹೇರ್ ಕಟ್ಟಿಂಗ್ ಮಾಡ್ತಾರೆ!; ವಿಧಾನಸಭೆಯಲ್ಲಿ ಚರ್ಚೆ
Team Udayavani, Jun 13, 2017, 4:48 PM IST
ಬೆಂಗಳೂರು : ವಿಧಾನಸಭೆಯಲ್ಲಿ ಕೂದಲು ಕತ್ತರಿಸುವ ವಿಚಾರದಲ್ಲಿ ಹಾಸ್ಯ ಭರಿತ ಸ್ವಾರಸ್ಯಕರ ಚರ್ಚೆ ಮಂಗಳವಾರ ನಡೆಯಿತು.
ಇದಕ್ಕೆ ಕಾರಣವಾಗಿದ್ದು ಬಿಜೆಪಿ ಶಾಸಕ ಗೋವಿಂದ ಕಾರಜೋಳ ಅವರು ಕೌಶಾಲಾಭಿವೃದ್ಧಿ ನಿಗಮದಲ್ಲಿ ಜಾತಿ ಆಧಾರಿತ ತರಬೇತಿ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದ್ದು. ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ ಜಾತಿ ಆಧಾರಿತ ಅಲ್ಲ ವೃತ್ತಿ ಆಧಾರಿತ ತರಬೇತಿ ನೀಡಲಾಗುತ್ತಿದೆ. ಹಿಂದೆ ಭತ್ತ,ರಾಗಿ ನೀಡಿದರೆ ಮನೆ ಮಂದಿಗೆಲ್ಲಾ ಕಟ್ಟಿಂಗ್ ಮಾಡಲು ಸಾಧ್ಯವಿತ್ತು.ಇಂದು ಸ್ಟಾರ್ ಹೊಟೇಲ್ಗಳಲ್ಲಿ ದುಬಾರಿ ಬೆಲೆಗೆ ಕಟ್ಟಿಂಗ್ ಮಾಡುತ್ತಾರೆ. 15 ವರ್ಷಗಳ ಹಿಂದೆ ನಾನು ಕಟ್ಟಿಂಗ್ಗೆ 200 ರೂಪಾಯಿ ಕೊಟ್ಟಿದ್ದೆ ಎಂದರು.
ಆ ವೇಳೆ ಮಧ್ಯ ಪ್ರವೇಶಿಸಿದ ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ ಸ್ಟಾರ್ ಹೊಟೇಲ್ಗಳಲ್ಲಿ ಹುಡ್ಗಿàರು ಹೇರ್ ಕಟ್ಟಿಂಗ್ ಮಾಡುತ್ತಾರೆ. ಅದಕ್ಕೆ ರೇಟ್ ಜಾಸ್ತಿ ಸರ್.ನಿಮಗೆ ಅದೆಲ್ಲಾ ಗೊತ್ತಿದೆ ಅಲ್ಲ ಸರ್ .. ಎಂದು ಸದನವನ್ನು ನಗೆ ಗಡಲಲ್ಲಿ ತೇಲಿಸಿದರು.
ಇದಕ್ಕೆ ಉತ್ತರಿಸಿದ ಸಿಎಂ ಸ್ಟಾರ್ ಹೊಟೇಲ್ನಲ್ಲಿ ಕಟ್ಟಿಂಗ್ ಮಾಡುವವರು ಸಣ್ಣ ಜಾತಿಯವರಲ್ಲ. ಅವರೆಲ್ಲಾ ತರಬೇತಿ ಪಡೆದು ಬರುವವರು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
MUST WATCH
ಹೊಸ ಸೇರ್ಪಡೆ
Mangaluru; ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿದ ಆರೋಪ: ಕೋರ್ಟ್ಗೆ ಮೊರೆ
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ