ಕೀರ್ತಿ ಗೌಡ ಮೇಲೆ ಹಲ್ಲೆ ; ಗಿರಿನಗರ ಠಾಣೆಯಲ್ಲಿ ನಾಗರತ್ನ ವಿಚಾರಣೆ
Team Udayavani, Oct 28, 2018, 10:30 AM IST
ಬೆಂಗಳೂರು: ನಟ ದುನಿಯಾ ವಿಜಯ್ 2 ನೇ ಪತ್ನಿ ಕೀರ್ತಿ ಗೌಡ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 2 ನೇ ಪತ್ನಿ ನಾಗರತ್ನ ಅವರನ್ನು ಗಿರಿನಗರ ಠಾಣೆಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಹಲ್ಲೆ ನಡೆದಿದ್ದು ಯಾವಾಗ ?
ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್ ಅವರು ಜೈಲು ಸೇರಿದಾಗ ಮೊದಲ ಪತ್ನಿ ನಾಗರತ್ನ ಅವರು 2 ನೇ ಪತ್ನಿಯಾಗಿರುವ ಕೀರ್ತಿಗೌಡ ಅವರ ಮೇಲೆ ದಾಳಿ ನಡೆಸಿ ಹಿಗ್ಗಾಮುಗ್ಗಾ ಥಳಿಸಿದ್ದರು.
ಕೀರ್ತಿ ಗೌಡ ಮನೆಯವರೊಂದಿಗೆ ಕುಳಿತಿದ್ದ ವೇಳೆ ನಾಗರತ್ನ ಅವರು ಏಕಾಏಕಿ ಮನೆಗೆ ನುಗ್ಗಿ ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ದಾಳಿ ನಡೆಸಿದ ಬಳಿಕ ನಾಗರತ್ನ ಅವರು ಗಿರಿನಗರ ಠಾಣೆಗೆ ತೆರಳಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರನ್ನೂ ದಾಖಲಿಸಿದ್ದರು.
ನಾಗರತ್ನ ಹಲ್ಲೆ ನಡೆಸಿದ ವೇಳೆ ಪುತ್ರಿ ಮೋನಿಕಾ ಮನೆಯೊಳಗಿದ್ದರು. ಮನೆಯಲ್ಲಿದ್ದ ಇತರರು ನಾಗರತ್ನ ಅವರನ್ನು ತಡೆದಿದ್ದರು.
ವಿಜಯ್ ಅವರ ಸ್ನೇಹಿತ ಮಂಜು ಮತ್ತು ವಕೀಲರು ಭಾನುವಾರ ಸುªದಿಗೋಷ್ಠಿ ನಡೆಸಿ ನಾಗರತ್ನ ಅವರು ಸುಳ್ಳು ದೂರು ನೀಡಿ ವಿಜಯ್ ಅವರ ಮೇಲೆ ಸಂಚು ನಡೆಸಿದ್ದಾರೆ. ಅವರನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.
ಭಾನುವಾರ ಹೈಡ್ರಾಮಾ!
ನಾಗರತ್ನ ಅವರನ್ನು ವಶಕ್ಕೆ ಪಡೆಯಲು ಗಂಟೆಗಳ ಕಾಲ ಮನೆಯ ಮುಂದೆ ಕಾಯಬೇಕಾದ ಪರಿಸ್ಥಿತಿ ಬಂದೊದಗಿತು. ಮನೆಯೊಳಗಿದ್ದ ನಾಗರತ್ನ ಮತ್ತು ಪುತ್ರಿಯರಾದ ಮೋನಿಶಾ, ಮೋನಿಕಾ ಪೊಲೀಸರಿಗೆ ಬಾಗಿಲು ತೆರೆದಿರಲ್ಲಿಲ್ಲ.
ನಾಗರತ್ನ ಪರ ವಕೀಲೆ ಆಗಮಿಸಿದ ಬಳಿಕ ನಾಗರತ್ನ ಅವರು ಬಾಗಿಲು ತೆರೆದು ಹೊರ ಬಂದಿದ್ದು, ಪುತ್ರಿಯರೊಂದಿಗೆ ಠಾಣೆಗೆ ತೆರಳಿದ್ದಾರೆ.
ಮಗಳನ್ನು ವಿಚಾರಿಸಬೇಡಿ
ದುನಿಯಾ ವಿಜಯ್ ಅವರು ಠಾಣೆಗೆ ಆಗಮಿಸಿ ಮಗಳನ್ನು ವಿಚಾರಣೆ ನಡೆಸಬೇಡಿ. ನಮ್ಮ ಜಗಳಕ್ಕೆ ಸಂಬಂಧಿಸಿ ಹೆಣ್ಣು ಮಕ್ಕಳನ್ನು ಠಾಣೆಯಲ್ಲಿರಿಸಬೇಡಿ ಎಂದು ಮನವಿ ಮಾಡಿದ್ದಾರೆ. ವಿಜಯ್ ಮನವಿಯನ್ನು ಪೊಲೀಸರು ಪುರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ಎಲ್ಲದಕ್ಕೂ ನಾಗರತ್ನ ಕಾರಣ
ನಮ್ಮ ಬದುಕಿನಲ್ಲಿ ನಡೆದ ಎಲ್ಲದಕ್ಕೂ ನಾಗರತ್ನ ಕಾರಣ ಎಂದು ಕೀರ್ತಿ ಗೌಡ ಮಾಧ್ಯಮ ಪ್ರತಿನಿಧಿಗಳ ಎದುರು ಕಣ್ಣೀರು ಸುರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ