ಗೊರವಪ್ಪ ವೇಷಧಾರಿಗಳಿಗೆ ಗ್ರಾಮಸ್ಥರ ಧರ್ಮದೇಟು
Team Udayavani, Aug 24, 2019, 3:00 AM IST
ಯಲಬುರ್ಗಾ: ಗೊರವಪ್ಪನ ಮಾರುವೇಷದಲ್ಲಿ ಬಂದು ದೇವರ ಹೆಸರಲ್ಲಿ ಹಣ ದೋಚುತಿದ್ದ ಮೂವರಿಗೆ ಗ್ರಾಮಸ್ಥರೇ ಧರ್ಮದೇಟು ನೀಡಿದ ಘಟನೆ ಯಡ್ಡೋಣಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಮೈಲಾರಲಿಂಗೇಶ್ವರ ದೇವರ ಭಕ್ತರ ವೇಷದಲ್ಲಿ ಬಂದಿದ್ದ ಖದೀಮರು ಮನೆ ಮನೆಗೆ ಹೋಗಿ ದೇವರ ಹೆಸರು ಹೇಳಿ ಭಂಡಾರ ಹಚ್ಚಿ ಜನರನ್ನು ವಶೀಕರಣ ಮಾಡಿ ಹಣ ಕೀಳುತ್ತಿದ್ದರು. ಗ್ರಾಮಸ್ಥರಿಂದ ಒಟ್ಟು 12,000 ರೂ. ಲಪಟಾಯಿಸಿದ್ದ ಮೂವರು ವೇಷಧಾರಿಗಳ ಅಸಲಿ ಬಣ್ಣ ತಿಳಿದು ಎಚ್ಚೆತ್ತ ಕೆಲ ಗ್ರಾಮಸ್ಥರು ವೇಷಧಾರಿಗಳನ್ನು ಕರೆಯಿಸಿ ಹಣ ವಾಪಸ್ ಪಡೆದು ಧರ್ಮದೇಟು ನೀಡಿದ್ದಾರೆ.