ಪತಿ-ಪತ್ನಿ ಪ್ರತಿಷ್ಠೆಯಿಂದ ಮಕ್ಕಳ ಹಕ್ಕು ಉಲ್ಲಂಘನೆ
Team Udayavani, Dec 20, 2017, 10:00 AM IST
ಬೆಂಗಳೂರು: ವಿಚ್ಛೇದನ ಪಡೆಯುವ ಯುವ ದಂಪತಿಗಳ ಒಣ ಪ್ರತಿಷ್ಠೆಗಳಿಂದ ಈಗಷ್ಟೇ ಪ್ರಪಂಚ ನೋಡುತ್ತಿರುವ ಅವರ ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗುತ್ತಿರುವುದು ವಿಷಾದನೀಯ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಕುರಿತು ಎರಡು ಪ್ರತ್ಯೇಕ ರಿಟ್ ಅರ್ಜಿಗಳನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾ.ಬಿ. ವೀರಪ್ಪ ಅವರಿದ್ದ ರಜಾಕಾಲದ ಏಕಸದಸ್ಯ ಪೀಠ, ನಿಮ್ಮ ಒಣಪ್ರತಿಷ್ಠೆಗಳಿಂದ ಮಕ್ಕಳ ಭವಿಷ್ಯದ ಜತೆ ಯಾಕೆ ಚೆಲ್ಲಾಟ ಆಡುತ್ತೀರಾ ಎಂದು ಅಸಮಾಧಾನ ವ್ಯಕ್ತಪಡಿಸಿತು. ದಂಪತಿ ನಡುವಿನ ವೈಮನಸ್ಸು ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಅವರು ಸರಿಯಾದ ವಯಸ್ಸಿನಲ್ಲಿ ಸಿಗಬೇಕಾದ ಪ್ರೀತಿ- ಮಮತೆಯಿಂದ ವಂಚಿತರಾಗುತ್ತಾರೆ.
ಬೇರೆ ಬೇರೆ ಕಾರಣಗಳಿಗೆ ಕಿತ್ತಾಡು ತ್ತೀರಿ, ಆದರೆ ಅಂತಿಮವಾಗಿ ಮಕ್ಕಳೇ ಮುಖ್ಯ ವಲ್ಲವೇ? ಮಕ್ಕಳ ಭವಿಷ್ಯಕ್ಕಿಂತ ಹೆಚ್ಚಿ ನದ್ದು ಬೇರೇನಿದೆ ಎಂಬುದನ್ನು ಎಲ್ಲರೂ ಗಮನದಲ್ಲಿಟ್ಟು ಕೊಳ್ಳ ಬೇಕೆಂದು ತಿಳಿಸಿತು. ನಿಮ್ಮ ಜಗಳಗಳಿಂದ ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ. ಅವರ ನಿರ್ಮಲ ಮನಸಿನ ಮೇಲೆ ಪರಿಣಾಮ ಬೀರುತ್ತಿದೆ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿತು. ಮತ್ತೂಂದೆಡೆ ಮಗುವಿನ ಹಕ್ಕಿಗೆ ಸಂಬಂಧಿಸಿದ ಪತಿ-ಪತ್ನಿ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡ ನ್ಯಾಯ ಪೀಠ, ನೀವು ಏನು ಸಾಧಿಸಲು ಹೊರಟಿದ್ದೀರಾ? ನಿಮಗೆ ಅರ್ಥ ಆಗುತ್ತಿದೆಯೇ? ನಿಮ್ಮಿಬ್ಬರ ನಡುವೆ ಆ ಮಗು ಚೆಂಡು ಎಂದು ತಿಳಿದುಕೊಂಡಿದ್ದೀರಾ? ನಿಮಗೆಷ್ಟು ಬುದ್ಧಿವಾದ ಹೇಳಿದರೂ ಪ್ರಯೋಜನವಿಲ್ಲ. ನಿಮ್ಮ ಜತೆ ಬೆಳೆಯುವುದಕ್ಕಿಂತ ಸರ್ಕಾರ ನಡೆಸುವ ಸಂಸ್ಥೆಯಲ್ಲಿ ಮಗು ಬೆಳೆಯಲಿ. ನಿಮ್ಮಿಬ್ಬರಿಗಿಂತ ಮಗುವಿನ ಭವಿಷ್ಯ ನನಗೆ ಮುಖ್ಯವಾಗಿದೆ ಎಂದು ತರಾಟೆ ತೆಗೆದುಕೊಂಡಿತು. ಅಲ್ಲದೆ ಮಗುವಿನ ಅಭಿಪ್ರಾಯ ಕೂಡ ಪಡೆಯಬೇಕಿದೆ ಎಂದು ಹೇಳಿದ ನ್ಯಾಯಪೀಠ ವಿಚಾರಣೆ ಡಿ.21ಕ್ಕೆ ಮುಂದೂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ