ವಿಶ್ವನಾಥ್ ಕೈ ಬಿಡಲ್ಲ, ಶೀಘ್ರ ಸೂಕ್ತ ಸ್ಥಾನಮಾನ: ಶೆಟ್ಟರ್
Team Udayavani, Jun 19, 2020, 6:31 AM IST
ಕೊಪ್ಪಳ: ಎಚ್.ವಿಶ್ವನಾಥ ಅವರಿಗೆ ಮುಂದಿನ ದಿನಗಳಲ್ಲಿ ಪಕ್ಷ ಸೂಕ್ತ ಸ್ಥಾನಮಾನ ಕೊಟ್ಟು ಗೌರವಿಸಲಿದೆ ಎಂದು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿ, “ರಾಜ್ಯ ಕೋರ್ ಕಮಿಟಿಯಿಂದ ಹಲವರ ಹೆಸರು ಸೇರಿದಂತೆ ವಿಶ್ವನಾಥ ಹೆಸರೂ ಚರ್ಚೆಗೆ ಬಂದಿದ್ದವು. ಹೈಕಮಾಂಡ್ ಒಂದು ವಿಚಾರದಲ್ಲಿ ನಿರ್ಧಾರ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಆ ಅಭ್ಯರ್ಥಿಗಳನ್ನು ನಾವು ಒಪ್ಪಲಿದ್ದೇವೆ. ವಿಶ್ವನಾಥ್ ನಮ್ಮನ್ನು ಬೆಂಬಲಿಸಿ ಬಂದಿದ್ದಾರೆ. ಪಕ್ಷ ಅವರನ್ನು ಎಂದೂ ಕೈ ಬಿಡುವುದಿಲ್ಲ.
ಅವರಿಗೆ ಸೂಕ್ತ ಗೌರವ ಸಿಗಲಿದೆ. ಹೈಕಮಾಂಡ್ ಮಟ್ಟದಲ್ಲಿ ಏನು ನಡೆದಿದೆ ಎನ್ನುವ ವಿಚಾರವನ್ನು ನಾನು ಬಹಿರಂಗವಾಗಿ ಹೇಳಲು ಇಚ್ಛಿಸುವುದಿಲ್ಲ. ಪಕ್ಷ ಒಂದು ನಿರ್ಧಾರ ಕೈಗೊಂಡಿದೆ ಎಂದರೆ ನಾವು ಅದನ್ನು ಒಪ್ಪಲಿದ್ದೇವೆ’ ಎಂದರು. ರಾಜ್ಯಾದ್ಯಂತ ಇರುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡದಿರುವುದು ನನ್ನ ಗಮನಕ್ಕೆ ಬಂದಿದೆ. ಈ ಕುರಿತು ಸರ್ವೇ ನಡೆಸಿ ಪರಿಶೀಲಿಸಲಿದ್ದೇನೆ. ಹೊಸ ಕೈಗಾರಿಕೆ ನೀತಿಯಲ್ಲೂ ಈ ಅಂಶ ಪರಿಗಣಿಸಿ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎನ್ನುವ ಅಂಶ ಸೇರ್ಪಡೆಯಾಗಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ
2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK
Raids: ಕೊಪ್ಪಳ ಕೃಷಿ ಇಲಾಖೆ ಉಪ ನಿರ್ದೇಶಕ ಸಹದೇವ ಯರಗುಪ್ಪಾ ಮನೆ ಮೇಲೆ ಲೋಕಾಯುಕ್ತ ದಾಳಿ
ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ
Lok Sabha Election; ಇಂದಿನಿಂದ 14 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ
MUST WATCH
ಹೊಸ ಸೇರ್ಪಡೆ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು