ವಿಶ್ವನಾಥ್ ಮನವೊಲಿಸುವೆ: ಸಾ.ರಾ.ಮಹೇಶ್
Team Udayavani, Jun 5, 2019, 3:00 AM IST
ಮೈಸೂರು: ಬೇರೆಯವರು ರಾಜ್ಯಾಧ್ಯಕ್ಷರಾದರೆ ತಮಗಿಂತ ಪ್ರಬಲವಾಗಿ ಪಕ್ಷ ಸಂಘಟನೆ ಮಾಡಬಹುದು ಎಂಬುದು ಎಚ್.ವಿಶ್ವನಾಥ್ ಅವರ ಭಾವನೆ ಇರಬಹುದು. ಆದರೂ, ರಾಜೀನಾಮೆ ಹಿಂಪಡೆಯುವಂತೆ ವಿಶ್ವನಾಥ್ ಅವರಿಗೆ ಮನವಿ ಮಾಡುತ್ತೇನೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಈ ಹಿಂದೆ ಕೂಡ ಅವರು ಎರಡು ಬಾರಿ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದಾಗ ಮನವೊಲಿಸಿದ್ದೆವು. ಹಿಂದುಳಿದ ವರ್ಗದ ನಾಯಕ, ಅದರಲ್ಲೂ ನಮ್ಮ ಭಾಗದ ನಾಯಕರಾದ ಅವರು ರಾಜ್ಯಾಧ್ಯಕ್ಷರಾಗಿ ಮುಂದುವರಿಯಬೇಕು ಎಂಬುದು ತಮ್ಮ ಭಾವನೆ. ಸಚಿವ ಜಿ.ಟಿ.ದೇವೇಗೌಡ ಮತ್ತು ವಿಶ್ವನಾಥ್ ಅವರು ಪಕ್ಷ ಬಿಡುತ್ತಾರೆ ಎಂಬ ಸಂಶಯ ಬೇಡ. ಅವರಿಬ್ಬರೂ ಜೆಡಿಎಸ್ನಲ್ಲೇ ಇರುತ್ತಾರೆ ಎಂದು ಸ್ಪಷ್ಟಪಡಿಸಿದರು.