ರಾಜ್ಯದ ಐದು ಕಡೆ ಜನೋತ್ಸವ ಕಾರ್ಯಕ್ರಮ ಮಾಡುತ್ತೇವೆ: ಸಿಎಂ ಬೊಮ್ಮಾಯಿ
Team Udayavani, Aug 13, 2022, 12:20 PM IST
ಬೆಂಗಳೂರು: ಕಳೆದ ತಿಂಗಳು ಆಯೋಜನೆಗೊಂಡು ಕೊನೆಯ ಕ್ಷಣದಲ್ಲಿ ರದ್ದಾದ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಜನೋತ್ಸವ ಕಾರ್ಯಕ್ರಮವನ್ನು ಈ ತಿಂಗಳ ಅಂತ್ಯಕ್ಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಅಲ್ಲದೆ ರಾಜ್ಯದ ಐದು ಕಡೆ ಕಾರ್ಯಕ್ರಮ ಮಾಡಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಕಳೆದ ತಿಂಗಳು ಜನೋತ್ಸವ ಕಾರ್ಯಕ್ರಮ ಮಾಡಬೇಕು ಎಂದು ಅಂದುಕೊಂಡಿದ್ದೆವು. ಆದರೆ ಕಾರಣಾಂತರಗಳಿಂದ ಆಗಲಿಲ್ಲ. ಈಗ ದೊಡ್ಡಬಳ್ಳಾಪುರದಲ್ಲೇ ಆ.28 ಕ್ಕೆ ಜನೋತ್ಸವ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು.
ದೊಡ್ಡಬಳ್ಳಾಪುರ ಭಾಗದ ಜನರ ಒತ್ತಡ ಬಹಳ ಇತ್ತು. ನಾವು ಬೇರೆ ಬೇರೆ ಕಡೆ ರ್ಯಾಲಿ ಮಾಡಿ ಅಮೇಲೆ ಇಲ್ಲಿ ಮಾಡಬೇಕು ಎಂದುಕೊಂಡಿದ್ದೇವು ಆದರೆ ಜನ ಒಪ್ಪಲಿಲ್ಲ. ದೊಡ್ಡಬಳ್ಳಾಪುರದಲ್ಲೇ ಮಾಡಬೇಕು ಎಂದು ಆ ಭಾಗದ ಜನರ ಒತ್ತಡ ಹೆಚ್ಚಾಯ್ತು. ಎಲ್ಲಿ ಆರಂಭ ಮಾಡಿದ್ದೆವೋ ಅಲ್ಲಿಂದಲೇ ಮುಂದೆ ಹೋಗಬೇಕೆಂದು ಅಲ್ಲಿನ ಜನರು ಕೇಳಿಕೊಂಡಿದ್ದಾರೆ. ಅವರ ಉತ್ಸಾಹಕ್ಕೆ ತಲೆಬಾಗಿ ದೊಡ್ಡಬಳ್ಳಾಪುರದಲ್ಲಿ 28ಕ್ಕೆ ಜನೋತ್ಸವ ಮಾಡುತ್ತಿದ್ದೇವೆ ಎಂದರು.
ಇದನ್ನೂ ಓದಿ:ನಿಮ್ಮ ನಾಯಕರ ರಂಗಬಿರಂಗಿ ರಾತ್ರಿ ಬದುಕಿನ ಸಿಡಿ ಸಾಕಷ್ಟಿದೆ:ಪ್ರಿಯಾಂಕ್ ಗೆ ಬಿಜೆಪಿ ತಿರುಗೇಟು
ಒಟ್ಟು ರಾಜ್ಯದಲ್ಲಿ ಐದು ಕಡೆ ಸಮಾವೇಶ ಮಾಡಬೇಕು ಎಂದುಕೊಂಡಿದ್ದೇವೆ. ಯಾರೆಲ್ಲ ಕೇಂದ್ರ ನಾಯಕರನ್ನ ಕರೆಯಬೇಕು ಎಂಬುದರ ಬಗ್ಗೆ ಇವತ್ತು ಮಾತನಾಡುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ