ಹಾಸನದಲ್ಲಿ ಏನ್ ಅಭಿವೃದ್ಧಿಯಾಗಿದೆ, ಚರ್ಚೆಗೆ ಬನ್ನಿ; ರೇವಣ್ಣಗೆ ಮಂಜು
Team Udayavani, Feb 2, 2019, 11:42 AM IST
ಹಾಸನ: ಜೆಡಿಎಸ್ ವಿರುದ್ಧ ಬಹಿರಂಗ ಹೇಳಿಕೆ ಕೊಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಹೈಕಮಾಂಡ್ ಸಂದೇಶ ರವಾನಿಸಿದ ಬಳಿಕವೂ ಜೆಡಿಎಸ್ ವಿರುದ್ಧ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಎ.ಮಂಜು ಮತ್ತೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಜ್ವಲ್ ಗೆ ಬೆಂಬಲ ಇಲ್ಲ,
ಶನಿವಾರ ಸುದ್ದಿಗಾರರು ರೇವಣ್ಣ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಳೆದ ಹತ್ತು ವರ್ಷಗಳಲ್ಲಿ ಹಾಸನದಲ್ಲಿ ಏನ್ ಅಭಿವೃದ್ಧಿ ಮಾಡಿದ್ದಾರೆ. ಈ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದಾರೆ.
ಎಚ್ ಡಿ ರೇವಣ್ಣನಿಗೆ ವಿಷನ್ ಇಲ್ಲ, ಬುದ್ದಿನೂ ಕಡಿಮೆ ಇದೆ. ರೇವಣ್ಣನವರೇ ಸಿದ್ದರಾಮಯ್ಯನವರು ಸಾಧನೆ ಅಪಾರ ಎಂದು ಹೇಳಿ ಹೂವಿನ ಹಾರ ಹಾಕಿದ್ದರು. ಆದರೆ ಈಗ ಅಭಿವೃದ್ಧಿ ಬಗ್ಗೆ ಹೇಳುತ್ತಿದ್ದಾರೆ. ನನಗೆ ಸಿಕ್ಕ ಕಡಿಮೆ ಅವಧಿಯಲ್ಲಿ ನಾನು ಎಷ್ಟು ಕೆಲಸ ಮಾಡಿದ್ದೇನೆ, ರೇವಣ್ಣನ ಅವಧಿಯಲ್ಲಿ ಎಷ್ಟು ಕೆಲಸ ಆಗಿದೆ ಎಂಬ ಬಗ್ಗೆ ಬಹಿರಂಗ ಚರ್ಚೆ ನಡೆಯಲಿ ಎಂದು ಹೇಳಿದರು.