ಸಿದ್ದರಾಮಯ್ಯ ಹೇಳಿದ್ದೆಲ್ಲಾ ಉಲ್ಟಾ ಆಗುತ್ತೆ: ಈಶ್ವರಪ್ಪ
Team Udayavani, Jul 1, 2019, 3:00 AM IST
ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೆಲ್ಲಾ ಉಲ್ಟಾ ಆಗುತ್ತೆ. ಅವರು ಏನ್ ಆಗೋಲ್ಲ ಅಂತಾರೋ ಅದಾಗುತ್ತೆ, ಏನು ಆಗುತ್ತೆ ಅಂತಾರೋ ಅದು ಆಗಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶರಪ್ಪ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ಹಿಂದೆ ಸಿದ್ದರಾಮಯ್ಯನವರು ಮೋದಿ ಪ್ರಧಾನಿ ಆಗಲ್ಲ ಅಂದ್ರು, ಮೋದಿ ಪ್ರಧಾನಿಯಾದ್ರು. ಯಡಿಯೂರಪ್ಪ, ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ ಆಗಲ್ಲ ಅಂದ್ರು.
ಇಬ್ಬರೂ ಸಿಎಂ ಆದರು. 36 ಶಾಸಕರನ್ನು ಗೆದ್ದ ಕುಮಾಸ್ವಾಮಿಗೆ ಸಿದ್ದರಾಮಯ್ಯನವರೇ ಖುದ್ದು, ಅಧಿಕಾರ ನೀಡಿದ್ದೂ ಆಯಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾವು ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂದಿದ್ದರು. ಚಾಮುಂಡೇಶ್ವರಿಯಲ್ಲಿ ಸೋತರು ಎಂದು ವ್ಯಂಗ್ಯವಾಡಿದರು.