ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮಹಿಳೆ ಸಾವು
Team Udayavani, Jun 24, 2019, 3:00 AM IST
ಚಿಕ್ಕಮಗಳೂರು: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಮಳಲೂರಿನಲ್ಲಿ ನಡೆದಿದೆ. ಕೂಲಿ ಕಾರ್ಮಿಕರಾದ ನೀಲಮ್ಮ (45) ಮೃತಪಟ್ಟವರು.
ಶನಿವಾರ ಪಡಿತರ ಆಹಾರ ಧಾನ್ಯ ತರಲು ನ್ಯಾಯಬೆಲೆ ಅಂಗಡಿಗೆ ಹೋಗಿದ್ದ ನೀಲಮ್ಮ ವಾಪಸ್ ಮನೆಗೆ ಬರುವಾಗ ರಸ್ತೆ ಬದಿಯಲ್ಲಿದ್ದ ಖಾಸಗಿ ವ್ಯಕ್ತಿಯೊಬ್ಬರ ಕೈತೋಟದಲ್ಲಿದ್ದ ಸೀಬೆ ಹಣ್ಣು ಕೊಯ್ಯಲು ಯತ್ನಿಸಿದರು. ವಿದ್ಯುತ್ ತಂತಿ ತುಂಡಾಗಿ ಜೋತು ಬಿದ್ದಿದ್ದು ಸೀಬೆ ಮರದ ಟೊಂಗೆ, ಹಾಗೂ ಎಲೆಗಳ ಮರೆಯಲ್ಲಿ ಇವರಿಗೆ ಕಾಣಿಸಲಿಲ್ಲ.
ಹಣ್ಣು ಕೊಯ್ಯಲು ಮುಂದಾಗುತ್ತಿದ್ದಂತೆ ತಂತಿ ಸ್ಪರ್ಶಿಸಿ ಶಾಕ್ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೆಸ್ಕಾಂ ನಿರ್ಲಕ್ಷದಿಂದ ಈ ಅವಘಡ ಸಂಭವಿಸಿದ್ದು ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಹಾಗೂ ಮೃತರ ಸಂಬಂ ಧಿಗಳು ಆಗ್ರಹಿಸಿದ್ದಾರೆ. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.