ಉದ್ಯಮಿ ಕೆ.ಪಿ.ನಂಜುಂಡಿ ವಿರುದ್ಧ ಕಿಡ್ನ್ಯಾಪ್ ಕೇಸ್ ದಾಖಲಿಸಿದ ಮಹಿಳೆ
Team Udayavani, Feb 23, 2017, 11:21 AM IST
ಬೆಂಗಳೂರು: ಲಕ್ಷ್ಮೀ ಗೋಲ್ಡ್ ಪ್ಯಾಲೇಸ್ನ ಮಾಲಿಕ, ಪ್ರಭಾವಿ ಮುಖಂಡ ಕೆ.ಪಿ.ನಂಜುಂಡಿ ಅವರ ವಿರುದ್ದ ಮಹಿಳೆಯೊಬ್ಬರು ಅಪಹರಣ ದೂರು ದಾಖಲಿಸಿದ್ದಾರೆ.
ಲಕ್ಷ್ಮೀ ಗೋಲ್ಡ್ ಪ್ಯಾಲೇಸ್ನಲ್ಲಿ ಮ್ಯಾನೇಜರ್ ಆಗಿದ್ದ ವಿಜಯ್ ಕುಮಾರ್ ಎನ್ನುವವರ ಪತ್ನಿ ಆಲಮೇಲು ಎನ್ನುವವರು ವಿಜಯ ನಗರ ಪೊಲೀಸ್ ಠಾಣೆಯ ಲ್ಲಿ ದೂರು ನೀಡಿದ್ದು , ನನ್ನ ಪತಿಯನ್ನು ಅಪಹರಿಸಿ 3 ದಿನಗಳ ಕಾಲ ಮೈಸೂರಿನಲ್ಲಿ ಕೂಡಿ ಹಾಕಿ ಅನ್ನ ನೀರು ನೀಡದೆ ಚಿತ್ರ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ನಂಜುಂಡಿ ಸೇರಿ ನಾಲ್ವರ ವಿರುದ್ಧ ದೂರು ನೀಡಿದ್ದಾರೆ. ರಾಜನ್ , ರಾಮಕೃಷ್ಣ ಮತ್ತು ರಾಜು ಕಾರ್ಯ ಅವರ ವಿರುದ್ದ ದೂರು ದಾಖಲಾಗಿದೆ.
ಕಚೇರಿಯಲ್ಲಿ 40 ಗ್ರಾಂ ಚಿನ್ನ ಕಳವಾಗಿತ್ತು,ಇದನ್ನು ನಾನೇ ಕದ್ದಿದ್ದೇನೆ ಎಂದು ವಿಜಯ್ ಕುಮಾರ್ ಒಪ್ಪಿಕೊಂಡಿದ್ದು ಅವನನ್ನು ನಾವು ಕಿಡ್ನ್ಯಾಪ್ ಮಾಡಿಲ್ಲ.ಪೊಲೀಸರು ತನಿಖೆ ಮಾಡುತ್ತಿದ್ದಾರೆ ವಿಷಯ ಬಯಲಿಗೆ ಬರುತ್ತದೆ ಎಂದು ನಂಜುಂಡಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.
ಆಲಮೇಲು ಅವರು ನನ್ನ ಪತಿಗೆ ನಂಜುಂಡಿ ಅವರ ಅಕ್ರಮಗಳು ಗೊತ್ತಿವೆ ಹೀಗಾಗಿ ಅಪಹರಣ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ