ಯೋಗ ಗೀತೆ ಲೋಕಾರ್ಪಣೆ
Team Udayavani, Jun 22, 2019, 3:00 AM IST
ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಇದೇ ಮೊದಲ ಬಾರಿಗೆ “ಜಯತೀ ಯೋಗ ವಿದ್ಯಾ’ ಎಂಬ ರಾಷ್ಟ್ರೀಯ ಯೋಗ ಗೀತೆಯನ್ನು ಲೋಕಾರ್ಪಣೆ ಮಾಡಲಾಗಿದ್ದು, ಮೈಸೂರಿನಲ್ಲಿಯೂ ಗೀತೆಯ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಪ್ರಪಂಚದ 2,000ಕ್ಕೂ ಹೆಚ್ಚು ವೇದಿಕೆಗಳಲ್ಲಿ ಏಕಕಾಲಕ್ಕೆ ಯೋಗ ಗೀತೆ ಮಾಡಿ ಧನ್ಯತೆ ಮೆರೆಯಲಾಯಿತು.
ಈ ಗೀತೆಯನ್ನು ಖ್ಯಾತ ವಯೋಲಿನ್ ವಾದಕ ಮೈಸೂರು ಮಂಜುನಾಥ್ ಸಂಯೋಜಿಸಿದ್ದು, ಅಂತಾರಾಷ್ಟ್ರೀಯ ಗಾಯಕರಾದ ವಿಜಯ ಪ್ರಕಾಶ್, ಬಾಂಬೆ ಜಯಶ್ರೀ, ಪಂಡಿತ್ ಸಂಜೀವ್ ಅಭ್ಯಂಕರ್ ಕಂಠದಾನ ಮಾಡಿದ್ದಾರೆ. ಪಂಡಿತ್ ರೋನು ಮಜುಂದಾರ್ ಬಾನ್ಸುರಿ, ಮೈಸೂರು ಮಂಜುನಾಥ್ ಪಿಟೀಲು, ರಫಿಕ್ ಖಾನ್ ಸಿತಾರ್ ನುಡಿಸಿ ಗೀತೆಗೆ ರಂಗು ತಂದಿದ್ದಾರೆ.
ಇವರೊಟ್ಟಿಗೆ ಜಪಾನ್, ಕೆನಡಾ, ಅಮೆರಿಕ, ನೆದರ್ಲ್ಯಾಂಡ್ ಸೇರಿ ವಿವಿಧ ದೇಶಗಳ ಶ್ರೇಷ್ಠ ಕಲಾವಿದರಿಂದ ಹಿನ್ನೆಲೆ ಸಂಗೀತವೂ ಮೇಳೈಸಿದೆ. ಯೋಗ ಗೀತೆಗಾಗಿಯೇ ಹೊಸ ರಾಗ ಅನ್ವೇಷಣೆಯಾಗಿದ್ದು, ಹೊಸ ರಾಗಕ್ಕೆ ದೇಶದ ಮೊದಲ ಚಕ್ರವರ್ತಿ “ಭರತನ’ ಹೆಸರಿಟ್ಟು ಸಂಗೀತಜ್ಞರು ಕೃತಾರ್ಥರಾಗಿದ್ದಾರೆ.
ಇಡೀ ಆಡಿಯೋ 5 ನಿಮಿಷದ ಅವಧಿಯದ್ದಾಗಿದ್ದು, ಮುಂದಿನ ದಿನಗಳಲ್ಲಿ ವಿಡಿಯೋ ಸಾಂಗ್ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಇದೇ ವೇಳೆ ಯೋಗಪಟುಗಳಿಗೆ ತಿಳಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ
Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ
ಲೋಕಸಭಾ ಕಣದಲ್ಲಿ ನಾರಿಶಕ್ತಿ ಪ್ರದರ್ಶನ: ಕಾಂಗ್ರೆಸ್ನಿಂದ 6, ಬಿಜೆಪಿಯಿಂದ 2 ಮಹಿಳೆಯರು
MUST WATCH
ಹೊಸ ಸೇರ್ಪಡೆ
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು
BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ