BJP MLA ಸತೀಶ್ ರೆಡ್ಡಿ ಬಾಮೈದ ಎಂದು ಯುವಕನ ಗೂಂಡಾಗಿರಿ
Team Udayavani, Mar 22, 2018, 12:27 PM IST
ಬೆಂಗಳೂರು: ದೊಡ್ಡವರ ಹೆಸರು ಹೇಳಿ ಸಣ್ಣ ಕೆಲಸ ಮಾಡುವುದು ಅಂದರೆ ಇದೇ ಇರಬೇಕು. ಬಿಜೆಪಿ ಶಾಸಕ ಸತೀಶ್ ರೆಡ್ಡಿ ಬಾಮೈದ ಎಂದು ಯುವಕನೊಬ್ಬ ಕ್ಯಾಬ್ ಚಾಲಕರೊಬ್ಬರಿಗೆ ಮಾರಣಾಂತಿಕವಾಗಿ ಥಳಿಸಿರುವ ಘಟನೆ ಬುಧವಾರ ತಡರಾತ್ರಿ ಕೋರಮಂಗಲದಲ್ಲಿ ನಡೆದಿದೆ.
ಮಿಥುನ್ ರೆಡ್ಡಿ ಎಂಬ ಯುವಕ ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಚಾಲಕ ತಿಪ್ಪೇಸ್ವಾಮಿ ಕಾರನ್ನು ಅಡ್ಡಗಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದು, ಎಯ್..ನಾನ್ಯಾರು ಗೊತ್ತಾ ? ಎಂಎಲ್ಎ ಸತೀಶ್ ರೆಡ್ಡಿ ಅವರ ಬಾಮೈದ ನನಗೆ ಸೈಡ್ ನೀಡಲ್ವ..ನಿನಗೆ ಇದೆ… ಎಂದು ಧಮ್ಕಿ ಹಾಕಿದ್ದಾನೆ.
ಗಾಯಗೊಂಡಿರುವ ತಿಪ್ಪೇಸ್ವಾಮಿ ಅವರು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ನನಗೆ ಬಾಮೈದ ಇಲ್ಲ!
ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಾಸಕ ಸತೀಶ್ ರೆಡ್ಡಿ ನನಗೆ ಬಾಮೈದ ಇಲ್ಲ , ನನ್ನ ಹೆಸರು ಹೇಳಿಕೊಂಡು ಈ ಕೃತ್ಯ ಎಸಗಿದ್ದಾನೆ. ಆತನಿಗೆ ಠಾಣೆಗೆ ಕರೆದೊಯ್ದು ನಾಲ್ಕು ಬಾರಿಸಿ ಬುದ್ದಿ ಕಲಿಸಿ ಎಂದು ಕಿಡಿ ಕಾರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ
ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು