ಯುವರಾಜ್ನಿಂದಲೇ ಶಾಸಕ ಅರವಿಂದ ಬೆಲ್ಲದ್ ಗೆ ಕರೆ?
Team Udayavani, Jun 22, 2021, 7:43 AM IST
ಬೆಂಗಳೂರು: ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿ ಯುವರಾಜ ಸ್ವಾಮಿ ಅಲಿಯಾಸ್ ಸೇವಾಲಾಲ್ ಸ್ವಾಮಿಯೇ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಅವರಿಗೆಕರೆ ಮಾಡಿದ್ದಾನೆಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.
ಪ್ರಕರಣ ಸಂಬಂಧಕಬ್ಬನ್ ಪಾರ್ಕ್ ಎಸಿಪಿ ಯತಿರಾಜ್ ನೇತೃತ್ವದ ತಂಡ ಭಾನುವಾರ ಮತ್ತು ಸೋಮವಾರ ಯುವರಾಜ್ ಸ್ವಾಮಿಯನ್ನು ಜೈಲಿನಲ್ಲಿಯೇ ವಿಚಾರಣೆ ನಡೆಸಿದೆ.ಈವೇಳೆ ಆರೋಪಿ “ತನಗೆ ಶಾಸಕ ಅರವಿಂದ್ ಬೆಲ್ಲದ್ ಅವರು ಪರಿಚಯವಿಲ್ಲ. ನಾನು ಯಾರಿಗೂ ಕರೆ ಮಾಡಿಲ್ಲ. ಜೈಲಿನಲ್ಲಿಯೇ ಇದ್ದೇನೆ. ಇತ್ತೀಚೆಗೆ ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದೆ. ಈ ವೇಳೆ ಹೇಗೆ ಕರೆ ಮಾಡಲು ಸಾಧ್ಯ’ ಎಂದು ಪೊಲೀಸರನ್ನೇ ಪ್ರಶ್ನಿಸಿದ್ದಾನೆಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಸಚಿವ ಸ್ಥಾನದಿಂದ ಕೆಳಗಿಳಿದ ಜಾರಕಿಹೊಳಿ ಶಾಸಕ ಸ್ಥಾನವೂ ತ್ಯಾಗ?
ಆದರೆ, ಆರೋಪಿ ಯುವರಾಜ್ ಅನಾರೋಗ್ಯದ ನೆಪ ಹೇಳಿ ಆಸ್ಪತ್ರೆಗೆ ದಾಖಲಾಗುತ್ತಿದ್ದ. ಈ ವೇಳೆ ಆತ ಮೊಬೈಲ್ ಬಳಸಿರುವ ಸಾಧ್ಯತೆ ಹೆಚ್ಚಿದೆ. ಮತ್ತೂಂದೆಡೆ ಶಾಸಕ ಬೆಲ್ಲದ್ ಅವರಿಗೆಕರೆ ಮಾಡಿರುವ ನಂಬರ್ ಹೈದರಾಬಾದ್ ಲೊಕೇಷನ್ ತೋರಿಸುತ್ತಿದೆ. ಹೀಗಾಗಿ ಶಾಸಕರಿಗೆ ಕರೆ ಬಂದಿರುವ ನಂಬರ್ನ ಸಿಡಿಆರ್ ಪರಿಶೀಲಿಸಿದಾಗ ಸಂಪೂರ್ಣ ಮಾಹಿತಿ ತಿಳಿಯಲಿದೆ. ನಂತರ ಮತ್ತೂಮ್ಮೆ ಯುವರಾಜ್ ಸ್ವಾಮಿಯನ್ನುವಿಚಾರಣೆ ನಡೆಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದರು.