ಭಾರತ್ ಬಂದ್ ಅಲ್ಲಲ್ಲಿ ಹಿಂಸಾಚಾರ
Team Udayavani, Jan 6, 2019, 6:00 AM IST
ಹೊಸದಿಲ್ಲಿ: ಕೇಂದ್ರ ಸರಕಾರದ ಕಾರ್ಮಿಕ ನೀತಿಯನ್ನು ಖಂಡಿಸಿ ಕರೆ ನೀಡಲಾಗಿದ್ದ “ಭಾರತ್ ಬಂದ್’ನ ಎರಡನೇ ದಿನವಾದ ಬುಧವಾರ ಕೆಲವು ರಾಜ್ಯಗಳಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗಳು, ರಸ್ತೆ ತಡೆ, ರೈಲು ತಡೆಗಳನ್ನು ನಡೆಸಲಾಗಿದೆ.
ದೇಶದ 10 ಮಹತ್ವದ ಕಾರ್ಮಿಕ ವಲಯಗಳೂ ಮುಷ್ಕರದಲ್ಲಿ ಭಾಗವಹಿಸಿದ್ದರಿಂದ, ಗಣಿಗಾರಿಕೆ, ರಸ್ತೆ ಸಾರಿಗೆ, ವಿದ್ಯುತ್ ಪೂರೈಕೆ ಮುಂತಾದ ವಲಯಗಳಿಗೆ ಕೊಂಚ ತೊಂದರೆಯಾಗಿತ್ತು. ಪಶ್ಚಿಮ ಬಂಗಾಳದ ಹೌರಾ ಜಿಲ್ಲೆ ಇತರೆಡೆ ನಡೆದ ಪ್ರತಿಭಟನೆಗಳ ವೇಳೆ ಶಾಲಾ ಬಸ್ಸುಗಳ ಮೇಲೆ ಕಿರಾತಕರು ಕಲ್ಲು ತೂರಾಟ ನಡೆಸಿದರು.
ತಿರುವನಂತಪರದಲ್ಲಿ ಎಸ್ಬಿಐ ಶಾಖೆಯೊಂದರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ನಡೆಸಿ ದಾಂಧಲೆ ನಡೆಸಿದ್ದಾರೆ. ತಿರುವನಂತಪುರಂ-ಹೈದರಾಬಾದ್ಶಬರಿ ಎಕ್ಸ್ಪ್ರೆಸ್, ಕೊಟ್ಟಾಯಂ-ನಿಲಾಂಬುರ್, ವಯನಾಡ್ ಎಕ್ಸ್ಪ್ರೆಸ್ ರೈಲುಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮುಂಬೈ ಮಹಾನಗರ ಸಾರಿಗೆ ಇಲಾಖೆಯ 32,000 ನೌಕರರು ಪ್ರತಿಭಟನೆಗೆ ಇಳಿದಿದ್ದರಿಂದ ಇಡೀ ಮುಂಬೈಗೆ ಕೇವಲ 5 ಬಸ್ಸುಗಳು ಸಂಚಾರ ಸೇವೆ ನೀಡಿದವು. ಕಾರ್ಮಿಕ ಸಂಘಟನೆಗಳು ಇಲ್ಲದೆ ಇರುವ ವಿಚಾರದ ಬಗ್ಗೆ ಪ್ರತಿಭಟನೆ ನಡೆಸಿವೆ ಎಂದಿದ್ದಾರೆ ಸಚಿವ ಜೇಟ್ಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್ ನಿಂದ ವಿವರ ಕೇಳಿದ ಭಾರತ
Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್ ಹಾಲಿ ಸಂಸದ ನಮ್ಗ್ಯಾಲ್ ಗೆ ಕೊಕ್
Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ