ಸಿಡಿಲಾಘಾತಕ್ಕೆ ಪಾಕಿಸ್ಥಾನದಲ್ಲಿ 26 ಮಂದಿ ಸಾವು
Team Udayavani, Nov 15, 2019, 7:38 PM IST
ಕರಾಚಿ: ಪಾಕಿಸ್ಥಾನದ ಸಿಂಧ್ ಪ್ರಾಂತ್ಯದಲ್ಲಿ ಅಪ್ಪಳಿಸಿದ ಭಾರೀ ಸಿಡಿಲಿಗೆ ಸುಮಾರು 26 ಮಂದಿ ಮೃತಪಟ್ಟಿದ್ದಾರೆ.
ಭಾರೀ ಮಳೆಯೊಂದಿಗೆ ಈ ಭಾಗದಲ್ಲಿ ಸಿಡಿಲಪ್ಪಳಿಸಿದ್ದು, ಮಹಿಳೆಯರು, ಮಕ್ಕಳು ಮೃಪಟ್ಟಿದ್ದಾರೆ. ಇಲ್ಲಿನ ಥರ್ಪಾರ್ಕರ್ ಜಿಲ್ಲೆಯ ಮಿಥಿ, ಚ್ಚಚ್ಚಿ, ರಾಮ್ ಸಿಂಗ್ ಸುಧೋ ಗ್ರಾಮದಲ್ಲಿ ಸಿಡಿಲಿನ ಪರಿಣಾಮ ಗೋಚರವಾಗಿದೆ.
ಸುಮಾರು 16 ಮಂದಿಗೆ ಗಾಯಗಳಾಗಿದ್ದು ಅವರನ್ನು ಸನಿಹದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರಂಭದಲ್ಲಿ ಮೂರ್ನಾಲ್ಕು ಜನರು ಸಿಡಿಲಾಘಾತಕ್ಕೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಬಳಿಕ ಆಸ್ಪತ್ರೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಶವಗಳನ್ನು ಸ್ಥಳೀಯರು ತಂದಿದ್ದರು. ಇದರಿಂದ ಸ್ಥಳೀಯಾಡಳಿತಕ್ಕೆ ಭಾರೀ ಸಂಖ್ಯೆಯ ಜನರು ಮೃತಪಟ್ಟಿರುವುದು ಗೊತ್ತಾಗಿದೆ. ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ